ಪಾಂಡಿಚೆರಿಯಲ್ಲಿರುವ ತಿರುನಲ್ಲಾರಿನ ಶನಿ ಮಹಾತ್ಮ ದೇವಾಲಯವು ಅತ್ಯಂತ ಪ್ರಸಿದ್ದ ಶನಿ ಮಹಾತ್ಮನ ದೇವಾಲಯವಾಗಿದ್ದು, ಮೂಲತಃ ಇದು ಶ್ರೀ ದರ್ಬಾರಣ್ಯೇಶ್ವರ್ ಎಂದು ಕರೆಯಲ್ಪಡುವ ಈಶ್ವರನ ದೇವಾಲಯವಾಗಿದೆ. ಹಲವಾರು ಭಕ್ತರು ಈ ಇಬ್ಬರು ದೇವರುಗಳ ದರ್ಶನ ಪಡೆಯುವ ಸಲುವಾಗಿ ಆಗಮಿಸುತ್ತಿರುತ್ತಾರೆ.
ತಮಿಳುನಾಡಿನಲ್ಲಿರುವ ನವಗ್ರಹ ದೇವಾಸ್ಥಾನಗಳಲ್ಲಿ ಒಂದಾಗಿರುವ ಈ ದೇವಾಲಯವು ಶನೇಶ್ವರನ ದೇವಾಲಯವಾಗಿದೆ. ಈ ಮೊದಲೆ ಹೇಳಿದಂತೆ ಇಲ್ಲಿ ಶನೇಶ್ವರನಿಗಾಗಿ ದೇವಾಲಯವಿದೆ, ಆದರೆ ಈ ದೇವಾಲಯವನ್ನು ಮೂಲತಃ ಶಿವನಿಗಾಗಿ ನಿರ್ಮಿಸಲಾಗಿದೆ. ಅಭಯ ವರದ ಹಸ್ತ ಮುದ್ರೆಯನ್ನು ಹೊಂದಿರುವ ಸ್ವಾಮಿಯ ವಿಗ್ರಹವು ಪೂರ್ವಾಭಿಮುಖವಾಗಿ ನಿಂತಿದೆ. ಇಲ್ಲಿನ ಸ್ವಾಮಿಯನ್ನು ಇಲ್ಲಿ ಹಿಂದೆಯೇ ಇದ್ದ ದೇವರುಗಳ ಜೊತೆಗೆ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವನ್ನು ಚೋಳ ರಾಜರು ನಿರ್ಮಿಸಿದ್ದಾರೆ.
ಈ ದೇವಾಲಯವನ್ನು ಕಾವೇರಿ ನದಿಯ ದಕ್ಷಿಣ ದಂಡೆಯ ಮೇಲೆ ನಿರ್ಮಿಸಲಾಗಿದೆ. ಅಲ್ಲದೇ ಈ ದೇವಾಲಯವನ್ನು ಶನಿ ಮಹಾತ್ಮನಿಗಾಗಿ ನಿರ್ಮಿಸಲಾಗಿರುವ ಅತ್ಯಂತ ಪವಿತ್ರ ದೇವಾಲಯವೆಂದು ಪರಿಗಣಿಸಲಾಗಿದೆ. ಇಲ್ಲಿ ತ್ಯಾಗರಾಜ ಮತ್ತು ತಿರುನಲ್ಲಾರರ ಸಪ್ತವಾಟಿಕಾ ಸ್ಥಳಗಳನ್ನೂ ಸಹ ಕಾಣಬಹುದಾಗಿದೆ. ಶನೇಶ್ವರನ ದಯೆ ಇರದೆ ಇದ್ದಲ್ಲಿ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ನಾವು ಕಾಣಬೇಕಾಗುತ್ತದೆ. ಆದರೆ ತಿರುನಲ್ಲಾರಿನ ಈ ದೇವಾಲಯವನ್ನು ನಾವು ಸಂದರ್ಶಿಸುವುದರಿಂದ ಶನಿಯ ಕೃಪಾ ಕಟಾಕ್ಷಕ್ಕೆ ನಾವು ಪಾತ್ರರಾಗಬಹುದೆಂದು ಇಲ್ಲಿ ಹೇಳಲಾಗುತ್ತದೆ.