ಕೊಯಮತ್ತೂರಿನಿಂದ 40 ಕಿ.ಮೀ ದೂರದಲ್ಲಿ, ಈರೋಡ್ ಗೆ ಹೋಗುವ ಹಾದಿಯ ಮೇಲೆ ನೆಲೆಸಿದೆ ಅರುಳ್ಮಿಗು ಅವಿನಾಶಿ ಲಿಂಗೇಶ್ವರರ್ ತಿರುಕೋಯಿಲ್. ಪಾಂಡ್ಯರ ರಾಜ ಸುಂದರ ಪಾಂಡ್ಯನಿಂದ ಸುಮಾರು 15 ನೇಯ ಶತಮಾನದಲ್ಲಿ ನಿರ್ಮಿತವಾಗಿದೆ ಈ ದೇವಾಲಯ. ಈ ದೇವಸ್ಥಾನದ ಹಿಂದೆ ಅತಿ ರೋಚಕವಾದ ಕಥೆಯೊಂದಿದೆ. ಅದೆನೆಂದರೆ, ಒಮ್ಮೆ ಇಬ್ಬರು ಬಾಲಕರು ಈ ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ, ಕೊಳದಲ್ಲಿದ್ದ ಮೊಸಳೆಯೊಂದು ಒಬ್ಬ ಬಾಲಕನನ್ನು ನುಂಗಿಬಿಟ್ಟಿತು. ಈ ಘಟನೆ ನಡೆದ ಮೂರು ವರ್ಷಗಳ ತರುವಾಯ ಬದುಕುಳಿದಿದ್ದ ಮತ್ತೊಬ್ಬ ಬಾಲಕನ ಉಪನಯನವನ್ನು ಪಾಲಕರು ದುಖತಪ್ತರಾಗಿಯೆ ಮಾಡಿದರು. ಈ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲೆ ಸಾಗುತ್ತಿದ್ದ ಸುಂದರಮೂರ್ತಿ ನಯನರ್ ಎಂಬುವವರಿಗೆ ಈ ಘಟನೆ ಕುರಿತು ತಿಳಿಯಿತು. ಇದರಿಂದ ಮನನೊಂದ ಅವರು ತಕ್ಷಣವೆ ಶಿವನ ಕುರಿತು ಒಂದು ಸಂಗೀತವನ್ನು ರಚಿಸಿ, ತೀರಿಹೋದ ಬಲಾಕನನ್ನು ಮತ್ತೆ ಜೀವ ತುಂಬಿಸಿ ಮಾತಾ-ಪಿತೃಗಳಿಗೆ ಹಿಂದಿರುಗಿಸಬೇಕೆಂದು ಬೇಡಿಕೊಂಡನು.
ಆಗ ಪವಾಡವೆಂಬಂತೆ ಬರಿದಾಗಿದ್ದ ದೇವಸ್ಥಾನದ ಆ ಕೊಳದಲ್ಲಿ ನೀರು ಮತ್ತೆ ತುಂಬಿ, ಅದರಿಂದ ಮೊಸಳೆಯು ಹೊರಬಂದು ನುಂಗಿದ್ದ ಬಾಲಕನನ್ನು ಮತ್ತೆ ಮೊದಲಿನ ಸ್ಥಿತಿಯಲ್ಲೆ ಹೊರಹಾಕಿತು. ತಿರುಪುರಿಗೆ ಭೇಟಿ ನೀಡಿದ್ದಾಗ, ನೋಡಲೆ ಬೇಕಾದ ಆಕರ್ಷಣೆಗಳಲ್ಲಿ ಈ ದೇವಾಲಯವೂ ಒಂದು. ಮತ್ತೊಂದು ವಿಶೇಷವೆಂದರೆ ಈ ದೇವಸ್ಥಾನದ ತನ್ನದೆ ಆದ ವಿಶೀಷ್ಟ ರೀತಿಯ ರಥ ಅಥವಾ ತೇರು. ಇದು ದಕ್ಷಿಣ ಭಾರತದಲ್ಲಿಯೆ ದೊಡ್ಡದಾದ ತೇರಾಗಿದೆ.