ಶ್ರೀವಿಲ್ಲಿಪುತೂರ್ ನಲ್ಲಿ ಸಾಕಷ್ಟು ಹಳ್ಳಿಗಳಿವೆ ಆದರೆ ವಲಯಪತಿ ಹಳ್ಳಿಯಷ್ಟು ಬೇರಾವುದೂ ಜನಪ್ರಿಯವಾಗಿಲ್ಲ .ಇದೊಂದು ಮಹಾನ್ ಗ್ರಾಮ ಮತ್ತು ತಮಿಳುನಾಡಿನ ಪ್ರತಿಯೊಬ್ಬರೂ ಈ ಹಳ್ಳಿಯ ಬಗ್ಗೆ ಕೇಳಿಯೇ ಇರುತ್ತಾರೆ .ತಮಿಳುನಾಡು ಮತ್ತು ದೇಶದ ಇತಿಹಾಸಕ್ಕೆ ಈ ಗ್ರಾಮದ ಕೊಡುಗೆ ಮಹತ್ತರವಾದುದು.ಇದು ಶ್ರೀವಿಲ್ಲಿಪುತೂರ್ ನಿಂದ 9 ಕಿ ಮೀ ದೂರದಲ್ಲಿದೆ ಆದರೂ ಪ್ರವಾಸಿಗರು ಇಷ್ಟಪಡುವ/ಆಸಕ್ತಿ ಮೂಡಿಸಿರುವ ಸ್ಥಳವಿದು .ಶ್ರೀವಿಲ್ಲಿಪುತೂರ್ ಗೆ ಬಂದ ಪ್ರತಿಯೊಬ್ಬರೂ ಮಾದರಿ ಗ್ರಾಮವಾದ ವಲಯಪತಿಗೆ ಬಂದೇಬರುತ್ತಾರೆ.ಇಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಲಾಗಿದೆ.ಜೀವನ ಮುನ್ನಡೆಸಲು ಬೇಕಾಗುವ ಮೌಲ್ಯವನ್ನು ತೋರಿಸುತ್ತಾ ಬಂದಿರುವ ಕಾರಣ ಈ ಹಳ್ಳಿಗೆ ಕೇಂದ್ರ ಮತ್ತು ರಾಜ್ಯ ಸಕಾರದಿಂದ ಪ್ರಶಸ್ತಿ ನೀಡಲಾಗಿದೆ.ಜೊತೆಗೆ ಈ ಹಳ್ಳಿಯ ಭೂಮಿ ಫಲವತ್ತಾಗಿದ್ದು ಕೃಷಿ ಇಲ್ಲಿಯ ಮುಖ್ಯ ಕಸುಬು.ಈ ಹಳ್ಳಿಯ ಜನರು ಸ್ಥಿರವಾದ ಜೀವನ ನಡೆಸುತ್ತಿದ್ದು ಬೇರೆಯವರ ಏಳ್ಗೆಗಾಗಿ ದುಡಿಯುತ್ತಿದ್ದಾರೆ.