ಪ್ರವಾಸಿಗರು ಸೊಂದಾಕ್ಕೆ ಭೇಟಿಕೊಟ್ಟಾಗ ಇಲ್ಲಿನ ತಪೋವನಕ್ಕೆ ಭೇಟಿಕೊಡಬಹುದು. ಈ ಸ್ಥಳವನ್ನು ಶ್ರೀ ವಾದಿರಾಜಸ್ವಾಮಿಯವರು ಧ್ಯಾನಕ್ಕಾಗಿ ಬಳಸುತ್ತಿದ್ದರಂತೆ. ಇದು ಶಾಲ್ಮಲ ನದಿಗೆ ಹೊಂದಿಕೊಂಡಂತಿದ್ದು, ವಾದಿರಾಜ ಮಠದಿಂದ 5 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಧ್ಯಾನಕ್ಕೆ ಹೇಳಿ ಮಾಡಿಸಿದ ಸ್ಥಳವೆಂದು ಹೆಸರಾಗಿದೆ. ಇಲ್ಲಿ ಕೆಲವೊಂದು ಸ್ಮಾರಕಗಳಿದ್ದು ಅವು ಶ್ರೀ ವಾದಿರಾಜರು ಇಲ್ಲಿಗೆ ಹಯಗ್ರೀವ ಸ್ವಾಮಿಯನ್ನು ಪೂಜಿಸಲು ಬರುತ್ತಿದ್ದರೆಂಬುದನ್ನು ಪ್ರಮಾಣೀಕರಿಸುತ್ತವೆ.