ತಿರುವಿಳ್ಪಮಾಲ ಎಂಬುದು ತ್ರಿಶ್ಶೂರಿನಿಂದ 50 ಕಿ.ಮೀ ದೂರದಲ್ಲಿರುವ ಒಂದು ಪ್ರಶಾಂತವಾದ ಹಳ್ಳಿಯಾಗಿದೆ. ಪ್ರಾಥಮಿಕವಾಗಿ ದೇಗುಲ ನಗರಿ ಎಂದು ಖ್ಯಾತಿ ಪಡೆದಿರುವ ಈ ಊರು ಕೃಷ್ಣ ಮತ್ತು ಶಿವನ ದೇವಾಲಯಗಳ ಗುಂಪನ್ನು ಹೊಂದಿದೆ. ಕೇರಳದಲ್ಲಿ ಶ್ರೀ ರಾಮನಿಗಾಗಿ ಹಲವು ದೇವಾಲಯಗಳು ನಿರ್ಮಾಣವಾಗಿಲ್ಲ. ಆದರೆ ತಿರುವಿಳ್ವಮಾಲದಲ್ಲಿನ ವಿಲ್ವಾದ್ರಿನಾಥ್ ದೇವಾಲಯವು ಆ ನಿಟ್ಟಿನಲ್ಲಿ ಸರಿಸಾಟಿಯಿಲ್ಲದ ದೇವಾಲಯವಾಗಿ ನಿಂತಿದೆ. ಇದು ದೇಶದ ಉದ್ದಗಲಕ್ಕು ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಭಟಹಪ್ಪುಳ ನದಿಯ ದಂಡೆಯಲ್ಲಿರುವ ಈ ಸ್ವಾವಲಂಬಿ ಗ್ರಾಮವು ತನ್ನ ಸೌಮ್ಯ ವಾತಾವರಣದಿಂದಾಗಿ ಆಧ್ಯಾತ್ಮಿಕ ಅನುಭವವನ್ನು ಇಮ್ಮಡಿಗೊಳಿಸುತ್ತದೆ.
ಈ ಹಳ್ಳಿಯು ತ್ರಿಶ್ಶೂರ್ ಪೂರಮ್ ಉತ್ಸವಕ್ಕೆ ಹೋಲುವ ಪರಕ್ಕೊಟ್ಟುಕವು ಥಲಪ್ಪೊಲಿ ಉತ್ಸವಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಅಷ್ಟೇ ಅಲ್ಲದೆ ಕಸವು ಅಥವಾ ಕಸೂತಿ ಮಾಡಿದ ರೇಷ್ಮೆ ಸೀರೆಗೆ ಈ ಊರು ಪ್ರಸಿದ್ಧಿಯನ್ನು ಪಡೆದಿದೆ ಎಂಬುದನ್ನು ಮರೆಯಬಾರದು. ತ್ರಿಶ್ಶೂರಿನಿಂದ ಈ ಊರಿಗೆ ಕಾರನ್ನು ಬಾಡಿಗೆ ಪಡೆದು ತಲುಪಬಹುದು.