ಶ್ರೀ ವಲ್ಲಭ ದೇವಾಲಯ, ದಕ್ಷಿಣ ತಿರುಪತಿ ಎಂದೇ ಹೆಸರುವಾಸಿಯಾಗಿದೆ. ಈ ದೇವಾಲಯವು ದೇವರ ಆರಾಧಕರಾದ ಭಕ್ತಾದಿಗಳಿಗೆ ಮಾತ್ರವಲ್ಲದೇ ದೇಶ ವಿದೇಶದ ಎಲ್ಲಾ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಕೇವಲ ಮೌಲ್ಯಯುತ ಧಾರ್ಮಿಕ ಭಾವನೆಗಳು ಮಾತ್ರವಲ್ಲದೇ ಇಲ್ಲಿಗೆ ಬರುವ ಪ್ರವಾಸಿಗರಿಗೆ ಭಾರಿ ಭೋಜನವನ್ನು ನೀಡುತ್ತದೆ ಶ್ರೀ ವಲ್ಲಭ ದೇವಾಲಯ. ಪುರಾತನವಾದ ಈ ದೇವಾಲಯದ ವಿಗ್ರಹವು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ಹಲವಾರು ಸೂಕ್ಷ್ಮ ಮಾದರಿಯ ಕೆತ್ತನೆಗಳನ್ನು ಹಾಗೂ ಭಿತ್ತಿಚಿತ್ರಗಳನ್ನು ಇದರಲ್ಲಿ ಕಾಣಬಹುದು. ’ಉತ್ತರಶ್ರೀಬಲಿ’ ಇಲ್ಲಿ ಆಚರಿಸಲಾಗುವ ಹಬ್ಬವಾಗಿದ್ದು ಮಾರ್ಚ್ ಹಾಗೂ ಎಪ್ರೀಲ್ ನಲ್ಲಿ ಆಯೋಜಿಸಲಾಗುತ್ತದೆ. ಕೆಟ್ಟುಕಜಾ/ಳಾ ಮೆರವಣಿಗೆಗೆ ಇದು ಪ್ರಸಿದ್ಧವಾಗಿದೆ. ಈ ಮೆರೆವಣಿಗೆಯಲ್ಲಿ, ವರ್ಣಮಯ ಫ್ಲೋಟ್ ಗಳು, ಅಲಂಕಾರಿಕ ಆನೆಗಳು, ಹಾಗೂ ತಾಳವಾದ್ಯಗಳನ್ನು ಬಳಸಲಾಗುತ್ತದೆ. ಈ ಸಮಯದಲ್ಲಿ ತಿರುವಲ್ಲಾ ಬೀದಿಗಳು ರಂಗಿನಿಂದ ಕೂಡಿದ್ದು ರೋಮಾಂಚನವನ್ನುಂಟು ಮಾಡುತ್ತವೆ. ಸಮೃದ್ಧ ಹಸಿರಿನ ಹಾಸಿಗೆ, ಮರ ಗಿಡಗಳು ಪಟ್ಟಣವನ್ನು ಆವರಿಸಿರುತ್ತವೆ. ಈ ಸುಸಂದರ್ಭವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ !
ಶ್ರೀ ವಲ್ಲಭ ದೇವಾಲಯವು ಉಳಿದ ಎಲ್ಲಾ ದೇವಾಲಯಗಳಿಂಗಿಂತ ವಿಭಿನ್ನವಾಗಿದ್ದು, ಪ್ರತಿ ದಿನ ಕಥಕ್ಕಳಿ ಪ್ರದರ್ಶನವಾಗುವ ಕೇರಳದ ಏಕೈಕ ದೇವಾಲಯವೆಂದರೆ ಅದು ಶ್ರೀ ವಲ್ಲಭ ದೇವಾಲಯ. ಇಲ್ಲಿನ ಇನ್ನೊಂದು ವಿಶೇಷತೆಯೆಂದರೆ ಇಲ್ಲಿನ ವಿಗ್ರಹದ ಕೆತ್ತನೆ ಹಾಗೂ ವಾಸ್ತುಶಿಲ್ಪವು ವಿಷ್ಣುವಿನ ಭಕ್ತರಲ್ಲದವರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಗರುಡದೇವನ ವಿಗ್ರಹದ ಜೊತೆಗೆ ಇಲ್ಲಿನ 50 ಫಿಟ್ ಎತ್ತರದಲ್ಲಿರುವ ಧ್ವಜವು ಒಂದೇ ಕಲ್ಲಿನಿಂದ ಕೆತ್ತಿದ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ.