ರುದ್ರಪಾದ ದೇವಾಲಯವು ಬ್ರಹ್ಮ ಪುತ್ರ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವನ ದೇವಾಲಯವಾಗಿದ್ದು, ಇಲ್ಲಿಗೆ ಶಿವನು ಆಗಮಿಸಿದ್ದನ್ನು ಸಾರುವ ಶಿವನ ಎಡಗಾಲಿನ ಹೆಜ್ಜೆ ಗುರುತು ಇಂದಿಗು ಈ ದೇವಾಲಯದ ಆವರಣದಲ್ಲಿದೆ. ಇಲ್ಲಿನ ಹೆಸರೇ ಸೂಚಿಸುವಂತೆ ’ರುದ್ರ’ ಎಂದರೆ ಶಿವ ಮತ್ತು ’ ಪಾದ’ ಎಂದರೆ ಹೆಜ್ಜೆ ಗುರುತು ಎಂಬ ಆರ್ಥದಲ್ಲಿ ಈ ರುದ್ರಪಾದ ಎಂಬ ಹೆಸರು ಬಂದಿತು.
ನಂಬಿಕೆಗಳ ಪ್ರಕಾರ ಬಾಣಾಸುರನಿಗೆ ಶಿವನು ತನ್ನ ನಿಜಸ್ವರೂಪವನ್ನು ಇದೇ ಸ್ಥಳದಲ್ಲಿ ತೋರಿಸಿದನು ಎಂದು ಹೇಳಲಾಗುತ್ತದೆ. ಪ್ರಾಚ್ಯ ವಸ್ತು ಸಂಶೋಧಕರ ಪ್ರಕಾರ ಈ ದೇವಾಲಯವನ್ನು 1730ರಲ್ಲಿ ಶಿವ ಸಿಂಗ್ ಎಂಬಾತನು ಈ ದೇವಾಲಯವನ್ನು ನಿರ್ಮಿಸಿದನು. ಇಲ್ಲಿನ ಹೆಜ್ಜೆಗುರುತನ್ನು ಕಲ್ಲಿನ ಫಲಕದ ಮೇಲೆ ಹಚ್ಚು ಹಾಕಿಸಿ, ಸುರಕ್ಷಿತವಾಗಿ ಗುಡಿಯ ಒಳಗೆ ಇರಿಸಲಾಗಿದೆ.
ಮಹಾಶಿವರಾತ್ರಿ ಹಬ್ಬವನ್ನು ಇಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಜೊತೆಗೆ ಬ್ರಹ್ಮ ಪುತ್ರ ನದಿಯ ದಂಡೆಯಲ್ಲಿ ನೆಲೆಗೊಂಡಿರುವ ಈ ದೇವಾಲಯದಿಂದ ತೇಜ್ಪುರ್ ನಗರದ ಸುಂದರ ನೋಟ ಸಹ ಕಾಣ ಸಿಗುತ್ತದೆ.