ಕೇರಳ ಕಲಾಮಂಡಳಂ ಎಂಬುದು ಕೇರಳದ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಚುರಪಡಿಸುವ ಸಲುವಾಗಿ ಸ್ಥಾಪಿಸಲಾಗಿರುವ ಕೇಂದ್ರವಾಗಿದೆ. ಈ ವಸತಿಯುತ ಶೈಕ್ಷಣಿಕ ಸಂಸ್ಥೆಯನ್ನು ಲಲಿತಕಲೆಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಲಾಗಿದ್ದು, ಇದು ತನ್ನ ಸಂಪೂರ್ಣ ಸಮಯವನ್ನು ಇದಕ್ಕಾಗಿ ಮೀಸಲಿಟ್ಟಿದೆ. ಪ್ರಖ್ಯಾತ ಕವಿ ಪದ್ಮ ಭೂಷಣ ವಲ್ಲತೊಲ್ ನಾರಾಯಣ ಮೆನನ್ ರವರು ಇದನ್ನು 1930 ರಲ್ಲಿ ಸ್ಥಾಪಿಸಿದರು. ನಂತರ ಕಲಾಮಂದಿರವು ಒಂದು ಕಲಿಕಾ ಕೇಂದ್ರವಾಗಿ ರೂಪುಗೊಂಡಿತು. ಕೇರಳ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕಲಾಮಂಡಳಂ ಕಲಾಸಕ್ತರ ಕುತೂಹಲವನ್ನು ತಣಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ.
ಇಲ್ಲಿ ನೋಡಬೇಕಾದ ಅಂಶಗಳಲ್ಲಿ ಇದರ ಮೂಲಕರ್ತ ಮತ್ತು ಖ್ಯಾತ ಕವಿಯಾದ ವಲ್ಲತೋಲ್ ರವರ ವಸ್ತುಸಂಗ್ರಹಾಲಯ, ಕಲಾಮಂಡಲವನ್ನು ನಿರ್ಮಿಸಲು ಶ್ರಮಿಸಿದ ಮಹನೀಯರ ಛಾಯಾಚಿತ್ರ ಪ್ರದರ್ಶನಾಲಯ ಮತ್ತು ವಲ್ಲತೋಲರ ಸಮಾಧಿ(ಕಲಾಮಂಡಲದ ಹಳೆಯ ಕಟ್ಟಡದ ಬಳಿಯಿದೆ) ಸೇರಿವೆ.