ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯವು ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದಲ್ಲಿ ಇದೆ. ಪ್ರಸ್ತುತವಿರುವ ಗೋಪುರವನ್ನು 1568 ರಲ್ಲಿ ನಿರ್ಮಾಣ ಮಾಡಿದರು. ದೇವಾಲಯದ ಮೂಲ ವಿಗ್ರಹವನ್ನು 1208 ಸಾಲಿಗ್ರಾಮದ ಮೂಲಕ ತಯಾರು ಮಾಡಿದರು. ಪ್ರಸ್ತುತದಲ್ಲಿ ಗರ್ಭ ಗುಡಿಯಲ್ಲಿನ ದೇವರನ್ನು ಕಾಣಬೇಕಾದರೆ 3 ದ್ವಾರಗಳ ಮೂಲಕ ದರ್ಶನ ಪಡೆಯಬೇಕು.
ಆದಿ ಶೇಷನ ಮೇಲೆ ಪವಳಿಸಿದ ಹಾಗೆ ಕಾಣುವ ವಿಗ್ರಹವು, ಮೊದಲ ದ್ವಾರದಲ್ಲಿ ನಿಂತು ನೋಡಿದರೆ ಸ್ವಾಮಿಯ ತಲೆಯ ಭಾಗ, ಮಧ್ಯ ದ್ವಾರದಿಂದ ತಾವರೆಯನ್ನು ಕೈಯಲ್ಲಿ ಹಿಡಿದಿರುವ, ಕೊನೆಯ ದ್ವಾರದಲ್ಲಿ ಸ್ವಾಮಿಯ ಪಾದಗಳು ಕಾಣಿಸುತ್ತದೆ.
ಈ ದೇವಾಲಯವು ಪ್ರಸ್ತುತ ತ್ರಿವಾಂಕೊರ ರಾಜ ಕುಟುಂಬ ನಿರ್ವಹಣೆಯನ್ನು ನಡೆಸುತ್ತಿದೆ. ಆನಂತ ಪದ್ಮನಾಭಸ್ವಾಮಿ ದೇವಾಲಯ ಅತ್ಯಂತ ಪುರಾತನವಾದ ದೇವಾಲಯ. ಈ ದೇವಾಲಯದ ಹೆಸರಿನಿಂದಲೇ ತಿರುವನಂತರಪುರಕ್ಕೆ ಹೆಸರು ಬಂದಿತು. ಈ ದೇವಾಲಯವನ್ನು ಪಟ್ಟುವಿಟ್ಟಲ್ ಪಿಲ್ಲಮಾರ್ ಎಂಬ ನಾಯಾರ್ ಕುಟುಂಬವು ನಿರ್ವಹಿಸುತ್ತಿತ್ತು. ಕಾಲ ಉರುಳಿದ ನಂತರ ಈ ದೇವಾಲಯವು ಟ್ರಾವೆನೆ ಕೂರ್ ಸಂಸ್ಥಾಪಕನಾದ ಮಾರ್ತಾಂಡ ವರ್ಮ ಕೈ ಸೇರಿತು.
ಲೇಖನದ ಮೂಲಕ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಹಿಂದೆ ಇರುವ ರಹಸ್ಯಗಳ ಬಗ್ಗೆ ತಿಳಿಯೋಣ.
108 ದಿವ್ಯಕ್ಷೇತ್ರ
ಟ್ರಾವಂಕೊರ್ ರಾಜ ಕುಟುಂಬಕ್ಕೆ ಸೇರಿದವರು ಹಾಗೂ ಕುಲಶೇಖರ ಸನ್ಯಾಸಿ ಆಳ್ವಾರ್ ಸಂತತಿಯವರು. ಈ ದೇವಾಲಯದ ಶ್ರೀ ಮಹಾ ವಿಷ್ಣುವಿನ 108 ದಿವ್ಯದಶಗಳಲ್ಲಿ ಒಂದಾಗಿದೆ. 108 ದಿವ್ಯಾದಶ ಎಂದರೆ ಶ್ರೀ ಮಹಾವಿಷ್ಣುವಿನ ಒಂದು ದೇವಾಲಯದ ದಿವ್ಯಕ್ಷೇತ್ರ ಎಂದು ಅರ್ಥ.
PC:sreepadmanabhaswamytemple official website
ಪವಿತ್ರವಾದ ದೇವಾಲಯ
"ತಿರು ಅನಂತಪುರಂ" ಎಂದರೆ ಮಹಿಮಾನ್ವಿತ ದೇವತಾ ಮೂರ್ತಿ ಶ್ರೀ ಅನಂತ ಪದ್ಮಸ್ವಾಮಿ ಇರುವ ಪವಿತ್ರವಾದ ದೇವಾಲಯ ಎಂದು ಅರ್ಥ. ಈ ನಗರಕ್ಕೆ ಆನಂತಪುರಂ, ಶಯನಂತರಪುರಂ ಎಂದು ಸಹ ಕರೆಯುತ್ತಾರೆ. ಆನಂತ ಎಂದರೆ ಶ್ರೀ ಪದ್ಮನಾಭ ಸ್ವಾಮಿ ರೂಪವೇ. ಹಿಂದೂ ಧರ್ಮದಲ್ಲಿ ಭಗವಂತನ ರೂಪವನ್ನು ಸಚ್ಚಿದಾನಂತ ಎಂದು ಕರೆಯುತ್ತಾರೆ.
PC:sreepadmanabhaswamytemple official website
ತಿರುವನಂತ ಪುರಂ
ಕ್ರಿ.ಶ 16 ನೇ ಶತಮಾನದಲ್ಲಿ ಈ ದೇವಾಲಯದ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಿತು. ಆ ಸಮಯದಲ್ಲಿ ಈ ದೇವಾಲಯಕ್ಕೆ ಸುಂದರ ಗೋಪುರ ನಿರ್ಮಾಣ ನಡೆಯಿತು.
PC:Shishirdasika
ತಿರುವಟ್ರಾರ್ ಶ್ರೀ ಆದಿಕೇಶವ ಪೆರುಮಾಳ್ ದೇವಾಲಯ
ಈ ದೇವಾಲಯ ಪ್ರಸಿದ್ದ ತಿರುವಟ್ರಾರ್ ಶ್ರಿ ಆದಿ ಕೇಶವ ಪೆರುಮಾಳ್ ದೇವಾಲಕ್ಕೆ ಪ್ರತಿರೂಪ ಎಂದು ಕೆಲವರು ಹೇಳುತ್ತಾರೆ. ಈ ದೇವಾಲಯದ ಕಾರಣಕ್ಕಾಗಿಯೇ ತಿರುವನಂತಪುರಂ ಎಂಬ ಹೆಸರು ನಗರಕ್ಕೆ ಇಡಲಾಯಿತು.
PC:rusticus80
ಬಲರಾಮದೇವನು
ಶ್ರೀ ಮತ್ ಭಾಗವತದಲ್ಲಿ ಬಲರಾಮದೇವನು ತನ್ನ ತೀರ್ಥಯಾತ್ರೆ ಭಾಗವಾಗಿ ಫಾಲ್ಗುಣದಂದು ಈ ದೇವಾಲಯಕ್ಕೆ ಬಂದು ದರ್ಶನ ಮಾಡಿದನಂತೆ. ಇಲ್ಲಿ ಇರುವ ಪದ್ಮ ತೀರ್ಥದಲ್ಲಿ ಸ್ನಾನ ಮಾಡಿ ಹಾಗು 10,000 ಗೋವುಗಳನ್ನು ಬ್ರಾಹ್ಮಣರಿಗೆ ದಾನವಾಗಿ ನೀಡಿದನಂತೆ.
PC:Maheshsudhakar
ಪದ್ಮನಾಭಸ್ವಾಮಿ ಅನಂತಶಯನಂ
ದೇವಾಲಯ ಗರ್ಭಗುಡಿಯಲ್ಲಿ ಪ್ರಧಾನ ದೈವವಾದ ಪದ್ಮನಾಭ ಸ್ವಾಮಿ ಅನಂತರಶಯನ ಭಂಗಿಯಲ್ಲಿ ನೆಲೆಸಿದ್ದಾನೆ. ಟ್ರಿವಾಂಕೊರ್ ಮಹಾರಾಜ ತನಗೆ ತಾನೆ ಪದ್ಮನಾಭ ದಾಸ ಎಂದು ನಾಮಕರಣ ಮಾಡಿಕೊಂಡನಂತೆ.
PC:Ks.mini
ಟನ್ನು ಗಟ್ಟಲೆ ಬಂಗಾರ ಅಭರಣ
ಇಂದಿನವರೆವಿಗೂ ಪ್ರಪಂಚದಲ್ಲಿಯೇ ಅತ್ಯಂತ ಸಂಪತ್ತನ್ನು ಹೊಂದಿರುವ ದೇವಾಲಯ ಎಂದರೆ ತಿರುಮಲ ಶ್ರೀನಿವಾಸ ದೇವಾಲಯ. ಈ ಮಧ್ಯೆ ಕಾಲದಲ್ಲಿ ಕೇರಳದ ತಿರುವನಂತ ಪುರದಲ್ಲಿನ ಅನಂತಪದ್ಮ ನಾಭ ಸ್ವಾಮಿಯ ದೇವಾಲಯದಲ್ಲಿ ಬೆಳಕಿಗೆ ಬಂದ ಅನಂತ ಸಂಪತ್ತು, ವಜ್ರ, ವೈಡುರ್ಯ, ಟನ್ನುಗಳಷ್ಟು ಬಂಗಾರ ಅಭರಣಗಳು ಲೆಕ್ಕವೇ ಹಾಕಲಾಗದ ಸಂಪತ್ತನ್ನು ಹೊಂದಿ ಮೊದಲ ಸ್ಥಾನದಲ್ಲಿದೆ.
PC:Aravind Sivaraj
ನೆಲ ಮಾಳಿಗೆ
ಇನ್ನೂ ಬೆಳಕಿಗೆ ಬರಬೇಕಾಗಿರುವ ಸಾಕಷ್ಟು ಸಂಪತ್ತುಗಳಿವೆ. ಅನಂತ ಪದ್ಮನಾಭ ಸ್ವಾಮಿಯ ದೇವಾಲಯದ ನೆಲ ಮಾಳಿಗೆಯಲ್ಲಿ ಇನ್ನು ಒಂದು ಕೊಠಡಿಯನ್ನು ತೆರೆದಿಲ್ಲ. ಅಲ್ಲಿ ಇನ್ನಷ್ಟೊ ಸಂಪತ್ತು ಇರಬೇಕು ಎಂದು ಊಹಿಸುತ್ತಿರುವಾಗ. ಆದರೆ ಆ ಕೊಠಡಿಯನ್ನು ತೆರೆಯುವಂತಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸುತ್ತಿದರಂತೆ.
PC:Ilya Mauter
ಸರ್ಪಬಂಧನ
ಈ ವಿಶೇಷವಾದ ಕೊಠಡಿಗೆ ಸರ್ಪಬಂಧನವಿದೆ. ಈ ಕೊಠಡಿಯನ್ನು ತೆರಯಬೇಕಾದರೆ ಕೇವಲ ಮಂತ್ರ ಶಕ್ತಿಯಿಂದ ಮಾತ್ರ ಸಾಧ್ಯವಂತೆ. ಹಾಗೆನಾದರೂ ಬಲವಂತವಾಗಿ ತೆರೆಯಲು ಪ್ರಯತ್ನ ಪಟ್ಟರೆ ಜಗತ್ ಪ್ರಳಯವಾಗುತ್ತದೆ ಎಂದು ಪಂಡಿತರು ತಿಳಿಸುತ್ತಿದ್ದಾರೆ. ಅಸಲಿಗೆ ಆ ಕೊಠಡಿಯಲ್ಲಿ ಅಂತಹದೇನಿದೆ? ಎಂಬುದೇ ಎಲ್ಲರ ಕುತೂಹಲ.
ಟ್ರಾವೆಂಕೂರ್
ಆದರೆ ನೂರಾರು ವರ್ಷಗಳಿಂದಲೂ ಆ ಕುಟುಂಬಕ್ಕೆ ಸೇರಿದ ರಾಜ ತಿರುನಾಳ್ ಬಲರಾಮ ವರ್ಮನನ್ನು ಅಂದಿನ ಸರ್ಕಾರ ರಾಜ ಪ್ರಮುಖನಾಗಿ ನೇಮಿಸಿದರು. ಆ ರಾಜ ಕುಟುಂಬಿಕರೇ ಈ ದೇವಾಲಯ ನಿರ್ವಹಣ ಟ್ರಸ್ಟಿಗಳಾಗಿ ಮುಂದುವರೆಸುತ್ತಿದ್ದಾರೆ.
PC:Ilya Mauter
ಮಾಹಿಮಾನ್ವಿತ ಕ್ಷೇತ್ರ
ಈ ಸಂಪತ್ತು ಬೆಳಕಿಗೆ ಬಂದ ನಂತತ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಸಂಪತ್ತು ಹೊಂದಿರುವ ಕ್ಷೇತ್ರ ಎಂದು ಪ್ರಖ್ಯಾತವಾಯಿತು. ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಂಪತ್ತುನ್ನು ಹೊರತು ಪಡಿಸಿದರೆ, ಅನಂತ ಪದ್ಮನಾಭ ಸ್ವಾಮಿ ಅತ್ಯಂತ ಮಹಿಮಾನ್ವಿತವಾದ ದೇವತಾ ಮೂರ್ತಿಯಾಗಿದ್ದಾನೆ.
PC:Aravind Sivaraj
ಶ್ರೀ ಕೃಷ್ಣ ದೇವರಾಯನ ಕಾಲದ ನಾಣ್ಯಗಳು
16 ನೇ ಶತಮಾನದ ಶ್ರೀ ಕೃಷ್ಣ ದೇವರಾಯ ಕಾಲದ ನಾಣ್ಯಗಳು, ಈಸ್ಟ್ ಇಂಡಿಯಾ ಕಾಲದ ನಾಣ್ಯಗಳು, ನೆಪೋಲಿಯನ್ ಬೊನೋ ಪಾರ್ಟೆ ಕಾಲದ ನಾಣ್ಯಗಳು ಈ ದೇವಾಲಯದಲ್ಲಿ ದೊರೆತಿವೆ.
PC:Manveechauhan
ಸಂಪತ್ತು
ಅಷ್ಟೇ ಅಲ್ಲದೇ ಚಿತ್ರ ವಿಚಿತ್ರವಾದ ವಸ್ತುಗಳು ಸಾಕಷ್ಟು ಇವೆ. ಬಂಗಾರದ ತೆಂಗಿನಕಾಯಿ, ಬಂಗಾರದ ಶಂಖಗಳು ಹೀಗೆ ಇನ್ನೂ ಹಲವಾರು ವಿಧ ವಿಧವಾದ ವಸ್ತುಗಳು ಬೆಳಕಿಗೆ ಬಂದಿತು. 5 ಮಾಳಿಗೆಯಲ್ಲಿನ ಈ ಸಂಪತ್ತು ಮತ್ತೇ 6 ನೇ ಮಾಳಿಗೆ ಸಂಪತ್ತು ಎನ್ನು ಎಷ್ಟು ಇರಬಹುದು ಊಹಿಸಿ.
PC:Ilya Mauter
ಸಮೀಪ ಪ್ರದೇಶಗಳು
ಈ ದೇವಾಲಯಕ್ಕೆ ಸಮೀಪದಲ್ಲಿ ಯಾನ್ಯಮಲೈ, ಅಗಸ್ತ್ಯ ಪರ್ವತ, ಪರ್ವತಗಳು ಇನ್ನೂ ಹಲವಾರು.
PC:Hans A. Rosbach
ಮಾರ್ಗ
ತಿರುವನಂತಪುರಂ ಕೇರಳ ರಾಷ್ಟ್ರ ರಾಜಧಾನಿ. ತಿರುವನಂತಪುರಂ ಅನ್ನು ತ್ರಿವೆಂಡ್ರಂ ಎಂದೂ ಸಹ ಕರೆಯುತ್ತಾರೆ. ಚೆನ್ನೈ ನಿಂದ ತಿರುವನಂತಪುರಕ್ಕೆ ರೈಲು ಮಾರ್ಗವಿದೆ. ತಿರುವನಂತಪುರಂ ಸೆಂಟ್ರಲ್ ಸ್ಟೇಷನ್ನಿಂದ 1 ಕಿ,ಮೀ ಅಂತರದಲ್ಲಿದೆ.