9,600 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿರುವ, ಚಂದ್ರ ಪ್ರಭ ಅಭಯಾರಣ್ಯ, ಉತ್ತರ ಪ್ರದೇಶದಲ್ಲಿ ಚಂದುಳ್ಳಿ/ಲಿ ವಿಂಧ್ಯ ಅರಣ್ಯ ವ್ಯಾಪ್ತಿಯಲ್ಲಿರುವ ವಿಜಯ ಘಡ ಮತ್ತು ನೌಘಡ ದಿಣ್ಣೆಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಅಭಯಾರಣ್ಯವನ್ನು, 1957 ಮೇ ತಿಂಗಳಿನಲ್ಲಿ ಸ್ಥಾಪಿಸಲಾಯಿತು. ಮೂರು ಏಷ್ಯಾದ ಸಿಂಹಗಳನ್ನು 1958 ರಲ್ಲಿ ಮೊದಲು ತರಲಾಯಿತು. 1969 ರ ಅಂತ್ಯದಲ್ಲಿ ಅವುಗಳ ಸಂಖ್ಯೆಯು ಅಧಿಕವಾಯಿತು. ದುರದೃಷ್ಟವಶಾತ್, 1970 ಇವು ಕಣ್ಮರೆಯಾದವು.
ಅಭಯಾರಣ್ಯವು ಇತರ ಜಾತಿಯ ಕಾಡು ಪ್ರಾಣಿಗಳಿಗು ಕೂಡ ನೆಲೆಯಾಗಿದೆ. ಚಿರತೆ, ನೀಲಿ ಜಿಂಕೆ, ಚಿಂಕಾರ, ಕೃಷ್ಣಮೃಗ, ಮೊಲ, ಸಾಂಬಾರ, ಮಂಗ, ಮುಳ್ಳುಹಂದಿ, ಕತ್ತೆಕಿರುಬ, ನರಿ, ಭಾರತೀಯ ಗಸೆಲ್, ಕಾಡು ಬೆಕ್ಕು ಮತ್ತು ಕಾಡು ಹಂದಿಗಳು ಇಲ್ಲಿವೆ.
ಈ ಪಕ್ಷಿ ಆವಾಸಸ್ಥಾನ, ಪಕ್ಷಿ ವೀಕ್ಷಕರಿಗೆ ಮತ್ತು ಪಕ್ಷಿವಿಜ್ಞಾನಿಗಳ ಒಂದು ಸ್ವರ್ಗವಾಗಿದೆ. ಇದು ಸುಮಾರು 150 ಜಾತಿ ಪಕ್ಷಿಗಳ ಒಂದು ನೆಲೆಯಾಗಿದೆ. ಈ ಅಭಯಾರಣ್ಯದಲ್ಲಿ ಕಾಡು ಸಸ್ಯಗಳ ಜೊತೆಗೆ ಹಲವಾರು ಔಷಧೀಯ ಸಸ್ಯಗಳಾದ ಸಾಗೂನ್, ಆಮಲೆಟ್ಸ್, ಮಹುವಾ, ಕೊರೈಯಾ, ಬೆರ್, ತೆಂಡು ಮೊದಲಾದವುಗಳನ್ನು ಒಳಗೊಂಡಿದೆ.
ಚಂದ್ರಪ್ರಭ ಮತ್ತು ಕಮ್ ನಶಾ ನದಿಗಳು ಅಭಯಾರಣ್ಯದ ಮೂಲಕ ಹರಿಯುವ ನದಿಗಳು, ವಿವಿಧ ತಳಿಯ ಮೀನುಗಳಿಗೆ ಆತಿಥ್ಯ ನೀಡುತ್ತದೆ. ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಅಭಯಾರಣ್ಯದಲ್ಲಿ ಜಲಪಾತಗಳು ಮತ್ತು ಸೊಂಪಾದ ಹಸಿರು ಪರಿಸರದ ನಡುವೆ ಅದ್ಭುತ ದೃಶ್ಯಗಳು ಪ್ರವಾಸಿಗರನ್ನು ಪ್ರವಾಸಿಗರನ್ನು ಸೆಳೆಯುತ್ತವೆ.