ತಿರುಪುರ್ ಜಿಲ್ಲೆಯಲ್ಲಿರುವ ಕಂಗೆಯಂ ನಿಂದ ಶಿವನ್ಮಲೈ ದೇವಸ್ಥಾನ 5 ಕಿ.ಮೀ ದೂರದಲ್ಲಿದೆ. ಮುರುಗನ್ ದೇವರನ್ನು ಇಲ್ಲಿ ಪೂಜಿಸಲಾಗುತ್ತದೆ. ಇದೊಂದು ಜನಪ್ರಿಯವಾದ ದೇವಾಲಯವಾಗಿದ್ದು, ಪ್ರತಿ ವರ್ಷ ಇಲ್ಲಿ ನಡೆಯುವ ತೈಪೂಸಂ ಉತ್ಸವವು ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ. 'ತೇರೋಟ್ಟಂ' ಅಥವಾ ತೇರನ್ನು ಎಳೆಯುವ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಮಾಡಲಾಗುತ್ತದೆ. ಈ ದೇವಸ್ಥಾನವು ಗುಡ್ಡದ ತುದಿಯಲ್ಲಿ ನೆಲೆಸಿದ್ದು ರಸ್ತೆಯ ಮುಖಾಂತರ ಇಲ್ಲವೆ 450 ಕ್ಕೂ ಅಧಿಕವಾಗಿರುವ ಮೆಟ್ಟಿಲುಗಳ ಮೂಲಕ ತೆರಳಿ ತಲುಪಬಹುದಾಗಿದೆ. ಇಲ್ಲಿ ಆಚರಿಸಲಾಗುವ ಷಷ್ಟಿ ಉತ್ಸವಗಳು ಹೆಸರುವಾಸಿಯಾಗಿವೆ. ಕಾಂಗೆಯಂನ ಸುತ್ತಮುತ್ತಲಿನ ಪ್ರದೇಶಗಳಿಂದ ಸಾಕಷ್ಟು ಜನರು ಈ ಸಂದರ್ಭದಲ್ಲಿ ಇಲ್ಲಿ ಸೇರಿ ಉತ್ಸವವನ್ನು ಅತಿ ಅದ್ದೂರಿಯಿಂದ ಆಚರಿಸುತ್ತಾರೆ.