ವಿಜಯನಗರ ಕೋಟೆ ಬೃಹದೀಶ್ವರ ದೇವಸ್ಥಾನದಿಂದ ಎರಡು ಕಿಲೋಮೀಟರು ಈಶಾನ್ಯ ದಿಕ್ಕಿನಲ್ಲಿದೆ. 16 ನೇ ಶತಮಾನದ ಮಧ್ಯಭಾಗದಲ್ಲಿ ನಾಯಕ್ ಮತ್ತು ಮರಾಠ ದೊರೆಗಳ ಪ್ರಯತ್ನದಿಂದ ಈ ಕೋಟೆಯ ನಿರ್ಮಾಣವಾಯಿತು. ತಂಜಾವೂರ್ ಅರಮನೆ, ಸಂಗೀತ ಮಹಲ್, ತಂಜಾವೂರ್ ಕಲಾಭವನ , ಶಿವಗಂಗಾ ಉದ್ಯಾನ ಮತ್ತು ಸರಸ್ವತಿ ಮಹಲ್ ವಾಚನಾಲಯಗಳು ಈ ಕೋಟೆಯ ಒಳಗೆ ಸ್ಥಿತಿಯಾಗಿದೆ. ಅರಮನೆಯನ್ನು ಶತ್ರುಗಳು ಹಾಗೂ ಕಳ್ಳಕಾಕರಿಂದ ರಕ್ಷಿಸಲು ಈ ಕೋಟೆಯನ್ನು ನಿರ್ಮಿಸಲಾಯಿತು. ಈ ಕೋಟೆಯ ಹೆಚ್ಚಿನ ಭಾಗವು ಹಾನಿಗೊಂಡಿದ್ದು, ಒಂದು ಭಾಗವನ್ನು ಸಾರ್ವಜನಿಕರಿಗೊಸ್ಕರ ತೆರೆದಿರಿಸಲಾಗಿದೆ.
ಕಲೆ, ವಾಸ್ತು ಮತ್ತು ಇತಿಹಾಸದಲ್ಲಿ ಆಸಕ್ತ ಪ್ರವಾಸಿಗರು ಈ ಕೊಟೆ ಮತ್ತು ಅದರ ಸುತ್ತಲಿನ ಸ್ಥಳಗಳನ್ನು ನೋಡಲೇಬೇಕಾಗಿದೆ. ಅರ್ಧ ದಿನದಲ್ಲಿ ಈ ಎಲ್ಲಾ ಆಕರ್ಷಣೆಗಳನ್ನು ನೋಡಬಹುದಾಗಿದೆ.