ರಾಜಗೋಪಾಲಸ್ವಾಮಿ ದೇವಸ್ಥಾನವು ಭಕ್ತಾದಿಗಳಲ್ಲಿ ‘ದಕ್ಷಿಣದ ದ್ವಾರಕ’ ಎಂದು ಪ್ರಸಿದ್ಧವಾದದ್ದು. ಇಲ್ಲಿ ಕೃಷ್ಣನು ರಾಜಗೋಪಾಲಸ್ವಾಮಿಯೆಂದು ಪೂಜಿಸಲ್ಪಡುತ್ತಾನೆ. ದೇವಸ್ಥಾನದ ಪ್ರಾಂಗಣವು 23 ಎಕರೆಗಳಷ್ಟು ವಿಸ್ತೀರ್ಣವಾಗಿದೆ. ಇದರಲ್ಲಿ 24 ಮಂದಿರಗಳು, 16 ಎತ್ತರದ ಗೋಪುರಗಳು, 7 ಪ್ರಾಂಗಣಗಳು, 7 ಅಂಗಳಗಳು ಮತ್ತು 9 ಕಲ್ಯಾಣಿಗಳಿವೆ. ಇದು ಕುಲೋತ್ತುಂಗ ಚೋಳನ ಕಾಲದಲ್ಲಿ ನಿರ್ಮಾಣಗೊಂಡಿತು. ಅವನ ನಂತರದ ಚೋಳ ವಂಶದ ರಾಜರುಗಳ ಕಾಲದಲ್ಲಿ ಹಲವು ಬದಲಾವಣೆಗಳನ್ನು ಕಂಡಿತು. ಮುಂದೆ ನಾಯಕ ವಂಶದವರು ಇದನ್ನು ವಿಸ್ತರಿಸಿದರು. ದೇವಸ್ಥಾನದ ಕಲ್ಯಾಣಿಯನ್ನು ಹರದಿದ್ರಾನದಿ ಎಂದು ಕರೆಯುತ್ತಾರೆ. ಇದು 1158 ಅಡಿ ಉದ್ದ ಮತ್ತು 837 ಅಡಿ ಅಗಲವಿದೆ. ಇದು ಭಾರತದಲ್ಲಿನ ಕಲ್ಯಾಣಿಗಳಲೆಲ್ಲ ದೊಡ್ಡದಾದದ್ದು. ಈ ದೇವಸ್ಥಾನಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ತಮಿಳು ತಿಂಗಳಾದ ಪಾನ್ಗುಣಿ ಅಂದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು. ಈ ಸಮಯದಲ್ಲಿ ಪಾನ್ಗುಣಿ ತಿರುವಿಳ ಹಬ್ಬವು 16 ದಿನಗಳ ಕಾಲ ದೇವಸ್ಥಾನದಲ್ಲಿ ನಡೆಯುತ್ತದೆ.