ವಿಂಧ್ಯಗಿರಿ ಗುಡ್ಡದಲ್ಲಿರುವ ವಿಂಧ್ಯಗಿರಿ ದೇವಸ್ಥಾನವನ್ನು ಭೇಟಿ ಮಾಡಲು ಶ್ರವಣಬೆಳಗೊಳದ ಪ್ರವಾಸಿಗರಿಗೆ ಸೂಚಿಸಲಾಗಿದೆ. ವಿಧ್ಯಗಿರಿ ದೇವಸ್ಥಾನವನ್ನು ಒಡೆಗಳ ಬಸದಿ ಎಂದೂ ಕರೆಯುತ್ತಾರೆ. ಗುಡ್ಡದ ಮೇಲೆ, 572 ಮೆಟ್ಟಿಲುಗಳ ಮೇಲೆ ಇರುವ ಈ ದೇವಸ್ಥಾನವು ಮೂರು ಕೋಣೆಗಳನ್ನು ಹೊಂದಿದೆ. ಈ ಪ್ರದೇಶವನ್ನು ತಲುಪಲು ಪ್ರವಾಸಿಗರು 100 ಮೆಟ್ಟಿಲುಗಳನ್ನು ಹತ್ತಬೇಕು. ಹತ್ತುವ ದಾರಿಯ ಬದಿಯಲ್ಲಿ ಹಲವಾರು ಸಣ್ಣ ಸಣ್ಣ ಗುಡಿಗಲೂ ಮತ್ತು ಮೂರ್ತಿಗಳನ್ನು ನೋಡಬಹುದು. ಎತ್ತರದ ಮೇಲಿರುವ ಪುಣ್ಯಕ್ಷೇತ್ರವು ಕಲ್ಲಿನ ಮಾಳಿಗೆಯನ್ನು ಹೊಂದಿದೆ. ವಿಂಧ್ಯಗಿರಿ ದೇವಸ್ಥಾನವು ಕಲ್ಲು ಕತ್ತರಿಸುವ ವಾಸ್ತುಶಿಲ್ಪ ಶೈಲಿಗೆ ಉತ್ತಮ ಉದಾಹರಣೆಯಾಗಿದೆ.ವಿಂಧ್ಯಗಿರಿ ದೇವಸ್ಥಾನವನ್ನು ತಲುಪುವಾಗ, ಭಕ್ತರು ಜೈನ ತೀರ್ಥಂಕರರಾದ ನೇಮಿನಾಥ, ಶಾಂತಿನಾಥ ಮತ್ತು ಆದಿನಾಥರ ಸುಂದರವಾದ ಮೂರ್ತಿಗಳನ್ನು ನೋಡುವ ಅವಕಾಶ ಪಡೆಯಬಹುದು. ಇಲ್ಲಿನ ಇನ್ನೊಂದು ಪ್ರಮುಖ ದೇವರೆಂದರೆ, ಗುಳ್ಳಕಾಯಾಜಿ. ಈ ದೇವರು ಪದ್ಮಾವತಿಯ ಇನ್ನೊಂದು ಅವತಾರ ಎಂದು ನಂಬಲಾಗಿದೆ.ವಿಂಧ್ಯಗಿರಿ ದೇವಸ್ಥಾನದ ಪ್ರವೇಶದ್ವಾರವನ್ನು ಅಖಂಡ ಬಾಗಿಲು ಎಂದು ಕರೆಯಲಾಗಿದೆ. ಯಾಕೆಂದರೆ, ಇದನ್ನು ಒಂದೇ ಶಿಲೆಯಿಂದ ಮಾಡಲಾಗಿದೆ. ಬಾಹುಬಲಿ ಮತ್ತು ಭರತನ ಮೂರ್ತಿಯನ್ನು ಪ್ರವೇಶ ದ್ವಾರದ ಸಮೀಪದಲ್ಲೇ ನಿರ್ಮಿಸಲಾಗಿದೆ.