ಶ್ರೀ ತ್ರಿವಿಕ್ರಮ ದೇವಾಲಯವು ಸೊಂದಾ ಗ್ರಾಮದ ಪ್ರಮುಖ ಆಕರ್ಷಣೆಯಾಗಿದೆ. ಈ ದೇವಾಲಯವು ರಾಮ ತ್ರಿವಿಕ್ರಮ ದೇವರಿಗಾಗಿ ಅರಸಪ್ಪ ನಾಯಕನಿಂದ ಕಟ್ಟಲ್ಪಟ್ಟಿತು ಎಂದು ನಂಬಲಾಗಿದೆ. ಹಾಗು ಇಲ್ಲಿನ ಪವಿತ್ರ ಬೃಂದಾವನವನ್ನು ಶ್ರೀ ವಾದಿರಾಜ ತೀರ್ಥರಿಗಾಗಿ ಶ್ರೀ ಭೂತರಾಜನು ಬದರಿಕಾಶ್ರಮದಿಂದ ತಂದನಂತೆ.ಅಲ್ಲದೆ ಈತನು ತನ್ನ ದಕ್ಷಿಣದ ಯಾತ್ರೆಯ ಸಮಯದಲ್ಲಿ ಹಲವಾರು ದಾನವರೊಂದಿಗೆ ರಥದ ಚಕ್ರದೊಂದಿಗೆ ಹೋರಾಡಿ ಕೊಂದನೆಂದು ಪ್ರತೀತಿ ಇದೆ. ಪ್ರವಾಸಿಗರು ಇಂದಿಗು ಇಲ್ಲಿನ ರಥಕ್ಕೆ ಕೇವಲ ಮೂರು ಚಕ್ರ ಇರುವುದನ್ನು ಮಾತ್ರ ನೋಡಬಹುದು.ಈ ದೇವಾಲಯದ ಗರ್ಭಗುಡಿಯಲ್ಲಿ ತ್ರಿವಿಕ್ರಮ ದೇವರ ಒಂದು ಮೂರ್ತಿಯಿದೆ. ಅಲ್ಲದೆ ಲಕ್ಷ್ಮಿ ದೇವಿಯ ಒಂದು ವಿಗ್ರಹ ಮತ್ತು ಒಂದು ರಥವು ಈ ದೇವಾಲಯದ ಮೂರು ಭಾಗಗಳಾಗಿವೆ. ಈ ದೇವಾಲಯದ ದಕ್ಷಿಣ ಭಾಗದಲ್ಲಿ ಈ ದೇವಾಲಯವಿರುವ ಭೂಮಿಯನ್ನು ಅರಸಪ್ಪ ನಾಯಕ ಮಂಜೂರು ಮಾಡಿದ ಕುರಿತು ಮತ್ತು ಅದಕ್ಕೆ ಸಂಬಂಧಪಟ್ಟ ಘಟನೆಗಳ ಕುರಿತಾದ ಶಿಲಾಶಾಸನವಿದೆ.