ಬರ್ದೋಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ಸ್ಥಳ. 1918ರಲ್ಲಿ ನಡೆದ ‘ಕರ ನಿರಾಕರಣೆ’ ಚಳುವಳಿಯ ನಾಯಕರು ಇವರು. ನಂತರದಲ್ಲಿ ಸರ್ದಾರರು ಈ ನಗರದಿಂದಲೇ ಬ್ರಿಟೀಷರು ಕಂದಾಯವನ್ನು ಹೆಚ್ಚಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ಆರಂಭಿಸಿದರು. ಗಾಂಧೀಜಿಯವರ ದಂಡಿ ಸತ್ಯಾಗ್ರಹದಲ್ಲಿ ಕೂಡ ಪಾಲ್ಗೊಂಡಿದ್ದರು. ಸ್ವರಾಜ್ ಆಶ್ರಮ, ಉದ್ಯಾನ, ಸಂಗ್ರಹಾಲಯ, ಖಾದಿ ಕಾರ್ಯಾಗಾರ, ಭಾರತಕ್ಕೆ ಸ್ವರಾಜ್ಯ ಬೇಕು ಎಂದು ಗಾಂಧೀಜಿ ಘೋಷಿಸಿದ ಮಾವಿನ ಮರವಿರುವ ಸ್ಥಳ ಇವೆಲ್ಲವೂ ಬರ್ದೋಲಿ ಐತಿಹಾಸಿಕ ಮಹತ್ವವನ್ನು ಸಾರುತ್ತದೆ.