ತಿರುಪತಿಯಿಂದ 48 ಕಿ.ಮೀ. ದೂರದಲ್ಲಿರುವ ಕರವೆತ್ತಿನಗರಂ ಸೀಪ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಇದೆ. ಈ ದೇವಾಲಯ 14 ನೇ ಶತಮಾನದ್ದೆಂದು ನಂಬಲಾಗಿದೆ. ಶ್ರೀ ರಾಮಾನುಜಾಚಾರ್ಯರಿಂದ ಈ ದೇವಾಲಯ ನಿರ್ಮಾಣವಾಯಿತೆಂದು ನಂಬಲಾಗಿದೆ. ಶ್ರೀ ವೇಣುಗೋಪಾಲಸ್ವಾಮಿಯ ಆಕರ್ಷಕ ವಿಗ್ರಹ ಇಲ್ಲಿದೆ.
ಈ ದೇವಾಲಯದಲ್ಲಿ ಇದಲ್ಲದೇ ಶ್ರೀ ಸತ್ಯಭಾಮಾ ಅಮ್ಮನವರು ಹಾಗೂ ಶ್ರೀ ರುಕ್ಮಿಣಿ ಅಮ್ಮನವರ ವಿಗ್ರಹವೂ ಇದೆ. ಇದಲ್ಲದೇ ಇಲ್ಲಿಯೇ ಇನ್ನೊಂದು ಚಿಕ್ಕ ದೇವಾಲಯ ಇದೆ. ಶ್ರೀ ಸೀತಾರಾಮುಲಾ ಪಟ್ಟಾಭಿಷೇಕಂ ಎಂಬ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ. ವೇಣುಗೋಪಾಲಸ್ವಾಮಿ ದೇವಾಲಯದ ಪ್ರಮುಖ ಆಚರಣೆಗಳೆಂದರೆ ಗೋಕುಲಾಷ್ಠಮಿ, ವೈಕುಂಠ ಏಕಾದಶಿ, ತೆಪ್ಪೋತ್ಸವಂ ಹಾಗೂ ಬ್ರಹ್ಮೋತ್ಸವಂ.
ದೇವಾಲಯದ ಪ್ರವೇಶ ಸಮಯ ಬೆಳಗ್ಗೆ 6 ರಿಂದ ಮಧ್ಯಾಹ್ನ 11 ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆ.