ಕುಚನೂರು ಶನಿ ದೇವಾಲಕ್ಕೆ ಪ್ರಸಿದ್ಧವಾದದ್ದು. ಭಾರತದಲ್ಲಿ ಕಂಡುಬರುವ ಕೇವಲ ಶನಿ ದೇವರಿಗೆಯೇ ಅರ್ಪಿತವಾಗಿರುವ ದೇವಾಲಯಗಳಲ್ಲಿ ಇದೂ ಒಂದು. ಶನಿಯು ಈ ಪ್ರದೇಶದಲ್ಲಿ ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷನಾಗಿದ್ದಾನೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಪ್ರದೇಶಕ್ಕೆ ಶನಿ ದೇವರ ಹೆಸರುಗಳಲ್ಲಿ ಒಂದಾದ ಕುಬ್ಜನೂರ್ ಎಂಬ ಹೆಸರು ಬಂದಿತು. ಕ್ರಮೇಣ ಇದು ಕುಚನೂರು ಎಂದಾಯಿತು. ಕುಚನೂರು ಹಳ್ಳಿಯಲ್ಲಿ ಹರಿಯುವ ಸುರಭಿ ಎನ್ನುವ ನದಿ ದಂಡೆಯ ಮೇಲೆ ಈ ಶನಿದೇವಾಲಯವಿದೆ.
ಇಲ್ಲಿ ಉತ್ತರ ದಿಕ್ಕಿಗೆ ಮುಖಮಾಡಿದ ವದಗುರು ದೇವಸ್ಥಾನವಿದೆ. ಇದೊಂದು ಪುರಾತನವಾದ ದೇವಾಲಯ. ದೇವತೆಗಳ ಅಧಿಪತಿಯಾದ ಇಂದ್ರನು ಇಲ್ಲಿ ಪೂಜೆ ಸಲ್ಲಿಸುತ್ತಿದ್ದ ಎಂಬುದು ಇಲ್ಲಿನ ಸ್ಥಳಪುರಾಣ. ಇಲ್ಲಿ ಹನುಮಂತನ ಮತ್ತು ಪಂಚಮುಖಿ ಗಣೇಶನ ದೇವಾಲಯವಿದೆ. ತೇಣಿಯಿಂದ ಕುಚನೂರು 20 ಕಿಮೀ ದೂರದಲ್ಲಿದೆ. ಪ್ರತಿ ವರ್ಷವೂ ಭಾರತದ ವಿವಿಧ ಭಾಗಗಳಿಂದ ಜನ ತಮ್ಮ ಮೇಲಾದ ಶನಿಯ ಕೆಟ್ಟ ಪ್ರಭಾವಗಳಿಂದ ಮುಕ್ತಗೊಳ್ಳಲು ಇಲ್ಲಿಗೆ ಬರುತ್ತಾರೆ.