ಈ ಪ್ರದೇಶದಲ್ಲಿ ದೇವ ಶಿವನಿಗೆ ಮೀಸಲಾಗಿರುವ ಒಂದೆ ದೇವಾಲಯ ಕಪಿಲಾ ತೀರ್ಥಂ. ತಿರುಪತಿ ಹಾಗೂ ತಿರುಮಲ ಎರಡೂ ಪಟ್ಟಣದಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ತಿರುಮಲ ಬೆಟ್ಟ ತಲುಪುವ ಮುನ್ನ ಸಿಗುವ ಬೆಟ್ಟದ ಕೆಳಭಾಗದ ಪ್ರವೇಶ ಜಾಗದಲ್ಲಿ ಈ ಬೃಹತ್ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯ ಪ್ರವೇಶದ್ವಾರದಲ್ಲಿಯೇ ದೊಡ್ಡದಾದ ನಂದಿ ಮೂರ್ತಿ ಇದೆ.
ಹೇಳಿಕೆಗಳ ಪ್ರಕಾರ ಕಪಿಲ ಮಹರ್ಷಿಗಳು ಇಲ್ಲಿ ವಾಸವಾಗಿದ್ದರಂತೆ. ಶಿವನ ಆರಾಧನೆಯನ್ನು ಅವರು ಮಾಡುತ್ತಿದ್ದರಂತೆ. ಅದಕ್ಕಾಗಿಯೇ ಈ ದೇವಾಲಯಕ್ಕೆ ಕಪಿಲತೀರ್ಥ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ತೀರ್ಥಂ ಶಬ್ಧದ ಅರ್ಥ ಧಾರ್ಮಿಕ ಕೆರೆ ಎಂದಾಗುತ್ತದೆ. ಇನ್ನು ಈ ದೇವಾಲಯಕ್ಕೆ ಸಮೀಪದಲ್ಲೇ ವಿನಾಸನಂ ಜಲಪಾತ ಇದೆ.
ಒಂದು ಕಾಲದಲ್ಲಿ ಈ ದೇವಾಲಯ ಅತ್ಯಂತ ಜನಪ್ರಿಯವಾಗಿತ್ತು. 13ರಿಂದ 16ನೇ ಶತಮಾನದ ಅವಧಿಯಲ್ಲಿ ವಿಜಯನಗರ ಅರಸರು ಈ ಭಾಗವನ್ನು ಆಳಿದ್ದಾರೆ. ಇಂದು ಈ ದೇವಾಲಯ ತಿರುಪತಿ, ತಿರುಮಲ ದೇವಾಲಯದ ಸುಪರ್ದಿಯಲ್ಲಿದ್ದು, ಅದರ ರಕ್ಷಣೆ ಹಾಗೂ ನಿರ್ವಹಣೆಗೆ ಒಳಪಟ್ಟಿದೆ.