ಶಂಕರ ಸಮಾಧಿಯು ಅದ್ವೈತ ಪಂಥದ ಪ್ರಸಿದ್ಧ ಪ್ರತಿಪಾದಕರಾದ ಶ್ರೀ ಆದಿ ಶಂಕರರ ಸಮಾಧಿಯನ್ನು ಹೊಂದಿರುವ ಸ್ಥಳ. ಸಾಮಾನ್ಯವಾಗಿ ಎಲ್ಲರು ನಂಬಿರುವಂತೆ ಶ್ರೀ ಶಂಕರರು ತಮ್ಮ 32ನೆ ವಯಸ್ಸಿನಲ್ಲಿ ಅಂದರೆ ಕ್ರಿ.ಶ 820 ರಲ್ಲಿ ತ್ರಿಶ್ಶೂರಿನಲ್ಲಿ ಪರಿನಿರ್ವಾಣ ಹೊಂದಿದರು. ಮಹಾನ್ ಗುರುಗಳಾದ ಶಂಕರರ ಸಮಾಧಿಗೆ ಭೇಟಿ ನೀಡುವ ಭಕ್ತಾಧಿಗಳಿಗಾಗಿ ಇಲ್ಲಿ ಒಂದು ದೇವಾಲಯವನ್ನು ಸರಳವಾಗಿ ನಿರ್ಮಿಸಿದ್ದಾರೆ. ಆದರೆ ಅದರಲ್ಲಿರುವ ಶಂಕರಾಚಾರ್ಯರ ಚಿತ್ರವು ಎಲ್ಲರ ಗಮನ ಸೆಳೆಯುತ್ತದೆ. ನೀವು ಆಸ್ತಿಕರಿಲ್ಲದಿದ್ದರು ಇಲ್ಲಿನ ಪ್ರಶಾಂತವಾದ ವಾತಾವರಣದಲ್ಲಿರುವ ಈ ಸ್ಥಳವು ತನ್ನ ನಯನ ಮನೋಹರವಾದ ಪರಿಸರದಿಂದ ಎಲ್ಲರ ಮನಸೂರೆಗೊಳ್ಳುತ್ತದೆ.
ಇನ್ನು ಆಸ್ತಿಕರಿಗೆ ಈ ಸ್ಥಳದಲ್ಲಿ ಆಧ್ಯಾತ್ಮಿಕತೆಯ ಭಾವ ಪರವಶತೆಯನ್ನು ಅನುಭವಿಸುವ ಅವಕಾಶ ಸಿಗುತ್ತದೆ. ಸ್ವತಃ ಶಂಕರರು ಇಲ್ಲಿ ಸಮಾಧಿ ಹೊಂದಿರುವ ಕಾರಣದಿಂದಾಗಿ ಇಲ್ಲಿನ ವಾತಾವರಣದಲ್ಲಿ ಆಧ್ಯಾತ್ಮಿಕತೆಯ ಕಳೆ ಕಣ ಕಣದಲ್ಲಿ ಲೀನವಾಗಿದೆ. ಇಲ್ಲಿನ ಸೌಮ್ಯತೆಯನ್ನು ಸವಿಯುವ ಸಲುವಾಗಿಯಾದರು ಒಮ್ಮೆ ಇಲ್ಲಿಗೆ ಭೇಟಿಕೊಡಬಹುದು.