ಮಥುರ್ ತೂಗು ಸೇತುವೆಯು ತಿರುವತ್ತೂರು ನಗರದ ಹತ್ತಿರವಿದೆ. ಇದು ನೀರನ್ನು ಸಾಗಿಸಲು ಮಾಡಿರುವ ಜಲಮಾರ್ಗ ಅಥವಾ ಕೊಳವೆ, ಈ ಸೇತುವೆಯನ್ನು, ಪಹ್ ರಲಿ ನದಿಗೆ ಕಟ್ಟಲಾಗಿದೆ. ಈ ಹೆಸರು ಹತ್ತಿರದಲ್ಲೇ ಇರುವ ವಾಥುರಾ ಎಂಬ ಗ್ರಾಮದಿಂದ ಬಂದಿದೆ. ಈ ಮಥುರ ಸೇತುವೆಯ ತಿರುವತ್ತೂರಿಗೆ ಮೂರು ಕಿ.ಮೀ ದೂರದಲ್ಲಿದೆ ಮತ್ತು ಕನ್ಯಾಕುಮಾರಿಗೆ 60 ಕಿ.ಮೀ. ದೂರದಲ್ಲಿದೆ. ಈ ಸೇತುವೆಯು ದಕ್ಷಿಣ ಏಷ್ಯಾದಲ್ಲಿಯೇ ಎತ್ತರವಾದ ಮತ್ತು ದೊಡ್ಡದಾದ ನೀರಿನ ಕೊಳವೆ (ಜಲಮಾರ್ಗ) ಎಂಬ ಹೆಗ್ಗಳಿಕೆ ಪಡೆದಿದೆ.
1966 ರಲ್ಲಿ ಬರ ಪರಿಹಾರಕ್ಕಾಗಿ ಕಟ್ಟಿಸಿದ ಈ ಸೇತುವೆ ಈಗ ದಕ್ಷಿಣ ಭಾರತದಲ್ಲಿಯೇ ಪ್ರಖ್ಯಾತ ಪ್ರವಾಸಿ ತಾಣವೆಂದು ಹೆಸರು ಪಡೆದಿದೆ. ಫ್ರವಾಸಿಗರನ್ನು ಆಕರ್ಷಿಸಲು, ಪ್ರವಾಸೋದ್ಯಮ ಇಲಾಖೆಯು ಇರುವ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಪ್ರವಾಸಿಗರು ಹೆಚ್ಚು ಹೆಚ್ಚಾಗಿ ಈ ಕ್ಷೇತ್ರಕ್ಕೆ ಬರಲೆಂದು, ಜಲಮಾರ್ಗದ ಸುತ್ತಲಿನ ಸ್ಥಳವನ್ನು ವರ್ಶಂಪೂರ್ತಿ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ.
ಈ ಜಲಮಾರ್ಗದ ಮಧ್ಯದಿಂದ ಹಸಿರು ನೆಲವನ್ನು, ನಿಧಾನವಾಗಿ ಜಾರುತ್ತಿರುವ ಪಶ್ಚಿಮ ಘಟ್ಟಗಳನ್ನು ಮತ್ತು ನಿಧಾನವಾಗಿ ಸರಿದಂತೆ ಕಾಣುತ್ತಿರುವ ಹುಲ್ಲುಗಾವಲುಗಳನ್ನು ನೋಡಬಹುದು.