ಕುಂಬಕೋಣಂನಿಂದ ದಕ್ಷಿಣಕ್ಕೆ 7 ಕಿ.ಮಿ ದೂರದಲ್ಲಿ, ತಿರುನಾಗೇಸ್ವರಂನಿಂದ ಕೇವಲ ಅರ್ಧ ಕಿ.ಮಿ ದೂರದಲ್ಲಿರುವ ದೇಗುಲ ಒಪ್ಪಿಲಿಯಪ್ಪನ್ ದೇವಾಲಯ. ಈ ದೇವಾಲಯವು ಪೆರುಮಲನ ನೂರಾಎಂಟು ದಿವ್ಯದೆಸಗಳಲ್ಲೊಂದು. ಹಾಗು ಇದು ಭೂಮಾದೇವಿಯ ಜನ್ಮಭೂಮಿ(ಅವತಾರ ಸ್ಥಳ) ಯಾಗಿದೆ. ಇಲ್ಲಿ ವಿಷ್ಣುವು (ಪೆರುಮಲನ) ಒಪ್ಪಿಲಿಯಪ್ಪನ್ ರೂಪದಲ್ಲಿಯೂ ಅವನ ಪತ್ನಿಯು ಭೂಮಾದೇವಿಯ ರೂಪದಲ್ಲಿಯೂ ಪೂಜಿಸಲ್ಪಡುವರು.ಇಲ್ಲಿ ಮಾಡುವ ಯಾವುದೇ ಪ್ರಸಾದ ಅಥವಾ ಅಡಿಗೆಗೆ ಉಪ್ಪನ್ನು ಹಾಕುವುದಿಲ್ಲ. ಉಪ್ಪಿರುವ ಯಾವುದೇ ಪದಾರ್ಥವನ್ನು ದೇವಾಲಯದ ಒಳಗೆ ಕೊಂಡೊಯ್ಯುವುದಿಲ್ಲ. ಈ ದೇಗುಲದಲ್ಲಿ ಉಪ್ಪು ತಂದರೆ ಅದನ್ನು ಪಾಪ ಎಂದು ಪರಿಗಣಿಸಲಾಗುವುದು.
ಪೆರುಮಲನ ಮತ್ತು ಭೂಮಾದೇವಿಯನ್ನು ಪೂಜಿಸಿದರೆ ದಂಪತಿಗಳಲ್ಲಿ ಹೊಂದಾಣಿಕೆ ನೆಲೆಸಿ, ಅವರ ದಾಂಪತ್ಯ ಸುಖವಾಗಿರುವು ಎಂಬ ನಂಬಿಕೆ ಇದೆ. ಈ ದೇವಾಲಯದಲ್ಲಿ ಪ್ರಮುಖವಾಗಿ ಮೂರು ಉತ್ಸವಗಳನ್ನು ಆಚರಿಸುವರು. ಅಕ್ಟೋಬರ-ನವೆಂಬರನಲ್ಲಿ ಬ್ರಹ್ಮೋತ್ಸವ ಹಾಗು ಸೆಪ್ಟಂಬರ-ಅಕ್ಟೋಬರ ನಲ್ಲಿ ಪುರಟ್ಟಸಿ ಉತ್ಸವ ಮತ್ತು ಮಾರ್ಚ-ಎಪ್ರಿಲ್ ನಲ್ಲಿ ಪಂಗುನಿ ಉತ್ಸವ.