ಯಾತ್ರಾರ್ಥಿಗಳಿಗೆ ಬಿಡುವಿದ್ದರೆ ಇಲ್ಲಿನ ಮರುಳೇಶ್ವರ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯ ತನ್ನ ಬೃಹತ್ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಗಂಗ ರಾಜರಿಂದ ಕಟ್ಟಲ್ಪಟ್ಟಿತು. ಈ ದೇವಾಲಯದ ಒಳಗಿನ ಶಿವಲಿಂಗವನ್ನು ಬ್ರಹ್ಮದೇವನು ಪ್ರತಿಷ್ಠಾಪಿಸಿದನು ಎಂದು ನಂಬಲಾಗಿದೆ. ಪಂಚ ಲಿಂಗ ದರ್ಶನದ ಸಮಯದಲ್ಲಿ ಯಾತ್ರಾರ್ಥಿಗಳು ಭಾರಿ ಜನಸಂದಣಿಯ ನಡುವೆ ಭೇಟಿ ಕೊಡುವ ಲಿಂಗಗಳಲ್ಲಿ ಇದು ಒಂದು. ಮರುಳೇಶ್ವರ ದೇವಾಲಯಕ್ಕೆ ತಲುಪುವಾಗ ಯಾತ್ರಾರ್ಥಿಗಳು ತಿರುಮಲ, ವೀರಭದ್ರ, ಮಹೇಶ್ವರ, ಷಣ್ಮುಗ, ಅಂಬಿಕೆ, ನವಗ್ರಹಗಳು, ಗಣಪತಿ ಮತ್ತು ಸೂರ್ಯ ದೇವರ ಮೂರ್ತಿಗಳನ್ನು ನೋಡುವ ಅವಕಾಶ ಸಿಗುತ್ತದೆ. ಈ ಯಾತ್ರ ಸ್ಥಳವು ಪ್ರಾಚೀನ ಕಾಲದ ಕೀರ್ತಿ ನಾರಾಯಣ ದೇವಾಲಯಕ್ಕೆ ಸಮೀಪದಲ್ಲಿದೆ. ಇದು ವಿಷ್ಣು ದೇವಾಲಯವಾಗಿದೆ.