ನೆಯ್ಯರ್ ಅಣೆಕಟ್ಟನ್ನು 1958 ರಲ್ಲಿ ಕಟ್ಟಲಾಯಿತು. ಈ ಅಣೆಕಟ್ಟನ್ನು ನೆಯ್ಯರ್, ಕಲ್ಲಾರ್ ಮತ್ತು ಮುಲ್ಯಾರ್ ಈ ಮೂರು ನದಿಗಳು ಸೇರುವಲ್ಲಿ ಕಟ್ಟಲಾಗಿದೆ. ಈ ಸ್ಥಳ ಪಿಕ್ ನಿಕ್ ಗೆ ಮತ್ತು ಕುಟುಂಬ ವಿಹಾರಕ್ಕೆ ಹೋಗಲು ಅತ್ಯುತ್ತಮವಾದ ಸ್ಥಳವಾಗಿದೆ. ಈ ಪ್ರದೇಶದ ಸಮೀಪದ ಮನೆಗಳಲ್ಲಿ ವೈಶಿಷ್ಠ್ಯ ಜಾತಿಯ ಹೂಗಳು ಮತ್ತು ಪ್ರಾಣಿಗಳ ಸಂಕುಲಗಳನ್ನು ಕಾಣಬಹುದು. ಅಲ್ಲದೇ ಇಲ್ಲಿ ವನ್ಯ ಜೀವಿಗಳ ರಕ್ಷಣೆಗಾಗಿ ವನ್ಯ ಜೀವಿ ಅಭಯಾರಣ್ಯವನ್ನು ಸ್ಥಾಪಿಸಲಾಗಿದೆ. ಇಲ್ಲಿ ಸಫಾರಿಗೆ ಸೌಲಭ್ಯ ಕಲ್ಪಿಸಲಾಗಿದ್ದು ಇದರಲ್ಲಿ ನೀವು ಹೋದರೆ ಜಿಂಕೆ, ಸಿಂಹ ಈ ರೀತಿಯ ಕಾಡುಪ್ರಾಣಿಗಳನ್ನು ನೋಡಬಹುದು. ಅಲ್ಲದೇ ಇಲ್ಲಿ ಮೊಸಳೆಗಳಿಗಾಗಿ ನೀರಿರುವ ಸರೋವರದಂತಹ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಲ್ಲಿ ದೊಡ್ಡ-ದೊಡ್ಡ ಮೊಸಳೆಗಳು ಬಂಡೆ ಕಲ್ಲಿನ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಲಗಿರುವುದನ್ನು ಕಾಣಬಹುದು. ಅಲ್ಲದೇ ಸರಿಸೃಪಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಈ ಅಭಯಾರಣ್ಯಕ್ಕೆ ಹೋಗಲು ಪ್ರವೇಶ ಶುಲ್ಕವನ್ನು ಪಾವತಿಸಬೇಕು. ದಿನವಿಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಬಹುದು. ಇಲ್ಲಿಂದ 7 ಕಿ. ಮೀ ದೂರಲ್ಲಿ ಆನೆಗಳಿಗಾಗಿಯೇ ಮೀಸಲಿಟ್ಟ ತಂಗುದಾಣವಿದೆ. ಇಲ್ಲಿ ಆನೆ ಸವಾರಿ ಕೂಡ ಹೋಗಬಹುದು. ಇಲ್ಲಿಗೆ ನಿಮ್ಮ ಮಕ್ಕಳನ್ನು ಕರೆ ತಂದರೆ ಅವರು ಹಿಂತಿರುಗಿ ಮನೆಗೆ ಹೋಗುವ ಮಾತನ್ನೇ ಆಡುವುದಿಲ್ಲ ! ಅಂತಹ ಸೊಬಗಿನ ತಾಣ ತಿರುವನಂತಪುರಂ ನಲ್ಲಿರುವ ವನ್ಯ ಮೃಗ ಅಭಯಾರಣ್ಯ !
ತಿರುವನಂತಪರನಲ್ಲಿರುವ ಕಂಗೆಡಿಸುವ ಗೆಟ್ ವೇಯನ್ನು ತಲುಪಲು ಹೆಚ್ಚಿನ ಶ್ರಮವೇನಿಲ್ಲ. ತಿರುವನಂತಪುರಂ ನಿಂದ ಕೇವಲ 32 ಕಿ.ಮೀ ದೂರ ಸಾಗಬೇಕು. ಈ ಪ್ರದೇಶಕ್ಕೆ ಬಸ್ಸಿನಲ್ಲಿ ಅಥವಾ ನಿಮ್ಮ ಸ್ವಂತ ವಾಹನಗಳಲ್ಲಿ ಅಥವಾ ಬಾಡಿಗೆ ವಾಹನಗಳಲ್ಲಿ ಈ ಸ್ಥಳಕ್ಕೆ ಹೋಗಬಹುದು. ಆದರೆ ಈ ಸ್ಥಳದ ಸೌಂದರ್ಯವನ್ನು ಅನುಭವಿಸಲು ನಿಮ್ಮ ಪ್ರವಾಸದ ಒಂದು ದಿನವನ್ನು ಸಂಪೂರ್ಣವಾಗಿ ಇಲ್ಲಿಗೇ ಮೀಸಲಿಡಬೇಕಾಗುತ್ತದೆ. ಅಷ್ಟು ವಿವಿಧ ಪ್ರಾಣಿ ಪಕ್ಷಿಗಳ ನೆಲೆ ಬೇಕಾಗುತ್ತದೆ. ವನ್ಯ ಜೀವಿ ಅಭಯಾರಣ್ಯ.