ಸೋನೆಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನೆಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ. ಮಹಾಭಾರತ ಸಮಯದಲ್ಲಿ ಈ ಪಟ್ಟಣವನ್ನು ಪಾಂಡವರು ಸ್ವರ್ಣಪ್ರಸ್ಥ ಎಂದು ಸ್ಥಾಪಿಸಿದರು. ಮಹಾಕಾವ್ಯದ ಪ್ರಕಾರ ಯಧಿಷ್ಟರನು ಧುರ್ಯೋದನನಿಂದ ಈ ಭೂಮಿಯನ್ನು ಶಾಂತಿ ಸಂಧಾನದ ಮೂಲಕ ಪಡೆದನಂತೆ. ಇದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ. ಆದರೆ ವ್ಯಾಕರಣಿಗ ಪಾಣಿನಿಯು ಬರೆದ ಅಷ್ಟಾಧ್ಯಾಯಿಯಲ್ಲಿ ಸೋನೆಪತ್ನ ಪ್ರಸ್ತಾಪ ಮಾಡಿದ್ದಾನೆ. ಇದರರ್ಥ ಈ ಪಟ್ಟಣವು ಕ್ರಿಪೂ.600ರಷ್ಟು ಹಳೆಯದು.
ಸೋನೆಪತ್ನ ಪ್ರವಾಸಿ ಸ್ಥಳಗಳು
ಸೋನೆಪತ್ನ ಮುಖ್ಯ ಆಕರ್ಷಣೆ ಖ್ವಾಜ ಖಿಜ್ರ ಸಮಾಧಿ. ಇದು ದರಿಯಾ ಖಾನ್ನ ಸಂನ್ಯಾಸಿಯಾದ ಮಗನ ಸಮಾಧಿ. ಈತ ಇಬ್ರಾಹಿಂ ಲೊಧಿಯ ಕಾಲದಲ್ಲಿ ಜೀವಿಸಿದ್ದ ಎಂದು ಹೇಳಲಾಗುತ್ತದೆ. ಈ ಸಮಾಧಿಯು ಕ್ರಿಶ 1522 ಮತ್ತು 1525ರ ನಡುವೆ ನಿರ್ಮಿಸಲಾಯಿತು. ಇದನ್ನು ಎತ್ತರಿಸಿದ ಪೀಠದ ಮೇಲೆ ಕಟ್ಟಲಾಗಿದೆ. ಇದನ್ನು ಕೆಂಪು ಮರಳಶಿಲೆ ಮತ್ತು ಕಂಕಾರ್ ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಇದು ಭಾರತೀಯ ಪುರಾತತ್ವ ಪರಿವೀಕ್ಷಣಾಲಯದ ಸಂರಕ್ಷಣೆಯಲ್ಲಿದೆ.
ಹವಾಮಾನ
ಸೋನೆಪತ್ನಲ್ಲಿ ಸಾಮಾನ್ಯವಾಗಿ ಉಷ್ಣತೆ ಹೆಚ್ಚಿದ್ದು ಒಣ ಹವೆಯಿರುತ್ತದೆ.
ತಲುಪುವುದು ಹೇಗೆ?
ಸೋನೆಪತ್ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸೌಲಭ್ಯವನ್ನು ಹೊಂದಿದೆ.