ಶೃಂಗೇರಿ ಮಠವು ಶೃಂಗೇರಿಯ ಪ್ರಮುಖ ಆಕರ್ಷಣೆಗಳಲ್ಲೊಂದಾದ್ದರಿಂದ ಇದು ಪ್ರವಾಸಿಗರು ನೋಡಲೇಬೇಕಾದ ಸ್ಥಳವಾಗಿದೆ. ದಕ್ಶಿನನ್ಮಯ ಶೃಂಗೇರಿ ಶಾರದಾ ಪೀಠ ಎಂದೂ ಕರೆಯಲ್ಪಡುವ ಈ ಹಿಂದೂ ಅದ್ವೈತ ಮಠ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿತು. ಶೃಂಗೇರಿ ಮಠದ ಪ್ರಮುಖ ಯತ್ರಾಸ್ಥಾಳವು ಒಂದು ಎತ್ತರಿಸಿದ ವೃತ್ತಾಕಾರದ ದಿಬ್ಬದ ಮೇಲೆ ನಿಂತಿದೆ.
ತುಂಗಾ ನದಿಯ ದಡದಲ್ಲಿರುವ ಈ ಮಠ ಯಜುರ್ ವೇದದ ಸಂಪ್ರದಾಯವನ್ನು ನಂಬಿ ಪ್ರತಿಪಾದಿಸುತ್ತದೆ. ಈ ಮಠವು ಹೊಯ್ಸಳ ಮತ್ತು ದ್ರಾವಿಡ ಶೈಲಿಯ ವಾಸ್ತು ಶೈಲಿಯನ್ನು ಹೊಂದಿದೆ. ಈ ಸ್ಥಳ ತಲುಪುತ್ತಿದ್ದ ಹಾಗೆಯೇ ವಿವಿಧ ರಾಶಿಗಳನ್ನು ಪ್ರತಿನಿಧಿಸುವ ಹನ್ನೆರಡು ಕಂಬಗಳೊಂದಿಗೆ ವಿದ್ಯಾತೀರ್ಥ ಲಿಂಗವನ್ನು ಪ್ರವಾಸಿಗರು ಕಾಣಬಹುದು. ಈ ಕಂಬಗಳ ಹಿಂದಿರುವ ವಿಶೇಷತೆ ಎಂದರೆ, ಸೂರ್ಯ ರಶ್ಮಿ ಆ ತಿಂಗಳಿಗೆ ಅನುಗುಣವಾಗಿ ಪ್ರತಿ ಕಂಬದ ಮೇಲೆ ಬೀಳುವುದು!