ತಂಜಾವೂರಿನ ಸರಸ್ವತಿ ಮಹಲ್ ವಾಚನಾಲಯ ಏಷ್ಯಾದಲ್ಲೇ ಅತೀ ದೊಡ್ಡ ವಾಚನಾಲಯ ಎನಿಸಿಕೊಂಡಿದ್ದು, ಇಲ್ಲಿ ಎಣೆಯಿಲ್ಲದಷ್ಟು ಹಸ್ತಪ್ರತಿಗಳ ಸಂಗ್ರಹವಿದೆ. ಈ ಹಸ್ತಪ್ರತಿಗಳು ಕಾಗದ ಮತ್ತು ತಾಳೆಗರಿ ಗಳ ಮೇಲೆ ಬರೆದಿದ್ದು, ತಮಿಳು, ಮರಾಠಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಗಳಲ್ಲಿವೆ.
1535 ರಿಂದ 1675 ರ ವರೆಗೆ ರಾಜ್ಯವಾಳುತ್ತಿದ್ದ ನಾಯಕ್ ರಾಜವಂಶಸ್ಥರು ಸ್ಥಾಪಿಸಿದ್ದ ರಾಜವೈಭವದ ವಾಚನಾಲಯವಿದು. ನಂತರ ಅಧಿಕಾರಕ್ಕೆ ಬಂದ ಮರಾಠ ದೊರೆಗಳ ರಾಜನಾಗಿದ್ದ ಸೇರ್ಫಾಜಿ- 2 (1798-1832) ರ ಆಳ್ವಿಕೆಯಲ್ಲಿ ವಾಚನಾಲಯವು ಊರ್ಜಿತವಾಯಿತು. 1918 ರಿಂದ ಈ ವಾಚನಾಲಯವು ತಮಿಳುನಾಡು ಸರಕಾರದ ಸರಹದ್ದಿನಲ್ಲಿದೆ.
ಈ ವಾಚನಾಲಯ ಸಾರ್ವಜನಿಕರಿಗೆ ತೆರೆದಿದ್ದು, ಇದರ ಕಂಪ್ಯೂಟರೀಕರಣ ಕಾರ್ಯವು 1998 ರಿಂದ ಶುರುವಾಗಿದೆ.ಅಪೂರ್ವ ಕೃತಿಗಳಾದ 1807 ರಲ್ಲಿ ಪ್ರಕಟಿತ ಮದ್ರಾಸ್ ಪಂಚಾಗ ಮತ್ತು 1791 ರಲ್ಲಿ ಅಮ್ಸ್ಟೆರ್ಡಾಮ್ ನಲ್ಲಿ ಪ್ರಕಟವಾದ ಚಿತ್ರಗಳುಳ್ಳ ಬೈಬಲ್ ಈ ವಾಚನಾಲಯದಲ್ಲಿವೆ.
ವಾಚಾನಾಲಯದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಲ್ಲಿ ಒಂದು ವಸ್ತುಸಂಗ್ರಹಾಲಯವನ್ನು ತೆರೆಯಲಾಗಿದೆ.