ಪಂಚಲಂಕುರಿಚಿ ಕೋಟೆ, ಕಟ್ಟಬೊಮ್ಮನ್ ಸ್ಮಾರಕ ಕೋಟೆ ಎಂದೂ ಕರೆಯಲ್ಪಡುವ ಈ ಕೋಟೆಯು ಸಲಿಕುಲಂ ನಲ್ಲಿರುವ ಒಂದು ಚಾರಿತ್ರಿಕ ಸ್ಥಳ. ಪಂಡಿತರ ಪ್ರಕಾರ ಈ ಕೋಟೆಯನ್ನು 18 ನೇ ಶತಮಾನದಲ್ಲಿ, ಪಂಚಲಂಕುರಿಚಿಯ ರಾಜನಾಗಿದ್ದ ವೀರ ಪಾಂಡ್ಯ ಕಟ್ಟಬೊಮ್ಮನ್ ಅವರು ಕಟ್ಟಿಸಿದ್ದರು.
ಈ ಕೋಟೆಗೆ ಅನೇಕ ಸ್ವಾತಂತ್ರ ಹೋರಾಟಗಾರರು ಹಾಗೂ ರಾಜರುಗಳ ಜೊತೆ ಸಂಬಂಧವಿದೆ. 1799 ರಲ್ಲಿ ಬ್ರಿಟಿಷರು ಈ ಕೋಟೆಯನ್ನು ನಾಶಗೊಳಿಸಿ, ರಾಜಾ ವೀರ ಪಂದ್ಯ ಕಟ್ಟಬೊಮ್ಮನ್ ಅವರನ್ನು ಸೆರೆ ಹಿಡಿದರು. ಇವರ ಸಹೋದರ, ಬ್ರಿಟಿಷರಿಂದ ಈ ಕೋಟೆಯನ್ನು ಪುನಃ ಹಿಂದಕ್ಕೆ ಪಡೆದುಕೊಂಡರು. ಸ್ವಾತಂತ್ರ ಸಿಕ್ಕಿದ ಬಳಿಕ, ಭಾರತದ ಪುರಾವಸ್ತು ಗವೇಷಣ ಸಮೀಕ್ಷೆ ಈ ಕೋಟೆಯನ್ನು ಸಂರಕ್ಷಿಸುತ್ತದೆ.
1974 ರಲ್ಲಿ ತಮಿಳುನಾಡು ಸರಕಾರವು ಪಂಚಲಂಕುರಿಚಿ ಕೋಟೆಯ ನೆನಪಿಗೋಸ್ಕರ ಹೊಸ ಕೋಟೆಯನ್ನು ಕಟ್ಟಿ ಅದನ್ನು ಕಟ್ಟಬೊಮ್ಮನ್ ಮೆಮೋರಿಯಲ್ ಫೋರ್ಟ್ ಎಂದು ನಾಮಕರಣ ಮಾಡಿತು. ಕಟ್ಟಬೊಮ್ಮನ್ ಅವರ ಕುಲದೇವತೆಯಾಗಿದ್ದ ಜಕ್ಕಮ್ಮಾಳ್ ಗೆ ಈ ಕೋಟೆಯ ಪರಿಸರದಲ್ಲಿ ಒಂದು ಗುಡಿಯನ್ನೂ ಕಟ್ಟಲಾಗಿದೆ. ಇತಿಹಾಸವನ್ನು ಇಷ್ಟಪಡುವ ಯಾತ್ರಿಗಳು ಈ ಸ್ಥಳವನ್ನು ಭೇಟಿ ನೀಡಲೇಬೇಕು.