Search
  • Follow NativePlanet
Share
» »ಮೂಳೆ ಸವೆಯುವಂತೆ ಮಾಡುವ ಸೂಳೆಕೆರೆಯ ವಿಶಾಲತೆ

ಮೂಳೆ ಸವೆಯುವಂತೆ ಮಾಡುವ ಸೂಳೆಕೆರೆಯ ವಿಶಾಲತೆ

By Vijay

ಕೆಲವೊಂದು ರಚನೆಗಳು ಆಕಾರ, ಗಾತ್ರಗಳು ಹೇಗಿರುತ್ತದೆ ಎಂದರೆ ಭೇಟಿ ನೀಡಿದಾಗ ಖಂಡಿತವಾಗಿಯೂ ಮೂಕ ವಿಸ್ಮಿತರಾಗುವಂತೆ ಮಾಡುತ್ತವೆ. ಇಂತಹ ರಚನೆಗಳು ಸ್ವಾಭಾವಿಕವಾಗಿ ಪ್ರವಾಸಿ ಆಕರ್ಷಣೆಗಳಾಗಿಯೂ ಜನರ ಗಮನ ಸೆಳೆಯುತ್ತವೆ. ಭೇಟಿ ನೀಡಲು ಪ್ರೇರೇಪಿಸುತ್ತವೆ ಎಂದರೂ ತಪ್ಪಾಗಲಾರದು.

ಎತ್ತರದ ಬೆಟ್ಟಗಳಾಗಿರಬಹುದು, ಪಾತಾಳದಷ್ಟು ಆಳದ ಕಂದಕ, ಕಣಿವೆಗಳಾಗಿರಬಹುದು ಇಲ್ಲವೆ ಅತಿ ಎತ್ತರದಿಂದ ಭೋರ್ಗೆರೆಯುತ್ತ ಧರೆಗೆ ಧುಮುಕುವ ಜಲಪಾತಗಳಾಗಿರಬಹುದು ಅಥವಾ ವಿಶಾಲಕಾಯದ ಆಣೆಕಟ್ಟುಗಳಾಗಿರಬಹುದು ಎಲ್ಲವೂ ಒಂದು ರೀತಿಯಲ್ಲಿ ಭೇಟಿ ನೀಡಲು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ನಿಮಗಿಷ್ಟವಾಗಬಹುದಾದ : ದಕ್ಷಿಣ ಭಾರತದಲ್ಲಿರುವ ಸುಂದರ ಕೆರೆಗಳು

ಈ ಲೇಖನದ ಶಿರ್ಷಿಕೆಯಲ್ಲಿ ಹೇಳಿರುವ ಹಾಗೆ....ಹೌದು, ನೀವು ನಡೆಯುತ್ತ ನಡೆಯುತ್ತ ಈ ಕೆರೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ತಲುಪಬೇಕೆಂದಿದ್ದರೆ ನಿಮ್ಮ ಕಾಲಿನ ಮೂಳೆಗಳು ಸವೆಯುತ್ತವೆ ಹೊರತು ನಿಮಗೆ ತಲುಪಲಾಗುವುದಿಲ್ಲ. ಅಷ್ಟೊಂದು ವಿಶಾಲವಾಗಿದೆ ಈ ಅದ್ಭುತ ಕೆರೆ. ದಾವಣಗೆರೆ ಜಿಲ್ಲೆಯಲ್ಲಿರುವ ಈ ಕೆರೆ "ಸೂಳೆ ಕೆರೆ" ಎಂತಲೆ ಪ್ರಸಿದ್ಧಿ ಪಡೆದಿದೆ.

ನಿಮಗೂ ಈ ಅಗಾಧ ಹಾಗೂ ಸುಂದರ ಕೆರೆಯನ್ನೊಮ್ಮೆ ನೋಡುವ ಬಯಕೆ ಇದೆಯೆ? ಹಾಗಾದರೆ ಈ ಲೇಖನ ಓದಿ ಅದರ ಕುರಿತು ತಿಳಿದು ಭೇಟಿ ನೀಡಿ. ಆಗ ನಿಮ್ಮ ಪ್ರವಾಸ ಇನ್ನಷ್ಟು ಅವಿಸ್ಮರಣೀಯವಾಗುವುದು.

ಲೇಖನದ ಮೊದಲ ಹತ್ತು ಚಿತ್ರಗಳಿಗೆ ಚಿತ್ರಕೃಪೆ : Ravi Aparanji

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ದಾವಣಗೆರೆ ನಗರ ಕೇಂದ್ರದಿಂದ 40 ಕಿ.ಮೀ ಹಾಗೂ ಚೆನ್ನಗಿರಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕೆರೆಗೆ ಶಾಂತಿ ಸಾಗರ ಎಂಬ ಹೆಸರನ್ನಿಡಲಾಗಿದ್ದರೂ ಸಹ ಬಹುತೇಕ ಜನರಲ್ಲಿ ಇದು ಸೂಳೆಕೆರೆ ಎಂಬ ಹೆಸರಿನಿಂದಲೆ ಪ್ರಸಿದ್ಧವಾಗಿದೆ.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಕೆರೆಗೆ ಈ ಹೆಸರು ಬರಲು ಒಂದು ದಂತಕಥೆಯು ಚಾಲ್ತಿಯಲ್ಲಿದೆ. ಅದರ ಪ್ರಕಾರ, ಹಿಂದೆ ಈ ಪ್ರದೇಶವಾಳುತ್ತಿದ್ದ ಅರಸ ವಿಕ್ರಮರಾಯ ಹಾಗೂ ನೂತನದೇವಿ ದಂಪತಿಗಳಿಗೆ ಯಾವುದೆ ಸಂತಾನವಿರಲಿಲ್ಲ. ಹೀಗಾಗಿ ರಾಜ ಬಿಲಹಳ್ಳಿಯ ಗೌಡನೊಬ್ಬನ ಮಗನನ್ನು ದತ್ತು ಪಡೆದಿದ್ದ ಹಾಗೂ ಆತ ರಾಗಿ ರಾಯನಾಗಿ ಹೆಸರುಗಳಿಸಿದ್ದ.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಹೀಗಿರುವಾಗ, ದೈವ ಭಕ್ತನಾಗಿದ್ದ ಅರಸನಿಗೆ ಬಹಳ ಸಮಯದ ನಂತರ ಹೆಣ್ಣು ಸಂತಾನವಾಯಿತು. ಇದರಿಂದ ಸಂತಸಗೊಂಡ ಅವನು ಆಕೆಗೆ ಶಾಂತವ್ವೆ ಎಂಬ ಹೆಸರನ್ನಿಟ್ಟು ಬೆಳೆಸಿದ. ಶಾಂತವ್ವೆಯು ಬೆಳೆ ಬೆಳೆಯುತ್ತ ತನ್ನ ರಾಜ್ಯದಲ್ಲಿ ನೀರಿನ ಬವಣೆಯಿದ್ದದ್ದನ್ನು ಕಂಡು ಕೆರೆಯೊಂದನ್ನು ನಿರ್ಮಿಸಿದಳು.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ದುರದೃಷ್ಟವಶಾತ್ ಆ ಕೆರೆಯು ಅತಿ ವಿಶಾಲವಾಗಿ ರೂಪಗೊಂಡು ಶಾಂತವ್ವೆಯ ತಂದೆಯ ರಾಜ್ಯವನ್ನೆ ಮುಳುಗಿಸಿ ಅಪಾರ ಪ್ರಮಾಣ ಜೀವಹಾನಿಯಾಯಿತು. ಇದರಿಂದ ತನ್ನ ಮಗಳ ಮೇಲೆ ಕೋಪಗೊಂಡ ರಾಜ ಆಕೆಗೆ ಸೂಳೆ ಎಂದು ಶಪಿಸಿದನಂತೆ. ಹಾಗಾಗಿ ಕೆರೆಯು ನಂತರದ ಸಮಯದಲ್ಲಿ ಸೂಳೆ ಕೆರೆ ಎಂದೆ ಜನಜನಿತವಾಯಿತು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಈ ಕೆರೆಯ ಹೆಸರು ಬಳಸಯೋಗ್ಯವಲ್ಲದ ಕಾರಣದಿಂದಾಗಿ ಇದನ್ನು ಶಾಂತಿ ಸಾಗರ ಎಂದು ಮರುನಾಮಕರಣ ಮಾಡಲಾಗಿದೆ. ಆದರೂ ಸಹ ಸಾಕಷ್ಟು ಜನರು ಇದರ ಮೊದಲಿನ ಹೆಸರಿನಿಂದಲೆ ಇದನ್ನು ಗುರುತಿಸುತ್ತಾರೆ. ಇನ್ನಾದರೂ ಜನರು ಆ ಯೋಗ್ಯವಲ್ಲದ ಪದ ಬಿಟ್ಟು ಶಾಂತಿ ಸಾಗರ ಎಂದು ಕರೆದರೆ ಎಷ್ಟೊ ಉತ್ತಮ ಅನಿಸಬಹುದು.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಇತಿಹಾಸಕಾರರ ಪ್ರಕಾರ ಈ ಕೆರೆಯು ಸುಮಾರು 11 ಅಥವಾ 12 ನೇಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದಾಗಿರಬಹುದೆಂದು ಹೇಳಲಾಗಿದೆ. ಹೀಗಾಗಿ 800 ಕ್ಕೂ ಅಧಿಕ ವರ್ಷಗಳ ಭವ್ಯ ಇತಿಹಾಸವನ್ನು ಈ ಕೆರೆ ಹೊಂದಿದೆ ಎಂದು ಹೇಳಬಹುದು.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಇನ್ನೂ ಇದರ ದೃಢಕಾಯಕ್ಕೆ ಬಂದರೆ ಇದು ಏಷಿಯಾದಲ್ಲೆ ಅತಿ ದೊಡ್ಡ ಕೆರೆಗಳ ಪೈಕಿ ಒಂದಾಗಿದೆ ಹಾಗೂ ಕರ್ನಾಟಕದ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯನ್ನೂ ಸಹ ಪಡೆದಿದೆ.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಏನಿಲ್ಲವೆಂದರೂ ಈ ಕೆರೆಯ ಸುತ್ತಳತೆಯೆ ಸುಮಾರು 40 ಕಿ.ಮೀ ಗಳಷ್ಟು ಉದ್ದವಿದೆ. ನೀವೇ ಯೋಚಿಸಿ ಈ ಕೆರೆಯ ಸುತ್ತ ಒಂದು ಸುತ್ತು ಸುತ್ತಲು ಹೇಗಾಗಬಾರದು. ಖಂಡಿತವಾಗಿಯೂ ಚಪ್ಪಲಿ ಹಾಳಾಗುವುದಲ್ಲದೆ ಕಾಲಿನ ಮೂಳೆಗಳು ಸವಿಯಬಹುದಷ್ಟೆ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಆರುವರೆ ಸಾವಿರ ಎಕರೆಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಈ ಕೆರೆಯ ನೀರು ಆವರಿಸಿದ್ದು ಸುಮಾರು ನಾಲ್ಕುವರೆ ಸಾವಿರ ಎಕರೆಗಳಷ್ಟು ನೀರಾವರಿ ಭೂಮಿ ಹಾಗೂ 50 ಹಳ್ಳಿಗಳಿಗೆ ನೀರಿನ ಮೂಲವಾಗಿದೆ.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಈ ಕೆರೆಯು 20 ಚದರ ಮೈಲುಗಳಷ್ಟು ವಿವಿಧ ನೀರಿನ ಮೂಲಗಲಿಂದ ಒಳಹರಿವು ಪಡೆಯುತ್ತದೆ ಹಾಗೂ ಅವುಗಳಲ್ಲಿ ತುಂಗಭದ್ರಾ ನದಿಯ ಉಪನದಿಯಾದ ಹರಿದ್ರಾ ಪ್ರಮುಖವಾಗಿದೆ.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ನೀರನ್ನು ತಡೆಯುವ ಉದ್ದೇಶದಿಂದ ಒಡ್ಡೊಂದನ್ನು ನಿರ್ಮಿಸಲಾಗಿದ್ದರೂ ಅದರ ಉದ್ದ ಕೇವಲ 950 ಅಡಿಗಳಷ್ಟು ಮಾತ್ರ. ಈ ಒಡ್ಡು ಕೆರೆಯ ಸುತ್ತಲಿರುವ ಬಟ್ಟ ಶ್ರೇಣಿಗಳ ಎರಡು ಗುಡ್ಡಗಳ ಮಧ್ಯೆ ನಿರ್ಮಿತವಾಗಿರುವುದರಿಂದ ಹೆಚ್ಚಿನ ಉದ್ದದ ಅಗತ್ಯವಿಲ್ಲದಂತಾಗಿದೆ.

ಚಿತ್ರಕೃಪೆ: Siddarth.P.Raj

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಆದರೆ ಈ ಒಡ್ಡಿನ ಅಗಲ ಮಾತ್ರ ಅದ್ಭುತವಾಗಿದ್ದು ಗರಿಷ್ಠ 120 ಅಡಿಗಳು ಹಾಗೂ ಕನಿಷ್ಠ 70 ಅಡಿಗಳಷ್ಟಾಗಿದ್ದು ಉತ್ತಮ ಎತ್ತರ ಹಾಗೂ ದೃಢವಾಗಿ ನೆಲೆಯೂರಿ ನಿಂತಿದೆ. ಚೆನ್ನಗಿರಿಯನ್ನು ದಾವಣೆಗೆರೆ ನಗರಕ್ಕೆ ಬೆಸೆಯುವ ರಸ್ತೆ ಮಾರ್ಗವು ಈ ಒಡ್ಡಿನ ಮೇಲಿಂದಲೆ ಸಾಗುತ್ತದೆ.

ಚಿತ್ರಕೃಪೆ: Siddarth.P.Raj

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ನೀರು ಹೆಚ್ಚಾದ ಸಂದರ್ಭದಲ್ಲಿ ಕೆರೆಯಿಂದ ಹೊರ ಹೋಗಲು ನೆರವಾಗುವಂತೆ ಕೆರೆಯ ಉತ್ತರಕ್ಕೆ ಸಿದ್ಧ ಹಾಗೂ ದಕ್ಷಿಣಕ್ಕೆ ಬಸವ ಎರಡು ತೂಬು (ಜಲಾಶಯದಲ್ಲಿ ನೀರಿನ ಮಟ್ಟ ನಿಯಂತ್ರಿಸುವ ಉದ್ದೇಶದಿಂದ ನಿಯಮಿತವಾಗಿ ನೀರು ಹೊರ ಹೋಗಲು ನಿರ್ಮಿಸಲಾಗುವ ರಚನೆ ಅಥವಾ ಕ್ರಸ್ಟ್ ಗೇಟ್). ಗಳಿವೆ.

ಚಿತ್ರಕೃಪೆ: Siddarth.P.Raj

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಹಾಗೆಯೆ, ಕೆರೆಗೆ ನೀರಿನ ಅವಶ್ಯಕತೆ ಉಂಟಾದ ಸಂದರ್ಭದಲ್ಲಿ ಭದ್ರಾ ಜಲಾಶಯದ ಬಲದಂಡೆ ಕಾಲುವೆ ಮೂಲಕ ಹೆಚ್ಚುವರಿ ನೀರನ್ನು ಬಿಡುವ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ.

ಚಿತ್ರಕೃಪೆ: Siddarth.P.Raj

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಸರ್ ಎಂ ವಿಶ್ವೇಶ್ವರಯ್ಯನವರು ವಿನ್ಯಾಸಗೊಳಿಸಿದ ಭದ್ರಾ ಜಲಾಶಯದ ನೀರನ್ನು ಸಾಗಿಸುವ ಇನ್ನೊಂದು ಕಾಲುವೆಯು ಕೆರೆಯ ಮೂಲ ಒಡ್ಡಿಗೆ ಸಮಾನಾಂತರವಾಗಿದ್ದು ಹಾಯ್ದು ಹೋಗಿರುವುದು ವಿಶೇಷವಾಗಿದೆ. ಈ ನೊಟವು ಸಾಕಷ್ಟು ಜನರನ್ನು ಆಕರ್ಷಿಸುತ್ತದೆ. ಅಲ್ಲದೆ ಶಾಂತಿ ಸಾಗರದಿಂದ ಪ್ರತಿ ದಿನವೂ ಚಿತ್ರದುರ್ಗಕ್ಕೆ ನೀರನ್ನು ಪೂರೈಸಲಾಗುತ್ತದೆ.

ಚಿತ್ರಕೃಪೆ: Siddarth.P.Raj

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಪ್ರವಾಸೋದ್ಯಮದ ದೃಷ್ಟಿಯಿಂದ ಗಮನಿಸಿದಾಗ ದಾವಣಗೆರೆ ಜಿಲ್ಲೆಯಲ್ಲಿ ಈ ಒಂದು ತಾಣವು ಉತ್ತಮವಾದ ಪಿಕ್ನಿಕ್ ಸ್ಥಳವಾಗಿದೆ. ಇತ್ತೀಚಿಗಷ್ಟೆ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲೊಂದು ಅತಿಥಿಗೃಹ ನಿರ್ಮಿಸಲಾಗಿದೆ. ಮುಂದೆ ದೋಣಿ ವಿಹಾರದಂತಹ ಕೆಲವು ಚಟುವಟಿಕೆಗಳನ್ನು ಪರಿಚಯಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.

ಚಿತ್ರಕೃಪೆ: Siddarth.P.Raj

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರದ ಒಡ್ಡಿನ ಉತ್ತರ ದಿಕ್ಕಿನಲ್ಲಿ ಒಂದು ಚಿಕ್ಕ ಗುಡ್ಡವೊಂದಿದ್ದು ಅದರ ಮೇಲೆ ಸಿದ್ಧೇಶ್ವರನಿಗೆ ಮುಡಿಪಾದ ದೇವಾಲಯವಿದೆ. ಈ ದೇವಾಲಯವನ್ನು ಕಲ್ಲಿನ ದ್ವಾರದ ಮೂಲಕ ಪ್ರವೇಶಿಸಬಹುದಾಗಿದೆ. ಸಿದ್ಧೇಶ್ವರ ದೇವಾಲಯದ ಒಳಗಿನಿಂದ...

ಚಿತ್ರಕೃಪೆ: Prasannatb

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿಸಾಗರ ನಿಜವಾಗಿಯೂ ಒಂದು ಶಾಂತಿಯಿಂದ ಕೂಡಿದ ತಾಣವಾಗಿದ್ದು ಕಣ್ಣು ಹಾಯಿಸಿದಷ್ಟು ನೀರೇ ನೀರು ಕಾಣುವುದರಿಂದ ಸಾಗರ ಎಂಬ ಹೆಸರಿಗೂ ಸಾರ್ಥಕತೆ ಉಂಟು ಮಾಡಿರುವ ಅದ್ಭುತ ಪ್ರದೇಶವಾಗಿದೆ. ದಾವಣಗೆರೆಯಿಂದ ಅಥವಾ ಚೆನ್ನಗಿರಿಯಿಂದ ಸುಲಭವಾಗಿ ಈ ಕೆರೆಗೆ ತಲುಪಬಹುದು. 1890 ರ ಸಮಯದಲ್ಲಿ ಸೂಳೆ ಕೆರೆಯ ಸುಂದರ ನೋಟ.

ಶಾಂತಿ ಸಾಗರ, ದರ್ಶಿನಿ ಅಲ್ಲ!

ಶಾಂತಿ ಸಾಗರ, ದರ್ಶಿನಿ ಅಲ್ಲ!

ಇನ್ನೂ ದಾವಣಗೆರೆ ಕರ್ನಾಟಕದ ಪ್ರಮುಖ ನಗರಗಳ ಪೈಕಿ ಒಂದಾಗಿದ್ದು ಸಾಕಷ್ಟು ಜಿಲ್ಲೆಗಳಿಂದ ರಸ್ತೆ ಹಾಗೂ ರೈಲಿನ ಸಮ್ಪರ್ಕ ಹೊಂದಿದೆ. ದಾವಣಗೆರೆ ಬೆಳಗಾವಿ, ಹುಬ್ಬಳ್ಳಿಗಳಿಂದ ಕ್ರಮವಾಗಿ 250 ಕಿ.ಮೀ ಹಾಗೂ 152 ಕಿ.ಮೀ ದೂರವಿದ್ದರೆ ಬೆಂಗಳೂರಿನಿಂದ 262 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Irrigator

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X