ಕನ್ಯಾಕುಮಾರಿಯಿಂದ 20 ಕಿ.ಮೀ ದೂರವಿರುವ ಕೊಳಚಲ್, ಒಂದು ನಗರ ಪ್ರದೇಶವಾಗಿದ್ದು ಮಲಬಾರ್ ತೀರದಲ್ಲಿದೆ. ಪ್ರಸಿದ್ದ ಕೊಳಚಲ್ ಯುದ್ಧಕ್ಕೆ ಇಲ್ಲಿ ಸಾಕ್ಷಿಯಿದ್ದರೂ ಬಹಳಷ್ಟು ಮಂದಿಗೆ ಈ ನಗರದ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ಬೆಸರದ ಸಂಗತಿ. 1741 ರಲ್ಲಿ ಇಲ್ಲಿ ಯುದ್ಧ ನಡೆದಿದ್ದು ಆ ಕಾಲದಲ್ಲಿ ಪ್ರಪ್ರಥಮವಾಗಿ ಭಾರತೀಯ ಒಂದು ಆಡಳಿತವು ಯುರೋಪಿಯನ್ ದೇಶದ ನೌಕಾ ಸೇನೆಯನ್ನು ಸೋಲಿಸಿದ್ದು ಗಮನಾರ್ಹವಾಗಿದೆ ಹಾಗು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಡಚ್ ನೌಕಾಪಡೆಯೊಂದು ಇಲ್ಲಿನ ಪ್ರದೇಶವನ್ನು ಲೂಟಿ ಹೊಡೆಯುವ ದುರುದ್ದೇಶದಿಂದ ಇಲ್ಲಿ ಲಂಗರು ಹಾಕಿತ್ತು. ತಿರುವಾಂಕೂರಿನ ರಾಜ ಮಾರ್ತಾಂಡವರ್ಮ, ಡಚ್ ನೌಕಾಡಪೆಯನ್ನು ಎಷ್ಟು ಹೀನಾಯ ರೀತಿಯಲ್ಲಿ ಸೋಲಿಸಿದನೆಂದರೆ ಮುಂದೆಂದೂ ಅವರು ಭಾರತದಲ್ಲಿ ವಸಾಹತುಶಾಹಿಯನ್ನು ಕಟ್ಟಲಾಗಲಿಲ್ಲ.
ಸಣ್ಣ ಸಾಮ್ರಾಜ್ಯಗಳಿಗೆ ಈ ಯುದ್ದ ದೊಡ್ಡ ಗೆಲುವು. ಕೆಲವು ಡಚ್ ಸೈನಿಕರನ್ನೂ ಸೆರೆ ಹಿಡಯಲಾಯಿತು. ಹೀಗೆ ಸೆರೆ ಸಿಕ್ಕ ಸೈನಿಕರಲ್ಲಿ ಅಡ್ಮಿರಲ್ ಡಿಲೊನಾಯ್ ಮಾರ್ತಾಂಡವರ್ಮನ ಸೇನೆಯಲ್ಲಿ ಹಿರಿಯ ಸೈನಾಧಿಕಾರಿಯಾಗಿ 20 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ.