ಕೈಲಾಸನಾಥರ್ ಗುಹಾಂತರ ದೇವಾಲಯವು ಸುರುಳಿ ಜಲಪಾತದ ಬಳಿಯಿದೆ. ಈ ಗುಹಾಂತರ ದೇವಾಲಯವು ಸಮುದ್ರ ಮಟ್ಟದಿಂದ 800 ಅಡಿಗಳಷ್ಟು ಎತ್ತರದಲ್ಲಿದೆ. ಆಡಿ, ಥೈ ಮತ್ತು ಚಿತ್ತುತ್ತಿರೈ ತಿಂಗಳುಗಳಲ್ಲಿ ಈ ದೇವಾಲಯದಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ತಮಿಳಿನ ಮಹಾಕಾವ್ಯ ಶಿಲಪ್ಪದಿಗಾರಂನಲ್ಲಿ ಹೇಳಲಾಗಿದೆ.
ಇಲ್ಲೊಂದು ನೈಸರ್ಗಿಕ ಚಿಲುಮೆಯಿದ್ದು ಇದರ ನೀರಿಗೆ ಔಷಧೀಯ ಗುಣಗಳಿವೆ ಎಂದು ಹೇಳುತ್ತಾರೆ. ಈ ದೇವಾಲಯದ ಸಮೀಪವೇ ಒಂದು ದರ್ಗಾ ಕೂಡ ಇದೆ. ಇದಕ್ಕೆ 17ನೇ ಶತಮಾನದ ಮುಸ್ಲಿಂ ಸಂತ ಅಬೂಬಕರ್ ಮಸ್ತಾನರ ಹೆಸರಿಡಲಾಗಿದೆ. ಶನಿವಾರಗಳಂದು ಭಕ್ತಾದಿಗಳು ದೇವಾಲಯಕ್ಕೆ ಹಾಲಿನ ಮಡಕೆಗಳನ್ನು ಕೊಂಡೊಯ್ಯುತ್ತಾರೆ.