ರಾಜೀವ್ ಗಾಂಧಿ ಸ್ಮಾರಕ 21 ಮೇ 1991 ರಂದು ಮಾನವ ಬಾಂಬ್ ಮೂಲಕ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಬಲಿ ಪಡೆದ ಸ್ಥಳವಾಗಿದೆ. ತಮಿಳು ನಾಡು ರಾಜ್ಯ ಸರ್ಕಾರ ಈ ಸ್ಥಳವನ್ನು ಒಂದು ಸ್ಮಾರಕವನ್ನಾಗಿ ಪರಿವರ್ತಿಸಿದೆ. ಇದನ್ನು ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಕಟ್ಟಿಸಿದೆ.ಇದನ್ನು ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ದೇಶಕ್ಕೆ ಸಮರ್ಪಿಸಿದರು. ಇಲ್ಲಿ ರಾಜೀವ್ ಗಾಂಧಿ ಅವರ ಗುಲಾಬಿ ಬಣ್ಣದ ಬೆಣಚು ಕಲ್ಲಿನಿಂದ ಮಾಡಿದ ಮೂರಿ ಇದೆ. ಬಾಂಬ್ ಸ್ಪೋಟಗೊಂಡ ಸ್ಥಳದ ಸುತ್ತ ಏಳು ಬೆಛನು ಕಲ್ಲುಗಳ ಸ್ಥಂಭಗಳಿವೆ. ಇವು ಧರ್ಮ, ನ್ಯಾಯ, ಸತ್ಯ, ತ್ಯಾಗ, ಸಮೃದ್ಧಿ, ವಿಜ್ಞಾನ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತವೆ. ಇದರ ಜೊತೆಗೆ ಇವು ಭಾರತದ ಏಳು ಪವಿತ್ರ ನದಿಗಳಾದ ಗಂಗಾ, ಯಮುನಾ, ಸಿಂಧೂ, ನರ್ಮದಾ, ಕಾವೇರಿ, ಬ್ರಹ್ಮಪುತ್ರಾ ಮತ್ತು ಗೋದಾವರಿಯನ್ನೂ ಸೂಚಿಸುತ್ತವೆ. ಇಲ್ಲಿನ ಬೆಣಚು ಕಲ್ಲುಗಳ ಮೇಲೆ ಮಾಡಿದ ಕೆತ್ತನೆಗಳು ಪುರಾತನ ಕಾಲದಿಂದ ಇಲ್ಲಿಯ ತನಕ ಭಾರತದ ಬೆಳವಣಿಗೆಯನ್ನು ಸೂಚಿಸುತ್ತದೆ.