ಪರಮಶಿವನ ಜ್ಯೋತಿರ್ ಲಿಂಗಳಲ್ಲಿನ 8 ನೇದು ಜಾಗೇಶ್ವರ ದೇವಾಲಯ. ಉತ್ತರಖಂಡವನ್ನು "ಲ್ಯಾಂಡ್ ಆಫ್ ಗಾಡ್ಸ್" ಎಂದು ವರ್ಣಿಸುತ್ತಾರೆ. ಉತ್ತರಾಖಂಡ ರಾಜ್ಯದ ಅಲ್ಮೋರ ಜಿಲ್ಲೆಯಲ್ಲಿ ಜಾಗೇಶ್ವರ ದೇವಾಲಯವಿದೆ. ಅದ್ದರಿಂದಲೇ ಈ ಪ್ರದೇಶವನ್ನು "ಟೆಂಪುಲ್ ಸಿಟಿ" ಎಂದು ಕರೆಯುತ್ತಾರೆ.
ಹಿಂದೂಗಳ ನಂಬಿಕೆಗಳ ಪ್ರಕಾರ ದ್ವಾದಶ ಜ್ಯೋತ್ಯಿರ್ ಲಿಂಗಗಳಲ್ಲಿ ಒಂದಾದ ಜಾಗೇಶ್ವರ ಜ್ಯೋತ್ಯಿರ್ ಲಿಂಗವೆಂದು ಭಾವಿಸುತ್ತಾರೆ. ವಿಷ್ಣು ಮೂರ್ತಿ ಪ್ರತಿಷ್ಟಾಪಿಸಿದ ಜ್ಯೋತಿರ್ ಲಿಂಗಗಳಲ್ಲಿ ಈ ಲಿಂಗವನ್ನು 8 ನೇಯದು ಎಂದು ಭಕ್ತರು ತಿಳಿಸುತ್ತಾರೆ.
ಇದು ದಾರುಕ ಎಂಬ ಅರಣ್ಯ ಮಧ್ಯೆದಲ್ಲಿ ಇರುತ್ತದೆ. ಈ ದೇವಾಲಯವನ್ನು ಯಾವಾಗ ನಿರ್ಮಿಸಿದರು ಎಂಬುದಕ್ಕೆ ಖಚಿತವಾದ ಆಧಾರಗಳಿಲ್ಲ. ಕೆಲವರ ಪ್ರಕಾರ 8 ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳುತ್ತಾರೆ. ಇಲ್ಲಿ ಒಟ್ಟು 124 ದೇವಾಲಯಗಳ ಸಮೂಹವನ್ನು ಕಾಣಬಹುದಾಗಿದೆ.
ಕೇದರನಾಥ ಕ್ಷೇತ್ರಕ್ಕೆ ತೆರಳುವ ಮುಂಚಿತವಾಗಿ ಆದಿ ಶಂಕರಾಚಾರ್ಯರು ಇಲ್ಲಿ ಪೂಜಾ ಕಾರ್ಯಾಕ್ರಮಗಳನ್ನು ನೆರವೇರಿಸಿದ್ದರಂತೆ. ಜಾಗೇಶ್ವರ ದೇವಾಲಯದ ಪಕ್ಕದಲ್ಲೇ ಇರುವ ಸ್ಮಶಾನದಲ್ಲಿ ಪೂರ್ವದಲ್ಲಿ ಚಾಂದ್ ಎಂಬ ರಾಜನ ಹೆಂಡತಿ ಸತಿಸಹಗಮನವನ್ನು ಮಾಡಿದಳಂತೆ.
21,467 ಅಡಿ ಎತ್ತರದಲ್ಲಿರುವ ಗಂಗೋತ್ರಿ ಜಾಗೇಶ್ವರ ದೇವಾಲಯದ ಬಗ್ಗೆ ಮತ್ತಷ್ಟು ತಿಳಿಯೋಣ.
ಪರಮಶಿವನು
ಈ ದೇವಾಲಯದ ಸಮೀಪದಲ್ಲಿ ಕೋಟಿ ಲಿಂಗಗಳ ದೇವಾಲಯ ಎಂಬ ಪ್ರದೇಶದಲ್ಲಿ ಪರಮಶಿವನು ಧ್ಯಾನ ಮಾಡುತ್ತಿದ್ದನು ಎಂದು ಭಾವಿಸುತ್ತಾರೆ.
ಶಿವ ಲಿಂಗ
ಈ ದೇವಾಲಯದ ಹೊರಭಾಗದಲ್ಲಿ ನಂದಿ, ಸ್ಕಂದಿ ಎನ್ನುವ ದ್ವಾರ ಪಾಲಕರು ಇರುತ್ತಾರೆ. ಇಲ್ಲಿ ಶಿವಲಿಂಗವು ಎರಡು ಭಾಗಗಳಾಗಿ ಇರುತ್ತದೆ.
ಅಖಂಡ ಜ್ಯೋತಿ
ಒಂದು ಭಾಗದಲ್ಲಿ ಪರಮಶಿವನಾಗಿ ಮತ್ತೊಂದು ಭಾಗದಲ್ಲಿ ಪಾರ್ವತಿ ದೇವಿಯಾಗಿ ನೆಲೆಸಿದ್ದಾನೆ. ಇಲ್ಲಿ ಅಖಂಡ ಜ್ಯೋತಿ ಬೆಳಗುತ್ತಾ ಇರುತ್ತದೆ.
ಜಾಗೇಶ್ವರ ದೇವಾಲಯ
ಸ್ತ್ರೀ ಮಹಾಮೃತ್ಯುಂಜಯ ದೇವಾಲಯ ಅತ್ಯಂತ ದೊಡ್ಡದಾದ ಶಿವನ ದೇವಾಲಯ. ಜಾಗೇಶ್ವರ ದೇವಾಲಯ ಪಕ್ಕದಲ್ಲಿಯೇ ಈ ದೇವಾಲಯವಿದೆ.
ಮೃತ್ಯುಗಂಡ, ಭಯ
ಈ ದೇವಾಲಯವನ್ನು ಒಮ್ಮೆ ದರ್ಶನ ಮಾಡಿದ ಅಂತವರಿಗೆ ಹಾಗೂ ಮೃತ್ಯುಂಜಯ ಮಂತ್ರವನ್ನು ಜಪಿಸಿದವರಿಗೆ ಹಲವು ಬಗೆಯ ಮೃತ್ಯುಗಂಡ ಹಾಗೂ ಭಯಗಳು ತೊಲಗುತ್ತದೆ ಎಂದು ಭಾವಿಸುತ್ತಾರೆ.
ತ್ರಿನೇತ್ರ
ಇಲ್ಲಿ ಸ್ವಾಮಿಯು ತ್ರಿನೇತ್ರನಾಗಿ ದರ್ಶನ ನೀಡುತ್ತಾನೆ. ಶಿವಲಿಂಗ ಎನ್ನುವ ಪರ್ವತ ಶಿಖರ ಲಿಂಗ ಆಕಾರದಲ್ಲಿ ಇರುತ್ತದೆ.
ಅತ್ಯಂತ ಎತ್ತರದ ಶಿಖರ
ಗಂಗೋತ್ರಿಯಲ್ಲಿನ ಪರ್ವತ ಶಿಖರದಲ್ಲಿ ಅತ್ಯಂತ ಎತ್ತರದ ಶಿಖರವಿದೆ. ಈ ಶಿಖರವು ಸಮುದ್ರ ಮಟ್ಟದಿಂದ ಸುಮಾರು 21,467 ಅಡಿ ಎತ್ತರದಲ್ಲಿದೆ.
ಗೋಮುಖ ಆಕಾರ
ಉತ್ತರಾಖಂಡಕ್ಕೆ ಸುಮಾರು 6 ಕಿ,ಮೀ ದೂರದಲ್ಲಿ ಲಿಂಗಾಕಾರದಲ್ಲಿ ಮತ್ತು ಗೋಮುಖ ಆಕಾರದಲ್ಲಿ ಕಾಣಿಸುತ್ತದೆ.
ಮಾಹಾದೇವ್ ಕಾ ಲಿಂಗ್
ಇಲ್ಲಿಯೇ ಭಾಗೀರಥ ನದಿ ಹುಟ್ಟಿದ್ದು ಎಂದು ಭಾವಿಸುತ್ತಾರೆ. ಶಿವಲಿಂಗ ಪರ್ವತಶಿಖರವನ್ನು ಮಹಾದೇವ್ ಕಾ ಲಿಂಗ್ ಎಂದು ಸ್ಥಳೀಯ ಭಕ್ತರು ಕರೆಯುತ್ತಾರೆ.
ಕೇದಾರನಾಥ ದೇವಾಲಯ
ಗಂಗೋತ್ರಿ, ಯಮುನೋತ್ರಿ, ಬದರಿನಾಥ್, ಕೇದಾರ ನಾಥ್ ಚಾರ್ ಧಾಂ ಎಂದು ಸಹ ಕರೆಯುತ್ತಾರೆ.
ರುದ್ರ ಶ್ರೇಣಿ
ದ್ವಾದಶ ಜ್ಯೋತ್ಯಿರ್ ಲಿಂಗಗಳಲ್ಲಿ ಒಂದು. ಅತ್ಯಂತ ಎತ್ತರದ ಹಿಮಾಲಯ ಪರ್ವತ ಪ್ರಾಂತ್ಯದಲ್ಲಿ ರುದ್ರಶ್ರೇಣಿಯಲ್ಲಿ ಇದೆ.
ರುದ್ರ ಪ್ರಯಾಗ್
ಸಾವಿರ ವರ್ಷಗಳ ಪುರಾತನವಾದ ಈ ದೇವಾಲಯ ಹಿಂದುಗಳ ಮುಖ್ಯವಾದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಉತ್ತರಾಖಂಡ ಪ್ರಯಾಗ ಜಿಲ್ಲೆಯಲ್ಲಿ ಇದೆ.
ಸುಮಾರು 3584 ಮೀ ಎತ್ತರ
ಕೇದಾರನಾಥ ಸಮುದ್ರಮಟ್ಟಕ್ಕೆ ಸುಮಾರು 3584 ಮೀ ಎತ್ತರ ಮಂದಾಕಿನಿ ನದಿಯ ಮೇಲ್ಭಾಗದಲ್ಲಿ ಮಂಜುಗಡ್ಡೆಗಳ ಮಧ್ಯೆ ಈ ಪುಣ್ಯಕ್ಷೇತ್ರವಿದೆ. ಶಿವನ ಭಕ್ತರ ಮುಖ್ಯ ಪುಣ್ಯಕ್ಷೇತ್ರ ಕೇದಾನಾಥ್ ಗರ್ವಾಲ್ ಪರ್ವತದ ಮೇಲೆ ಇರುತ್ತದೆ.
ಅಕ್ಷಯತೃತೀಯ
ಪ್ರತಿಕೂಲ ವಾತಾವರಣ ಕಾರಣವಾಗಿ ಅಕ್ಷಯತೃತೀಯವರೆವಿಗೂ ಈ ದೇವಾಲಯ ತೆರೆದಿರುತ್ತದೆ. ಪ್ರತಿಷ್ಟಾಪಿಸಿದ ಇಲ್ಲಿನ ಶಿವಲಿಂಗದ ಬಗ್ಗೆ ಯಾವುದೇ ಆಧಾರಗಳು ದೊರೆತ್ತಿಲ್ಲ.
ಆದಿ ಶಂಕರಾರ್ಚಾಯರು
ಈ ಗುಡಿಯನ್ನು ಆದಿಶಂಕರಾಚಾರ್ಯರು ನಿರ್ಮಿಸಿದರು ಎಂಬುದು ಭಕ್ತರ ನಂಬಿಕೆಯಾಗಿದೆ. ಈ ದೇವಾಲಯದ ಹಿಂಭಾಗದಲ್ಲಿ ಆದಿ ಶಂಕರಾರ್ಚಾಯರ ಸಮಾಧಿ ಕೂಡ ಇಲ್ಲಿ ಕಾಣಬಹುದಾಗಿದೆ.
ಸ್ವಯಂ ಭೂ
ಗರ್ಭಗುಡಿಯಲ್ಲಿ ಈಶ್ವರನು ಸ್ವಯಂ ಭೂ ದರ್ಶನವನ್ನು ನೀಡುತ್ತಾನೆ. ಪಾಂಡವರು ಕುಂತಿದೇವಿ ಸೇರಿ ಈ ಲಿಂಗಕ್ಕೆ ಪೂಜೆಗಳನ್ನು ನಿರ್ವಹಿಸುತ್ತಿದ್ದರಂತೆ.
ಪ್ರಕೃತಿಯ ಮಡಿಲಲ್ಲಿ
ಈ ದೇವಾಲಯವು ಪರ್ವತ ಶಿಖರದಲ್ಲಿ ಇರುತ್ತದೆ. ಆದ್ದರಿಂದ ಯಾವ ಸಮಯದಲ್ಲಿಯಾದರೂ ಮಳೆ, ಹಿಮಾಪಾತ ಬೀಳಬಹುದು. ಹಚ್ಚ ಹಸಿರಿನ ಪ್ರಕೃತಿಯ ಹಾಗೂ ಜಲಪಾತದಲ್ಲಿ ಎಷ್ಟೊ ಸುಂದರವಾಗಿದೆ ಈ ದೇವಾಲಯ.
ಪ್ರಯಾಣ
ಈ ದೇವಾಲಯಕ್ಕೆ ತೆರಳುವುದು ಎಂದರೆ ಅಷ್ಟೇ ಕಷ್ಟವಾದುದು. ಈ ಪ್ರಯಾಣ ಮಾರ್ಗವು ಗಂಟೆಗೆ 20 ಕಿ.ಮೀ ಕ್ಕಿಂತ ಹೆಚ್ಚಾಗಿ ಪ್ರಯಾಣ ಮಾಡುವುದಕ್ಕೆ ಆಗುವುದೇ ಇಲ್ಲವಂತೆ. ಏಕೆಂದರೆ ಒಂದು ಭಾಗದಲ್ಲಿ ಪರ್ವತಗಳು ಮತ್ತೊಂದು ಭಾಗದಲ್ಲಿ 1000 ಮೀಟರ್ ಆಳವಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಕೆಳಗೆ ನೋಡಿದರೆ ಭಯದಿಂದ ಸೆಕೆಯು ಕಿತ್ತು ಬರುವುದಂತು ಖಚಿತ.
ಕೈಲಾಸ
ಈ ಪ್ರಯಾಣ ನಿಜವಾಗಿಯೂ ಕೈಲಾಸದಲ್ಲಿನ ಪರಮಶಿವನನ್ನು ದರ್ಶಿಸಲು ಹೊರಡುತ್ತಿದ್ದೇವೆ ಎಂಬ ಆನಂದ ಹಾಗೂ ಭಯವು ಕೂಡ ಇರುತ್ತದೆ.
ಉತ್ತರಾಖಂಡ ರಾಜ್ಯ
ಈಗ ಧಾರಿದೇವಿ ದೇವಾಲಯ ಬಗ್ಗೆ ತಿಳಿಯೋಣ. ಅಷ್ಟಾದಶ ಶಕ್ತಿಪೀಠದಲ್ಲಿ ಒಂದು ಎಂದು ಭಕ್ತರು ಭಾವಿಸುತ್ತಾರೆ. ಉತ್ತರಾಖಂಡ ರಾಜ್ಯದಲ್ಲಿ ಹಿಮಾಲಯ ಪರ್ವತ ಮಧ್ಯೆಯಲ್ಲಿ ಅಲಕಾನಂದಾ ನದಿ ತೀರದಲ್ಲಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವ ಧಾರಿದೇವಿ ಅತ್ಯಂತ ಶಕ್ತಿವಂತ ದೇವತೆ.
ಧಾರಾಮಾತ
ಈಕೆಯನ್ನು ಧಾರಾಮಾತ ಎಂದು ಸಹ ಕರೆಯುತ್ತಾರೆ. ಧಾರಿದೇವಿ ವಿಗ್ರಹದ ಮೇಲೆ ಮೇಲ್ಛಾವಣಿ ಇರುವುದಿಲ್ಲ. ಹಾಗೆ ಮೇಲ್ಛಾವಣಿ ಇಲ್ಲದೇ ದೇವಾಲಯದಲ್ಲಿ ಇರಲು ಧಾರಿದೇವಿ ಆನಂದ ಪಡುತ್ತಾಳೆ ಎಂದು ಅಲ್ಲಿನ ಭಕ್ತರು ಭಾವಿಸುತ್ತಾರೆ.
ಅಲಕಾನಂದಾ
ಈ ದೇವಾಲಯಕ್ಕೆ ಅವತಲಗಟ್ಟು ಧಾರಿ ಎಂಬ ಗ್ರಾಮವಿದೆ. ಈ ದೇವಾಲಯವನ್ನು ಮತ್ತು ಆ ಗ್ರಾಮಕ್ಕೆ ಕೂಡಿಸಲು ಅಲಕಾನಂದಾ ಮೇಲೆ ಒಂದು ಬ್ರಿಡ್ಜ್ ಇದೆ.
ಧಾರಿದೇವಿ ದೇವಾಲಯ
ಶ್ರೀನಗರ, ಬದರಿನಾಥ್ಗೆ ರಹದಾರಿ ಮಾರ್ಗವಾಗಿ ಇರುವ ಕಲ್ಯಾಸರ್ ಎಂಬ ಪ್ರದೇಶದಲ್ಲಿ ಈ ಧಾರಿದೇವಿ ದೇವಾಲಯವಿದೆ.
ರುದ್ರಪ್ರಯೋಗ
ಈ ದೇವಾಲಯವು ದೆಹಲಿಯಿಂದ ಸುಮಾರು 360 ಕಿ,ಮೀ ದೂರದಲ್ಲಿ ಹಾಗೂ ರುದ್ರಪ್ರಯೋಗ್ ನಿಂದ 20 ಕಿ,ಮೀ ದೂರದಲ್ಲಿದೆ.
ಧಾರಿದೇವಿ ದೇವಾಲಯ
ಈ ದೇವಿಯು ತನಗೆ ಪೂಜಿಸಿದವರಿಗೆ ಒಳ್ಳೆಯದನ್ನು ಮಾಡುವ ಕರುಣಾಮೂರ್ತಿ. ಅದೇ ವಿಧವಾಗಿ ಅವಳನ್ನು ಧಿಕ್ಕರಿಸಿದರೆ ಅವರನ್ನು ಅಷ್ಟೇ ಭಯಂಕರವಾಗಿ ಶಿಕ್ಷಿಸುತ್ತಾಳೆ.
ಧಾರಿದೇವಿ ದೇವಾಲಯ
ಈ ದೇವತೆಯನ್ನು ಅದ್ಭುತ ಶಕ್ತಿ ಎಂದು ಸೂಚಿಸುವ ಒಂದು ಸಂಘಟನೆ ಕೂಡ 2013 ರ ಜೂನ್ 16 ರಂದು ನಡೆದಿತ್ತು.