ತಿರುವನಂತಪುರಂ ಜಿಲ್ಲೆಯ ಹೃದಯ ಭಾಗದಲ್ಲಿ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವಿದೆ. ಇದು ಶ್ರೀ ವಿಷ್ಣುವಿನ ದೇವಸ್ಥಾನವಾಗಿದೆ. ಈ ದೇವಾಲಯದ ಆಡಳಿತವನ್ನು ತಿರುವಾಂಕೂರಿನ ಶ್ರೀಮಂತ ರಾಜ ಮನೆತನದವರಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ.
ಇಲ್ಲಿರುವ ಪದ್ಮನಾಭ ಸ್ವಾಮಿ ವಿಗ್ರಹವು ಪ್ರಮುಖ ಆಕರ್ಷಣೆಯಾಗಿದೆ. ಮಹಾ ವಿಷ್ಣು ಸಹಸ್ರ ತಲೆಯಿರುವ, ಹೆಡೆಯೆತ್ತಿರುವ ಕಾಳಿಂಗ ಸರ್ಪದ ಮೇಲೆ ವಿರಾಜಮಾನವಾಗಿ ಮಲಗಿರುವ ಮಹಾ ವಿಷ್ಣುವಿನ ಮೂರ್ತಿ ಇಲ್ಲಿನ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದು ತಿರುವನಂತಪುರ ನಗರದ ಕೀರ್ತಿಯನ್ನು ಹೆಚ್ಚಿಸಿದೆ. ವಿಷ್ಣುವಿನ ಪಕ್ಕದಲ್ಲಿ ವಿಷ್ಣುವಿನ ಪತ್ನಿ ಶ್ರೀದೇವಿ ಮತ್ತು ಭೂದೇವಿಯ ವಿಗ್ರಹಗಳನ್ನು ಕಾಣಬಹುದು.
ಪದ್ಮನಾಭ ಸ್ವಾಮಿ ದೇವಾಲಯವು 12,000 ಸಾಲಿಗ್ರಾಮಗಳಿಂದ ಮಾಡಲ್ಪಟ್ಟಿದೆ ಹಾಗೂ ಈ ದೇವಾಲಯದಲ್ಲಿ 90,000 ಕೋಟಿ ಬೆಲೆ ಬಾಳುವ ಚಿನ್ನದ ವಿಗ್ರಹಗಳು, ಬಂಗಾರ , ಪ್ರಾಚೀನ ಬೆಳ್ಳಿ, ವಜ್ರ ವೈಢೂರ್ಯಗಳು, ಮುತ್ತು ರತ್ನದ ಹರಳುಗಳು ಇವೆ. ಇಲ್ಲಿ ಎರಡು ಚಿನ್ನದ ತೆಂಗಿನ ಕಾಯಿಗಳಿದ್ದು ಅದರಲ್ಲಿ ಬೆಲೆಬಾಳುವ ಹರಳುಗಳೂ ಇವೆ.
ಈ ದೇವಾಲಯದಲ್ಲಿ 6 ವರ್ಷಗಳಿಗೊಮ್ಮೆ 56 ದಿನಗಳ ಮುರ್ಜಾಪನ್ ನಡೆಸಲಾಗಿತ್ತದೆ. ಈ ಸಮಯದಲ್ಲಿ ಒಂದು ದಿನವಾದರೂ ತಿರುವನಂತಪುರಂ ಗೆ ಭೀಟಿ ನೀಡಲೇ ಬೇಕು.