ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಹೋದಾಗ ಇಲ್ಲಿನ ಟಿಪ್ಪು ಮರಣ ಹೊಂದಿದ ಸ್ಥಳಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಮೈಸೂರಿನ ಅರಸ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ವೀರ ಮರಣ ಹೊಂದಿದ ಸ್ಥಳ. ನಂತರ ಆತನ ಪಾರ್ಥೀವ ಶರೀರವನ್ನು ಇಲ್ಲಿಂದ ಸಾಗಿಸಲಾಯಿತು. ಅದರ ನೆನಪು ಮತ್ತು ಗುರುತು ಸದಾ ಜನರಿಗೆ ಸಿಗಲಿ ಎಂದು, ಈ ಸ್ಥಳದಲ್ಲಿ ಕಲೋನೆಲ್ ವೆಲ್ಲೆಸ್ಲಿಯು ಶಿಲಾ ಫಲಕವೊಂದನ್ನು ನೆಡಿಸಿದನು. ಹಾಗೆ ಮಾಡಿ ರಾಜ ಟಿಪ್ಪು ಸುಲ್ತಾನನಿಗೆ ಆ ಮೂಲಕ ಗೌರವ ಸಲ್ಲಿಸುವ ಕಾರ್ಯ ಮಾಡಿದನು. ಕೋಟೆಯಲ್ಲಿ ಟಿಪ್ಪುವಿನ ಪಾರ್ಥೀವ ಶರೀರ ಸಿಕ್ಕಿದ ಸ್ಥಳ, ನೀರಿನ ತೂಬು ಈಗಲು ಸುಸ್ಥಿತಿಯಲ್ಲಿದೆ.