ಶ್ರೀ ಶೈಲಂ ಕ್ಷೇತ್ರದ ಹತ್ತಿರದಲ್ಲಿದ್ದರೆ ನೀವು ನೋಡಲೇ ಬೇಕಾದ ಸ್ಥಳ ಶ್ರೀಶೈಲಂ ಅಭಯಾರಣ್ಯ. ಈ ಅಭಯಾರಣ್ಯವು ಹುಲಿಗಳಿಗೆ ಮೀಸಲಿಟ್ಟ ಭಾರತದ ಅತೀದೊಡ್ಡ ಅಭಯಾರಣ್ಯವಾಗಿದೆ. ಈ ಅಭಯಾರಣ್ಯವನ್ನು 3568 ಚದರ ಕೀ.ಮಿಯಷ್ಟು ಪ್ರದೇಶದಲ್ಲಿ ವಿಸ್ತರಿಸಲಾಗಿದ್ದು ಈ ಸ್ಥಳವು ಪ್ರವಾಸಿಗರನ್ನು ಧಿಗ್ಭ್ರಮೆಗೊಳಿಸುತ್ತದೆ. ಏಕೆಂದರೆ ಇಲ್ಲಿರುವ ಪ್ರಾಣಿ ಸಮೂಹವನ್ನು ಗುರುತಿಸುವುದು ಪ್ರವಾಸಿಗರಿಗೆ ಅತ್ಯಂತ ಸಾಹಸದ ಕೆಲಸ ! ಈ ಅಭಯಾರಣ್ಯವು ಸುರುಳಿಯಿಂದ ಕೂಡಿದ್ದು, ಕಂದರಮಯ ಹಾಗೂ ಕಡಿದಾದ ಭೂ ಪ್ರದೇಶವಾಗಿದೆ. ಅಭಯಾರಣ್ಯವು ಸಂಪೂರ್ಣವಾಗಿ ಒಣ ಎಲೆಉದುರಿಸುವ ಕಾಡು ಹಾಗೂ ಬಿದಿರಿನ ಗಿಡಗಳಿಂದ ಆವೃತವಾಗಿದೆ.
ಅಭಯಾರಣ್ಯದ ಒಳಗಡೆ, ಹುಲಿಗಳು, ಚಿರತೆಗಳು, ಕತ್ತೆಕಿರುಬಗಳು, ಕಾಡು ಬೆಕ್ಕುಗಳು, ಪಾಮ್ ಸಿವೆಟ್ಸ್ ಸ್ಲಾತ್ ಕರಡಿಗಳು, ಜಿಂಕೆ, ಮತ್ತು ಇರುವೆ ಭಕ್ಷಕ ಪ್ರಾಣಿ ಮತ್ತು ಬಾನೆಟ್ ಕೋತಿ ಸೇರಿದಂತೆ ವಿವಿಧ ಕಾಡು ಪ್ರಾಣಿಗಳನ್ನು ಕಾಣಬಹುದು.
ಈ ಅಭಯಾರಣ್ಯವು ಶ್ರೀ ಶೈಲಂ ಅಣೆಕಟ್ಟಿಗೆ ಹತ್ತಿರದಲ್ಲಿದೆ. ಹಾಗೂ ಅಣೆಕಟ್ಟಿನ ಕೆಳಗೆ ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮೊಸಳೆಗಳನ್ನು ಕಾಣಬಹುದು.