ಶ್ರವಣಬೆಳಗೊಳ ಗುಡ್ಡದ ತುದಿಯಲ್ಲಿರುವ ಚಂದ್ರಗಿರಿ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಶಿಫಾರಸು ಮಾಡಲಾಗಿದೆ. ಇದೊಂದು ಅತ್ಯಂತ ಜನಪ್ರಿಯ ಜೈನ ಬಸದಿಯಾಗಿದೆ. ಇದು ಚಾಮುಂಡರಾಯನಿಂದ ನಿರ್ಮಾಣಗೊಳ್ಳಲ್ಪಟ್ಟಿದೆ. ಇವನು ಆಚಾರ್ಯ ನೇಮಿಚಂದ್ರ ಸಿದ್ಧಾರ್ಥ-ಚಕ್ರವರ್ತಿಯ ಶಿಷ್ಯನಾಗಿದ್ದವನು. ಇದನ್ನು ಬ್ರಹ್ಮದೇವ ದೇವಸ್ಥಾನ ಎಂದೂ ಕೂಡಾ ಕರೆಯುತ್ತಾರೆ. ಚಂದ್ರಗಿರಿ ಗುಡ್ಡದಲ್ಲಿ ಸುಮಾರು 20 ಜೈನ ಪುಣ್ಯಕ್ಷೇತ್ರವು ಇದೆ. 10ನೇ ಶತಮಾನಕ್ಕೆ ಸಂಬಂಧಿಸಿದ ಶಿಲಾಶಾಸನಗಳನ್ನು ಪ್ರವಾಸಿಗರು ಇಲ್ಲಿ ಕಾಣಬಹುದು. ಈ ಶಿಲಾಶಾಸನದ ಸಹಾಯದಿಂದ, ಕನ್ನಡ ಭಾಷೆಯ ಮತ್ತು ಸಾಹಿತ್ಯದ ಇತಿಹಾಸವನ್ನು ತಜ್ಞರು ತಿಳಿಯಬಹುದು.ಚಂದ್ರಗಿರಿ ದೇವಸ್ಥಾನವು ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆಯಾಗಿದೆ. ಉತ್ತಮ ಗುಣಮಟ್ಟದ ಗ್ರಾನೈಟ್ ಕಲ್ಲುಗಳನ್ನು ಚಂದ್ರಗಿರಿ ದೇವಸ್ಥಾನದ ನಿರ್ಮಾಣಕ್ಕೆ ಬಳಸಲಾಗಿದೆ. ಈ ಪ್ರದೇಶವನ್ನು ನೀವು ಪ್ರವೇಶ ಮಾಡುತ್ತಿದ್ದಂತೇ, ಪ್ರವಾಸಿಗರು ಸುತ್ತಲಿನ ಪ್ರದೇಶದ ಸುಂದರವಾದ ದೃಶ್ಯವನ್ನು ನೋಡಿ ಸವಿಯಬಹುದು.