ಹಿಂದೂ ಪುರಾಣಗಳಲ್ಲಿನ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನವಿದು. ಸಾಮಾನ್ಯವಾಗಿ ದೇವಿಯು ಉಳಿದ ದೇವರುಗಳ ಜೊತೆಯಲ್ಲಿ ಪೂಜೆಗೊಳ್ಳುವುದು ಹೆಚ್ಚು. ದೇವಿಯ ಆರಾಧನೆಗೆಂದೇ ಮೀಸಲಾದ ದೇವಾಲಯಗಳು ಅಪರೂಪ. ತಮಿಳುನಾಡಿನಲ್ಲಿ ಇದೊಂದೇ ಸರಸ್ವತಿಯ ದೇವಾಲಯ. ಮೈಲಾದುತುರೈ- ತಿರುವರೂರು ಮಾರ್ಗದಲ್ಲಿ 25 ಕಿಮೀ ದೂರದಲ್ಲಿನ ಕೊತ್ತನೂರಿನಲ್ಲಿ ಈ ದೇಗುಲವಿದೆ. ಈ ಸ್ಥಳವು ಹೆಸರಾಂತ ಕವಿ ಒಟ್ಟಕೊತ್ತಾರನ ಜನ್ಮಸ್ಥಳ. ಇದು ಗಂಗೆ, ಯಮುನ ಮತ್ತು ಸರಸ್ವತಿ ನದಿಗಳ ಸಂಗಮಸ್ಥಾನ ಎಂದು ನಂಬಲಾಗಿದೆ. ಈ ಸಂಗಮವನ್ನು ಹರಿಸೋಲ್ ನದಿ ಅಥವ ಅರಸಲಾರು ನದಿ ಎಂದು ಸ್ಥಳೀಯರು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಮುಖ್ಯ ಹಬ್ಬ ವಿಜಯದಶಮಿ. ಈ ದೇವಸ್ಥಾನಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ವಿಜಯದಶಮಿ ಮತ್ತು ಮಹಾನವಮಿ.