ಶೆನ್ಬಗತೊಪ್ಪು ರಾಕ್ಷಸ ಅಳಿಲು ಅಭಯಾರಣ್ಯವನ್ನು ನಸು ಬೂದು ಬಣ್ಣದ ರಾಕ್ಷಸ ಅಳಿಲು ಗಳಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು.ಶ್ರೀವಿಲ್ಲಿಪುತೂರ್ ನ ರಥ ಬೀದಿಯ ಹತ್ತಿರ ಮತ್ತು ಪ್ರಸಿದ್ಧ ಪಾಲ್ಘಾಟ್ ಗ್ಯಾಪ್ ನ ದಕ್ಷಿಣ ಭಾಗಕ್ಕೆ ಇದೆ.ಅಷ್ಟೇಅಲ್ಲ ಈ ಸ್ಥಳ ಉತ್ತಮ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಒಂದು ಎಂದು ರಾಜ್ಯದ ಜನರಿಂದ ಪರಿಗಣಿಸಲ್ಪಟ್ಟಿದೆ.ಈ ಅಭಯಾರಣ್ಯದಲ್ಲಿ ಸಾಕಷ್ಟು ಪ್ರಾಣಿಗಳನ್ನು ಕಾಣಬಹುದು ಆದರೆ ಈ ಸ್ಥಳ ರಾಕ್ಷಸ ಅಳಿಲುಗಳಿಗೆ ಹೆಚ್ಚು ಜನಪ್ರಿಯವಾಗಿದೆ.ಬಹುಶಃ ಇದು (ರಾಕ್ಷಸ ಅಳಿಲು) ಭಾರತದಲ್ಲೇ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದು.ಮತ್ತು ಈ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸಲು ಒತ್ತುಕೊಟ್ಟ ಪರಿಣಾಮವಾಗಿ ಈ ಸುಂದರವಾದ ಅಭಯಾರಣ್ಯ ನಿರ್ಮಾಣವಾಗಿದೆ ಎನ್ನಬಹುದು.ವನ್ಯ ಜೀವಿಗಳನ್ನು ಸಂರಕ್ಷಿಸುವುದು ಕಷ್ಟವಾದುದರಿಂದ ಅಭಯಾರಣ್ಯದ ಅಧಿಕಾರಿಗಳು ತುಂಬಾ ಎಚ್ಚರಿಕೆವಹಿಸುತ್ತಾರೆ.ಅದಕ್ಕಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಕೆಲವು ಉಪಾಯಗಳನ್ನು ಭವಿಷ್ಯದಲ್ಲಿ ಕಾರ್ಯಗತಗೊಳಿಸುವ ನಿರ್ಧಾರ ಮಾಡಲಾಗಿದೆ.ಮಕ್ಕಳಿಗೆ ಈ ಸ್ಥಳ ಇಷ್ಟವಾಗುತ್ತದೆ.