ಬೇಸಿಗೆಯ ಬಿಸಿಗೆ ಸ್ವಲ್ಪ ತಂಪಾದ ಅನುಭವ ನೀಡುವ ತಾಣವೆಂದರೆ ನೆಲ್ಲಿಯಂಪತಿ. ದಟ್ಟ ಅರಣ್ಯದ ಗಿರಿ-ಶಿಖರಗಳನ್ನು ಒಳಗೊಂಡಿರುವ ಈ ತಾಣ ಸದಾಕಾಲ ಮಂಜಿನ ಹೊಗೆಯಿಂದ ಕೂಡಿರುತ್ತದೆ. ಇದು ಕೇರಳದ ಪಾಲಕ್ಕಾಡ್ನಿಂದ 52 ಕಿ.ಮೀ. ದೂರದಲ್ಲಿದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಬೆಟ್ಟಗಳ ಸಾಲು ಕಿತ್ತಳೆ, ಕಾಫಿ, ಚಹಾ ಹಾಗೂ ಏಲಕ್ಕಿಯ ತೋಟಗಳಿಂದ ಆವೃತ್ತಗೊಂಡಿವೆ. ಅದ್ಭುತ ನೈಸರ್ಗಿಕ ಸಿರಿಯನ್ನು ಒಳಗೊಂಡಿರುವ ಈ ತಾಣಕ್ಕೆ ಬಡವರ ಊಟಿ ಎಂದು ಕರೆಯುತ್ತಾರೆ.
ಬೆಂಗಳೂರಿನಿಂದ 465.1 ಕಿ.ಮೀ. ದೂರದಲ್ಲಿರುವ ಈ ಊರಿಗೆ 8 ತಾಸುಗಳ ಪ್ರಯಾಣ ಮಾಡಬೇಕು. ಅಮೋಘವಾದ ಐತಿಹಾಸಿಕ, ನೈಸರ್ಗಿಕ ಹಾಗೂ ಪವಿತ್ರ ಕ್ಷೇತ್ರಗಳನ್ನು ಒಳಗೊಂಡಿರುವ ಈ ತಾಣಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು. ಈ ಸುಂದರ ಪ್ರದೇಶಕ್ಕೆ ಬಂದರೆ ಮರೆಯದೆ ನೋಡಬೇಕಾದ ತಾಣಗಳ ಪರಿಚಯ ಇಲ್ಲಿದೆ.
ಪರಾಂಬಿಕುಲಂ
ಸದಾ ಹಸಿರಾಗಿರುವ, ದಟ್ಟ ಅರಣ್ಯ ಪ್ರದೇಶವಾದ ಈ ತಾಣದಲ್ಲಿ ವನ್ಯಜೀವಿಧಾಮವಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಪರಿಗಣಿಸಲಾಗಿದೆ. 272 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವ ಈ ವನ್ಯಧಾಮದ ಸುತ್ತಲೂ ನೀರಿನ ಹರಿವಿದೆ. ಅಪರೂಪದ ಪ್ರಾಣಿ ಸಂಕುಲಗಳನ್ನು ಇಲ್ಲಿ ಕಾಣಬಹುದು. ಸಾಗವಾನಿ ಮರಗಳಿಂದ ಕೂಡಿರುವ ಈ ಊರಿನಲ್ಲಿ ಟ್ರೀ ಹೌಸ್ಗಳಿವೆ. ಇವು ಮರೆಯಲಾಗದ ಸುಂದರ ಅನುಭವ ನೀಡುವವು. ಇದರೊಟ್ಟಿಗೆ ನೀರಿನ ಹರಿವಲ್ಲಿ ತೆಪ್ಪದ ಪ್ರಯಾಣವನ್ನೂ ಮಾಡಬಹುದು.
PC: flickr.com
ಮಯಿಲಾದಂಪುರ
ಪೋತೊಂಡಿ ಅಣೆಕಟ್ಟು
ಕುಡಿಯುವ ನೀರು ಹಾಗೂ ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾದ ಈ ಅಣೆಕಟ್ಟು ಪೋತೊಂಡಿ ಗ್ರಾಮದಲ್ಲಿದೆ. ಎರಡು ನದಿಗಳಿಗೆ ತ್ವರಿತವಾಗಿ ನಿರ್ಮಿಸಲಾದ ಈ ಅಣೆಕಟ್ಟು 19ನೇ ಶತಮಾನದ ಇತಿಹಾಸವನ್ನು ಹೊಂದಿದೆ. ಬೆಲ್ಲ ಹಾಗೂ ತ್ವರಿತ ಸುಣ್ಣದ ಮಿಶ್ರಣದಿಂದ ನಿರ್ಮಿಸಲಾಗಿದೆ. ಭಾರತದ ಅತ್ಯಂತ ಪುರಾತನದ ಅಣೆಕಟ್ಟು ಎನ್ನುವ ಹಿರಿಮೆಯನ್ನು ಹೊಂದಿದೆ. ಸಿಮೆಂಟ್ ಬಳಕೆ ಮಾಡದೆ ನಿರ್ಮಾಗೊಂಡ ಏಷ್ಯಾದ 2ನೇ ಅಣೆಕಟ್ಟು ಇದು. ಇದರ ಒಂದು ಭಾಗದಲ್ಲಿ ಸುಂದರವಾದ ವ್ಯವಸಾಯ ಭೂಮಿಯಿದ್ದರೆ ಇನ್ನೊಂದು ಭಾಗದಲ್ಲಿ ವಿನೂತನ ಉದ್ಯಾನವನಗಳನ್ನು ಒಳಗೊಂಡಿದೆ.
PC: flickr.com
ಸೀತಾಕುಂಡ
ನೆಲ್ಲಿಯಂಪತಿಯಿಂದ 8 ಕಿ.ಮೀ. ದೂರದಲ್ಲಿರುವ ಸೀತಾಕುಂಡ ವೀಕ್ಷಣಾ ತಾಣ ಎಂದು ಗುರುತಿಸಲಾಗಿದೆ. ಚಾರಣದ ಮೂಲಕ ಈ ಬೆಟ್ಟದ ತುದಿಗೆ ಬಂದರೆ ಅದ್ಭುತ ಪ್ರಕೃತಿ ದೃಶ್ಯವನ್ನು ಸೆರೆಹಿಡಿಯಬಹುದು. ರಾಮಾಯಣದ ಕಾಲದಲ್ಲಿ ರಾಮ, ಲಕ್ಷ್ಮಣ ಹಾಗೂ ಸೀತೆ ಇಲ್ಲಿಯೇ ಒಮ್ಮೆ ತಂಗಿದ್ದರು. ಹಾಗಾಗಿಯೇ ಇದಕ್ಕೆ ಸೀತಾಕುಂಡ ಎನ್ನುತ್ತಾರೆ ಎನ್ನುವ ನಂಬಿಕೆಯಿದೆ.
PC: flickr.com
ಸೈಲೆಂಟ್ ವ್ಯಾಲಿ
ಮೀನವಲ್ಲಂ ಜಲಪಾತ
ಪಾಲಕ್ಕಾಡ್ ಜಿಲ್ಲೆಯ ಸುಂದರ ಜಲಪಾತಗಳಲ್ಲಿ ಇದು ಒಂದು. 45 ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆಯ ಹತ್ತಿರವೇ ಹೋಗಿ ಜಲಕ್ರೀಡೆ ಆಡಬಹುದು. ಬಂಡೆಗಳ ಮಧ್ಯೆ ರಮಣೀಯವಾಗಿ ಹರಿದು ಬರುವ ಸೊಬಗು ಯಾತ್ರಿಕನ ಮನಗೆಲ್ಲುವುದು. ದಟ್ಟ ಅರಣ್ಯದ ನಡುವೆ ಈ ಜಲಧಾರೆಯನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ.
PC: flickr.com
ಮಲಂಪುಳ ಉದ್ಯಾನ
ಪಾಲಕ್ಕಾಡ್ ನಗರ ಪ್ರದೇಶದಿಂದ 8 ಕಿ.ಮೀ. ದೂರದಲ್ಲಿರುವ ಈ ಉದ್ಯಾನ ಐಷಾರಾಮೀ ಹುಲ್ಲಿನ ತೋಟಗಳನ್ನು ಒಳಗೊಂಡಿದೆ. ಇದರಲ್ಲಿ ಮಕ್ಕಳ ಉದ್ಯಾನ, ಕಾರಂಜಿ, ಅದ್ಭುತ ಕೆರೆ ಹಾಗೂ ಎರಡು ತೂಗು ಸೇತುವೆಗಳಿವೆ. ಇದು ಪ್ರತಿದಿನ ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ತೆರೆದಿರುತ್ತದೆ.
PC: flickr.com