ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ ಒಂದು ಹಿತಕರವಾದ ಪ್ರವಾಸಿ ಆಕರ್ಷಣೆಯಾಗಿದೆ.
ಒತ್ತಡದ ಜೀವನ ನಡೆಸುವವರಿಗೆ ಚೈತನ್ಯ ಕರುಣಿಸುವ ಈ ಕೆರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದ ಫಲವಾಗಿ ರೂಪಗೊಂಡಿದೆ. 1864 ರಲ್ಲಿ ನಗರದ ಹೊರವಲಯದ ಕೃಷಿ ಭೂಮಿಗೆ ನೀರೋದಗಿಸುವ ದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಕೆರೆ ಇಂದು ಪ್ರವಾಸಿ ಆಕರ್ಷಣೆಯಾಗಿದೆ.
ನೀವು ಓದಲು ಬಯಸಬಹುದಾದ ಲೇಖನ: ಮೈಸೂರಿನ ಕಾರಂಜಿ ಕೆರೆ
ಕುಕ್ಕರಹಳ್ಳಿ ಕೆರೆ:
ಹಿಂದೆ ಈ ಕೆರೆಯಿಂದ ವಸತಿ ಪ್ರದೇಶಗಳಿಗೆ ನೀರನ್ನು ಸರಬರಾಜು ಸಹ ಮಾಡಲಾಗುತ್ತಿತ್ತು. ಕಾಲಕ್ರಮೇಣ ತ್ಯಾಜ್ಯ, ಚರಂಡಿ ನೀರು ಇದರಲ್ಲಿ ಸೇರ್ಪಡೆಗೊಂಡು ಕೆರೆಯು ತನ್ನ ನೈಜ ಸ್ವಚ್ಛತೆಯನ್ನು ಕಳೆದುಕೊಂಡಿತು.
ಚಿತ್ರಕೃಪೆ: mysore.nic.in
ಕುಕ್ಕರಹಳ್ಳಿ ಕೆರೆ:
ಅಂಶ ತಿಳಿದ ಕೆಲ ಸಂಘ ಸಂಸ್ಥೆಗಳು ಮುಂದೆ ಬಂದು ಇದರ ಶುದ್ಧಿಕರಣಕ್ಕೆ ಕೈ ಜೋಡಿಸಿದರು. ಅಲ್ಲದೆ ಏಷಿಯಾ ಡೆವೆಲಪ್ಮೆಂಟ್ ಬ್ಯಾಂಕ್ ಅವರ ಹಣ ಸಹಕಾರದೊಂದಿಗೆ ಕರ್ನಾಟಕ ಅರ್ಬನ್ ಇನ್ಫ್ರಾ ಸ್ಟ್ರಕ್ಚರ್ ಡೆವೆಲಪ್ಮೆಂಟ್ ಲಿಮಿಟೆಡ್ ಹಾಗೂ ಮೈಸೂರು ವಿಶ್ವವಿದ್ಯಾಲಯ ಜಂಟಿಯಾಗಿ ಈ ಕೆರೆಯ ಅಭಿವೃದ್ಧಿಯ ಹೊಣೆ ಹೊತ್ತರು.
ಚಿತ್ರಕೃಪೆ: mysore.nic.in
ಕುಕ್ಕರಹಳ್ಳಿ ಕೆರೆ:
ತತ್ಫಲವಾಗಿ ಇಂದು ಕೆರೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಗಾಳಿ ಸೇವನೆ ಮಾಡುವವರ, ಜಾಗಿಂಗ್ ಮಾಡುವವರ ಪಾಲಿಗೆ ಸ್ವರ್ಗವಗಿದೆ.
ಚಿತ್ರಕೃಪೆ: mysoredasara.gov.in
ಕುಕ್ಕರಹಳ್ಳಿ ಕೆರೆ:
ಮತ್ತೊಂದು ವಿಷಯವೆಂದರೆ ವಲಸೆ ಹೋಗುವ ಹಕ್ಕಿಗಳ ಆಶ್ರಯ ತಾಣವಾಗಿಯೂ ಸಹ ಈ ಕೆರೆ ಅತಿ ಪ್ರಸಿದ್ಧವಾಗಿದೆ. "ಬರ್ಡ್ ಲೈಫ್ ಇಂಟರ್ ನ್ಯಾಷನಲ್" ಎಂಬ ಸಂಸ್ಥೆಯು ಪ್ರಮುಖ ಪಕ್ಷಿ ವೀಕ್ಷಣಾ ತಾಣಗಳ ಪಟ್ಟಿಯಲ್ಲಿ ಈ ಕೆರೆಯನ್ನೂ ಸೇರಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯೂ ಹೌದು.
ಚಿತ್ರಕೃಪೆ: Ravinder M A
ಕುಕ್ಕರಹಳ್ಳಿ ಕೆರೆ:
ಅದರಲ್ಲೂ ವಿಶೇಷವಾಗಿ ಚಳಿಗಾಲದ ಸಂದರ್ಭದಲ್ಲಿ ಈ ಕೆರೆ ಪ್ರದೇಶದಲ್ಲಿ ಸಾಕಷ್ಟು ವೈವಿಧ್ಯಮಯ ಹಕ್ಕಿಗಳ ಚಿಲಿಪಿಯನ್ನು ಕೇಳಿ ಆನಂದಿಸಬಹುದು.
ಚಿತ್ರಕೃಪೆ: Vishwas Krishna
ಕುಕ್ಕರಹಳ್ಳಿ ಕೆರೆ:
ಕೆರೆಯ ದಂಡೆಗುಂಟ ದಾರಿಯು ಸುಮಾರು 4.5 ಕಿ.ಮೀ ಉದ್ದವನ್ನು ಹೊಂದಿದ್ದು ಹಾಯಾಗಿ ವಿಹರಿಸುತ್ತ, ಇಷ್ಟವಿದ್ದರೆ ಕೆರೆಯ ಅಕ್ಕ ಪಕ್ಕದಲ್ಲಿ ಅಲ್ಲಲ್ಲಿರುವ ಕಲ್ಲಿನ ಕಟ್ಟೆಗಳ ಮೇಲೆ ಹಾಗೆ ಸುಮ್ಮನೆ ಕುಳಿತು ಪ್ರದೇಶದ ಸೌಂದರ್ಯವನ್ನು ಕಣ್ಣಾರೆ ಸವಿಯಬಹುದು.
ಚಿತ್ರಕೃಪೆ: Sushma R
ಕುಕ್ಕರಹಳ್ಳಿ ಕೆರೆ:
ಹಿನ್ನಿಲೆಯಲ್ಲಿರುವ ಚಾಮುಂಡಿ ಬೆಟ್ಟವಾಗಲಿ, ಅಥವಾ ಕಣ್ಣಳತೆ ದೂರದಲ್ಲಿ ಗೋಚರಿಸುವ ಮೈಸೂರಿನ ಪ್ರಮುಖ ಸ್ಮಾರಕ ಭವನಗಳಾಗಲಿ ಕಣ್ಣಿಗೆ ತಂಪನ್ನು ಎರೆಯುತ್ತವೆ.
ಚಿತ್ರಕೃಪೆ: chandanlog
ಕುಕ್ಕರಹಳ್ಳಿ ಕೆರೆ:
ನಗರದ ರೈಲು ನಿಲ್ದಾಣದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಈ ಕೆರೆಗೆ ರಿಕ್ಷಾ ಅಥವಾ ಬಾಡಿಗೆ ಟ್ಯಾಕ್ಸಿಗಳಿಂದ ಸುಲಭವಾಗಿ ತಲುಪಬಹುದು.
ಚಿತ್ರಕೃಪೆ: innacoz
ಕುಕ್ಕರಹಳ್ಳಿ ಕೆರೆ:
ಮಾನಸಗಂಗೋತ್ರಿ (ಮೈಸೂರು ವಿವಿ ಆವರಣ) ಹಾಗೂ ಕಲಾಮಂದಿರ (ರಂಗಾಯಣ) ಗಳ ಪಕ್ಕದಲ್ಲಿ ಸ್ಥಿತವಿರುವ ಈ ಕೆರೆಯು ಮುಕ್ತ ಪ್ರವೇಶ ಹೊಂದಿದ್ದು ಬೆಳಿಗ್ಗೆ ಆರರಿಂದ ಒಂಬತ್ತು ಘಂಟೆಯವರೆಗೂ ಸಂಜೆ ನಾಲ್ಕರಿಂದ ಏಳು ಘಂಟೆಯವರೆಗೂ ಸಾರ್ವಜನಿಕರಿಗಾಗಿ ತೆರೆದಿರುತ್ತದೆ.
ಚಿತ್ರಕೃಪೆ: innacoz
ಕುಕ್ಕರಹಳ್ಳಿ ಕೆರೆ:
ಕುಕ್ಕರಹಳ್ಳಿ ಕೆರೆಯ ಅಮೋಘ ಸೌಂದರ್ಯ.
ಚಿತ್ರಕೃಪೆ: innacoz
ಕುಕ್ಕರಹಳ್ಳಿ ಕೆರೆ:
ಕುಕ್ಕರಹಳ್ಳಿ ಕೆರೆಯ ಅಮೋಘ ಸೌಂದರ್ಯ.
ಚಿತ್ರಕೃಪೆ: Akhilesh Ravishankar