Search
  • Follow NativePlanet
Share
» »ಸೀತಾ ದೇವಿಗೆ ಮುಡಿಪಾದ ಅದ್ಭುತಗಳು!

ಸೀತಾ ದೇವಿಗೆ ಮುಡಿಪಾದ ಅದ್ಭುತಗಳು!

ರಾಮಾಯಣದ ಪ್ರಮುಖ ಪಾತ್ರಧಾರಿ ಹಾಗೂ ರಾಮನ ಮಡದಿಯಾದ ಸೀತೆಗೆಂದು ಮುಡಿಪಾದ ಕೆಲವು ಅಪರೂಪದ ಸ್ಥಳಗಳು ಭಾರತ ಹಾಗೂ ನೆರೆಹೊರೆಯ ದೇಶದಲ್ಲಿ ಕಂಡುಬರುತ್ತವೆ

By Vijay

ರಾಮಾಯಣದ ಪ್ರಮುಖ ಪಾತ್ರಧಾರಿ ಹಾಗೂ ಶ್ರೀರಾಮಚಂದ್ರನ ಮಡದಿಯಾದ ಸೀತೆಯು ಹಿಂದು ಸಂಸ್ಕೃತಿಯಲ್ಲಿ ಪವಿತ್ರ ಸ್ತ್ರೀಯಾಗಿಯೂ, ಪರಮ ಪತಿವೃತೆಯಾಗಿಯೂ, ಆದರ್ಶ ಮಾತೆಯಾಗಿಯೂ ಸ್ತ್ರೀತನದ ದೈವತ್ವವನ್ನು ಸಾರಿ ಸಾರಿ ಹೇಳುತ್ತಾಳೆ. ಅದರಂತೆ ಸೀತಾ ಮಾತೆಯ ಮಕ್ಕಳಾದ ಲವ ಹಾಗೂ ಕುಶರೂ ಸಹ ಚಿಕ್ಕ ವಯಸ್ಸಿನಲ್ಲೆ ಅಪ್ರತಿಮ ಶೂರರಾಗಿಯೂ, ಆದರ್ಶ ಮಕ್ಕಳಾಗಿಯೂ, ಧರ್ಮದ ಪರರಾಗಿಯೂ ಗಮನಸೆಳೆಯುತ್ತಾರೆ.

ವನವಾಸದಲ್ಲಿ ರಾಮ ಭೇಟಿ ನೀಡಿದ್ದ ಸ್ಥಳಗಳು!

ಇಂದಿಗೂ ಆದರ್ಶ ಪತ್ನಿ, ಆದರ್ಶ ತಾಯಿ, ಆದರ್ಶ ಮಗಳು ಹಾಗೂ ಆದರ್ಶ ಸ್ತ್ರೀಯನ್ನಾಗಿ ಸೀತಾ ದೇವಿಯನ್ನು ಪರಿಗಣಿಸಲಾಗುತ್ತದೆ. ಸೀತೆಯನ್ನು ದೇವಿಯ ಸ್ವರೂಪವೆಂದೆ ಹಿಂದುಗಳಲ್ಲಿ ಪರಿಗಣಿಸಲಾಗುತ್ತದೆ. ಆದಾಗ್ಯೂ ಸೀತಾ ದೇವಿಗೆ ಮುಡಿಪಾದ ದೇವಾಲಯಗಳಾಗಲಿ ಅಥವಾ ಸ್ಥಳಗಳಾಗಲಿ ಸಿಗುವುದು ಒಂದು ಅಪರೂಪವೆ ಹೌದು. ಪ್ರಸ್ತುತ ಲೇಖನದಲ್ಲಿ ಸೀತಾ ದೇವಿಗೆಂದೆ ಪ್ರತ್ಯೇಕವಾಗಿ ಮುಡಿಪಾದ ಕೆಲವು ಧಾರ್ಮಿಕ ತಾಣಗಳ ಕುರಿತು ತಿಳಿಸಲಾಗಿದೆ. ಈ ಸ್ಥಳಗಳ ಕುರಿತು ಬಹಳಷ್ಟು ಜನರಿಗೆ ತಿಳಿದೆ ಇಲ್ಲ. ಅಷ್ಟೊಂದು ಅಪರೂಪದಲ್ಲಿ ಅಪರೂಪ ಎಂಬಂತಿವೆ ಈ ಸ್ಥಳಗಳು.

ಮಿಥಿಲಾ

ಮಿಥಿಲಾ

ಇಂದಿನ ನೇಪಾಳ ದೇಶದ ಮಿಥಿಲಾ ಪ್ರದೇಶದಲ್ಲಿರುವ ಈ ಭವ್ಯ ದೇವಾಲಯವು ಜಾನಕೆ ಮಾತೆಗೆ ಅಂದರೆ ಸೀತಾ ದೇವಿಗೆ ಮುಡಿಪಾದ ದೇವಾಲಯವಾಗಿದೆ. ಹಿಂದೆ ಈ ಪ್ರದೇಶವನ್ನು ಜನಕರಾಜನು ಆಳುತ್ತಿದ್ದ. ಅವನ ಮಗಳ ಹೆಸರೆ ಜಾನಕಿ ಅರ್ಥಾ ರಾಮನ ಮಡದಿಯಾದ ಸೀತಾ ದೇವಿ.

ಚಿತ್ರಕೃಪೆ: Adutta.np

ವಾಸ್ತುಶೈಲಿ

ವಾಸ್ತುಶೈಲಿ

ಇಂದು ಇದು ಭವ್ಯ ಅರಮನೆಯ ರೀತಿ ಕಂಗೊಳಿಸುತ್ತದೆ. ವಿಶೇಷವೆಂದರೆ ರಜಪೂತ ಶೈಲಿಯ ವಾಸ್ತುಶೈಲಿಯನ್ನು ಇಲ್ಲಿ ಹೇರಳವಾಗಿ ಕಾಣಬಹುದು. ನಿಜ ಹೇಳೆಬೇಕೆಂದರೆ ಈ ಮಂದಿರವನ್ನು ರಜಪೂತರ ಇಲ್ಲಿಯವರೆಗಿನ ಅತಿ ಸುಂದರ ವಾಸ್ತುಶೈಲಿಯ ರಚನೆ ಎಂದು ಪರಿಗಣಿಸಲಾಗುತ್ತದೆ.

ಚಿತ್ರಕೃಪೆ: Abhishek Dutta

ವಿವಾಹ ಪಂಚಮಿ

ವಿವಾಹ ಪಂಚಮಿ

ರಾಮನವಮಿ ಹಾಗೂ ಇತರೆ ಕೆಲವು ಪ್ರಮುಖ ಉತ್ಸವಗಳ ಸಂದರ್ಭದಲ್ಲಿ ಈ ವಿಶಾಲ ದೇವಾಲಯವು ಆಕರ್ಷಕವಾಗಿ ಅಲಂಕರಿಸಲ್ಪಟ್ಟಿರುತ್ತದೆ. ಅಲ್ಲದೆ ವಿವಾಹ ಪಂಚಮಿಯಂದು (ಸೀತಾ ದೇವಿಯ ಮದುವೆ) ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Abhishek Dutta

ಮದುವೆಯಾದ ಸ್ಥಳ

ಮದುವೆಯಾದ ಸ್ಥಳ

ಇದು ಭಾರತಕ್ಕೆ ಹೊಂದಿಕೊಂಡಂತೆ ಇರುವ ನೇಪಾಳದಲ್ಲಿರುವುದರಿಂದ ಈ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಾರೆ. ಈ ದೇವಾಲಯದ ಬಳಿಯಲ್ಲೆ ಇರುವ ಒಂದು ದೇವಾಲಯದಲ್ಲಿ ಸೀತಾ ದೇವಿಯು ತನ್ನ ಸ್ವಯಂವರದಲ್ಲಿ ಶ್ರೀರಾಮಚಂದ್ರನನ್ನು ಆಯ್ದು ಮದುವೆ ಮಾಡಿಕೊಂಡಳೆಂಬ ಪ್ರತೀತಿಯಿದೆ.

ಚಿತ್ರಕೃಪೆ: Bijaya2043

ರಾಣಿ ನಿರ್ಮಿಸಿದ್ದಾಳೆ

ರಾಣಿ ನಿರ್ಮಿಸಿದ್ದಾಳೆ

1910 ರಲ್ಲಿ ಈ ದೇವಾಲಯವನ್ನು ಭಾರತದ ತಿಕಂಗಡ್ ಸಾಮ್ರಾಜ್ಯದ ರಾಣಿ ವೃಷ ಭಾನು ಎಂಬಾಕೆಯು ನಿರ್ಮಿಸಿದಳೆಂದು ಇತಿಹಾಸದಿಂದ ತಿಳಿದುಬರುತ್ತದೆ. ಈ ದೇವಾಲಯದ ನಿರ್ಮಾಣಕ್ಕೆ ಆದ ಖರ್ಚು ಒಂಭತ್ತು ಲಕ್ಷ ಒಂಭತ್ತು ಸಾವಿರ ರುಪಾಯಿಗಳು. ಆದ ಕಾರಣ ಇದನ್ನು ನೌ ಲಖಿಯಾ ದೇವಾಲಯ ಎಂದೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Bijaya2043

ವಯನಾಡ್

ವಯನಾಡ್

ಆದರ್ಶ ತಾಯಿ ಸೀತೆ ಹಾಗೂ ಆದರ್ಶ ಮಕ್ಕಳಾದ ಲವಕುಶರಿಗೆಂದೆ ಮುಡಿಪಾದ ದೇವಾಲಯವೊಂದಿದೆ. ಅದನ್ನೆ ಸೀತಾ ದೇವಿ ದೇವಾಲಯ ಅಥವಾ ಸೀತಾ ಲವಕುಶ ದೇವಾಲಯ ಎಂದು ಕರೆಯುತ್ತಾರೆ. ಇದು ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ವಯನಾಡ್ ಜಿಲ್ಲೆಯಲ್ಲಿದೆ.

ಚಿತ್ರಕೃಪೆ: Sreejith K

ಕೇವಲ ಹತ್ತು ಕಿ.ಮೀ!

ಕೇವಲ ಹತ್ತು ಕಿ.ಮೀ!

ವಯನಾಡ್ ಜಿಲ್ಲೆಯ ಆಡಳಿತ ಪಟ್ಟಣವಾದ ಕಲ್ಪೆಟ್ಟಾದಿಂದ 35 ಕಿ.ಮೀ ಗಳಷ್ಟು ದೂರದಲ್ಲಿರುವ ಪುಲ್ಪಲ್ಲಿ ಎಂಬ ಗ್ರಾಮದಲ್ಲಿ ಈ ಪ್ರವಾಸಿ ವಿಶೇಷತೆಯುಳ್ಳ ದೇವಾಲಯವಿದೆ. ಪುಲ್ಪಲ್ಲಿ ನಿಜ ಹೇಳಬೇಕೆಂದರೆ ಕರ್ನಾಟಕದ ಗಡಿಗೆ ಬಲು ಹತ್ತಿರದಲ್ಲಿದೆ. ಅಂದರೆ ಕೇವಲ ಹತ್ತು ಕಿ.ಮೀ ಅಂತರದಲ್ಲಿ ಮಾತ್ರ.

ಚಿತ್ರಕೃಪೆ: Rameshng

ನಂತರ ಪುಲ್ಪಲ್ಲಿಗೆ ಬನ್ನಿ

ನಂತರ ಪುಲ್ಪಲ್ಲಿಗೆ ಬನ್ನಿ

ಈ ವಿಶೇಷ ದೇವಾಲಯವನ್ನು ನೋಡಬಯಸುವವರು ವಯನಾಡಿನ ಕಲ್ಪೆಟ್ಟಾ ತಲುಪಿ ಅಲ್ಲಿಂದ ದೊರೆಯುವ ಬಸ್ಸುಗಳ ಮೂಲಕವಾಗಿಯೂ ಅಥವಾ ಬಾಡಿಗೆ ಟ್ಯಾಕ್ಸಿಗಳಿಂದ ಪುಲ್ಪಲ್ಲಿ ಗ್ರಾಮವನ್ನು ತಲುಪಬಹುದು ಹಾಗೂ ಈ ವಿಶಿಷ್ಟ ಸೀತಾ ಲವಕುಶ ದೇವಾಲಯದ ದರ್ಶನ ಮಾಡಬಹುದು.

ಚಿತ್ರಕೃಪೆ: Rameshng

ವಿಶೇಷ ಉತ್ಸವ

ವಿಶೇಷ ಉತ್ಸವ

ಜನವರಿ ಸಂದರ್ಭದಲ್ಲಿ ವಿಶೇಷ ಉತ್ಸವವನ್ನು ಈ ದೇವಾಲಯದಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ವಯನಾಡ್ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕೇರಳ ರಾಜ್ಯದ ಅತಿರಥ ಮಹಾರಥ ರಾಜನೆಂದು ಕರೆಯಲ್ಪಡುವ ಕೇರಳ ವರ್ಮ ಪಾಳಸ್ಸಿ ರಾಜನ ಆಡಳಿತ ಸಂದರ್ಭದಲ್ಲಿ ಈ ದೇವಾಲಯದ ನಿರ್ಮಾಣವಾಯಿತೆಂಬ ಪ್ರತೀತಿಯಿದೆ.

ಚಿತ್ರಕೃಪೆ: Shibin pv

ಸೀತಾಮಡಿ

ಸೀತಾಮಡಿ

ಬಿಹಾರ ರಾಜ್ಯದ ಸೀತಾಮಡಿ ಜಿಲ್ಲೆಯ ಸೀತಾಮಡಿ ಪಟ್ಟಣದಲ್ಲಿ ಈ ಪವಿತ್ರ ಕುಂಡ ಅಥವಾ ಕೊಳವಿದೆ. ಹಿಂದೆ ಇದೆ ಸ್ಥಳದಲ್ಲಿ ಜನಕ ಮಹಾರಾಜನು ಮಳೆ ತರಿಸುವ ಉದ್ದೇಶದಿಂದ ಇಂದ್ರನನ್ನು ಪ್ರಸನ್ನಗೊಳಿಸಲು ಭೂಮಿಯನ್ನು ಊಳುತ್ತಿರುವಾಗ ಮಣ್ಣಿನ ಮಡಕೆಯೊಂದರಲ್ಲಿ ಸೀತೆ ದೊರಕಿದ್ದಳು. ತದನಂತರ ಇಲ್ಲಿ ಕೊಳವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಇದೊಂದು ಪವಿತ್ರ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿನ ನೀರು ಸದಾ ಬಿಸಿಯಾಗಿರುತ್ತದೆ.

ಒಡಿಶಾ

ಒಡಿಶಾ

ಒಡಿಶಾ ರಾಜ್ಯದ ಮಯೂರ್ಭಂಜ್ ಜಿಲ್ಲೆಯ ಬರಿಪಾಡಾ ಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಸೀತಾ ಕುಂಡ ಇದಾಗಿದೆ. ಐವತ್ತು ಅಡಿಗಳಷ್ಟು ಎತ್ತರದಿಂದ ನೀರು ಒಂದು ನಿರ್ದಿಷ್ಟ ಕೋನದಲ್ಲಿ ಇಳಿಜಾರಿನ ಮೂಲಕ ಧುಮುಕುತ್ತ ಜಲಪಾತ ರೂಪಿಸಿ ಕೊನೆಗೆ ಕೊಳದಲ್ಲಿ ಶೇಖರಿಸಲ್ಪಡುತ್ತದೆ. ಸೀತಾ ದೇವಿಗೆ ಮುಡಿಪಾದ ಕೊಳ ಇದಾಗಿದ್ದು ಇದನ್ನು ಸೀತಾ ಕುಂಡ ಎಂದು ಕರೆಯುತ್ತಾರೆ.

ಕರ್ನಾಲ್

ಕರ್ನಾಲ್

ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಕರ್ನಾಲ್ ಪಟ್ಟಣದಲ್ಲಿರುವ ಉತ್ತರ ಭಾರತದ ಏಕೈಕ ಸೀತೆಗೆ ಮುಡಿಪಾದ ದೇವಾಲಯವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Raja Ravi Varma

ಶ್ರೀಲಂಕಾ

ಶ್ರೀಲಂಕಾ

ಹಿಂದಿನ ಸೀಲಾನ್ ಅಂದರೆ ಇಂದಿನ ಶ್ರೀಲಂಕಾ ದೇಶದ ಮಧ್ಯ ಭಾಗದಲ್ಲಿರುವ ನುವಾರ್ ಇಲಿಯಾ ಎಂಬ ನಗರದಿಂದ ಐದು ಕಿ.ಮೀ ಗಳಷ್ಟು ದೂರದಲ್ಲಿರುವ ಸೀತೆಗೆ ಮುಡಿಪಾದ ಪ್ರಾಚೀನ ದೇವಾಲಯ ಇದಾಗಿದೆ. ಶ್ರೀಲಂಕಾಗೆ ಭೇಟಿ ನೀಡುವ ಪ್ರವಾಸಿಗರು ಅದರಲ್ಲೂ ಭಾರತದವರು ಈ ದೇವಾಲಯಕ್ಕೆ ಸಾಮಾನ್ಯವಾಗಿ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Balou46

ಲಂಕಾದಲ್ಲಿ

ಲಂಕಾದಲ್ಲಿ

ಈ ಒಂದು ಸ್ಥಳದಲ್ಲೆ ಸೀತಾ ದೇವಿಯನ್ನು ಅಪಹರಿಸಿ ಇಡಲಾಗಿತ್ತು ಎನ್ನಲಾಗಿದೆ. ಇಲ್ಲಿನ ಪರಿಸರವು ಸಾಕಷ್ಟು ರಮಣೀಯವಾಗಿದ್ದು ಅದ್ಭುತವಾದ ಕಾಡು ಪ್ರದೇಶಗಳಿಂದ ಸುತ್ತುವರೆದಿದೆ. ಇಲ್ಲಿರುವ ನೀರಿನ ಮೂಲದ ಬಳಿ ದೊಡ್ಡ ಗಾತ್ರದ ವೃತ್ತಾಕಾರದ ಗುರುತುಗಳಿದ್ದು ಇವು ರಾವಣ ಆನೆಗಳ ಹೆಜ್ಜೆ ಗುರುತು ಎನ್ನಲಾಗುತ್ತದೆ.

ಚಿತ್ರಕೃಪೆ: Buddhika.jm

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X