ಪ್ರವಾಸಿಗರು ಶ್ರೀರಂಗಪಟ್ಟಣದತ್ತ ಹೊರಟಾಗ ಮಹದೇವಪುರಕ್ಕೆ ಒಮ್ಮೆ ಭೇಟಿಕೊಡಬಹುದು. ಈ ಊರು ಒಂದು ಸುಂದರ ವಿಹಾರ ತಾಣವಾಗಿದೆ. ಇಲ್ಲಿ ಕಾವೇರಿ ನದಿಯು ದಟ್ಟ ಕಾಡಿನ ನಡುವೆ ಹರಿಯುತ್ತದೆ. ಪ್ರವಾಸಿಗರು ಈ ಊರಿನ ಪ್ರಧಾನ ಆಕರ್ಷಣೆಯಾದ ಗೆಂಡೆ ಹೊಸಳ್ಳಿ ಪಕ್ಷಿಧಾಮಕ್ಕೆ ಭೇಟಿಕೊಡಬಹುದು. ಈ ಊರಿನಲ್ಲಿ 600 ವರ್ಷಗಳಷ್ಟು ಹಳೆಯದಾದ ಈಶ್ವರನ ದೇವಾಲಯವಿದೆ, ಮೈಸೂರು, ಬೆಂಗಳೂರು ಮತ್ತು ಮಂಡ್ಯಗಳಿಂದ ಈ ಊರಿಗೆ ವಾರಾಂತ್ಯಗಳಲ್ಲಿ ವಿಹಾರಕ್ಕೆಂದು ಬರುತ್ತಾರೆ.