ಹೆಸರೇ ಹೇಳುವಂತೆ ದೇರಾ ಅಥವಾ ಬೆಳೆಯುವ ಸ್ಥಳವನ್ನು ಪ್ರಸಿದ್ದ ಸಂತ ಸೂಫಿ ಸಂತ ಬಾಬಾ ಭುಮಾನ್ ಅವರ ನೆನಪಾಗಿ ನಿರ್ಮಿಸಲಾಗಿದೆ. ಇದು ಹರ್ಯಾಣದ ಸಿರ್ಸಾ ಜಿಲ್ಲೆಯ ಸಂಗರ್ ಸದನ್ ನಲ್ಲಿದೆ. ದೇರಾದ ಹೆಚ್ಚಿನ ಹಿಂಬಾಲಕರು ಕಾಮಭೋಜ್ ಸಮುದಾಯದವರು ಯಾಕೆಂದರೆ ಬಾಬಾ ಭುಮಾನ್ ಅದೇ ಸಮುದಾಯದವರು.
ಬಾಬಾ ಭುಮಾನ್ ಶಾ, ಸಾಮಾನ್ಯವಾಗಿ ಕರೆಯಲ್ಪಡುವುದು ಬಾಬಾ ಭುಮಾನ್ ಎಂದು ಇವರು ಭಾರತದ ಪ್ರಭಾವಿ ಉದಾಸಿ ಸಂತರು. ಇವರು 14.04.1687ರಲ್ಲಿ ಈಗಿನ ಪಾಕಿಸ್ಥಾನದ ಭಾಗವಾಗಿರುವ ಓಕಾರ ಜಿಲ್ಲೆಯ ಬೆಹ್ಲೋಪುರ್ ನಲ್ಲಿ ಜನಿಸಿದರು. ಅವರ ಹೆಸರು ಭುಮಿಯಾ ಎಂದಿತ್ತು. ಇವರ ಪೋಷಕರು ಗುರು ನಾನಕರ ಭಕ್ತರು ಮತ್ತು ಉದಾಸಿಯ ಬಾಬಾ ಶ್ರೀಚಂದ್ ಪಂಥ್ ಅಥವಾ ಸಮುದಾಯವರು.
ಹುಟ್ಟಿನಿಂದಲೇ ಅತೀವ ಧಾರ್ಮಿಕ ಭಾವನೆಯಿಂದ ಕೂಡಿದ್ದ ಬಾಬಾ ಅವರು ಉದಾಸಿ ಪಂಥ್ ಗೆ ತೊಡಗಿಸಿ ಕೊಂಡಿದ್ದು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಪಾಕಪಟ್ಟಣದ ಬಾಬಾ ಪರೀಂ ದಾಸ್ ಅವರಿಂದಾಗಿ, ಇವರಿಗೆ ಈ ಹೆಸರು ನೀಡಿದ್ದು ಬಾಬಾ ಭುಮಾನ್ ಶಾ.
ಇವರು ಶುರುವಿನಲ್ಲಿ ತನ್ನ ಜ್ಞಾನರ್ಜನೆಯನ್ನು ಮತ್ತು ಸಹೋದರತ್ವವನ್ನು ವೃದ್ದಿಸಿಕೊಂಡಿದ್ದು ಕೀರ್ತನೆ ಮತ್ತು ಹೆಚ್ಚು ಹೊತ್ತು ಉಪವಾಸವಿರುವ ಮೂಲಕ. ನಂಬಿಕೆಯ ಪ್ರಕಾರ ಸಿಖ್ಖರ ಹತ್ತನೇ ಗುರು, ಶ್ರೀ ಗುರು ಗೋಬಿಂದ್ ಸಿಂಗ್ ಆಶೀರ್ವದಿಸಿ ಇನ್ನೂ ಅಭಿವೃದ್ದಿ ಕಂಡು, ಎಂದೂ ಯಾವುದಕ್ಕೂ ಕಮ್ಮಿಯಾಗುವುದಿಲ್ಲ ಎಂದಿದ್ದರು ಎನ್ನುವುದು ನಂಬಿಕೆ. ಬಾಬಾ 1762ರಲ್ಲಿ ನಿಧನರಾದರು, ಆದರೆ ಅವರ ಆಚಾರ ವಿಚಾರಗಳು ಅವರ ಉತ್ತರಾಧಿಕಾರಿಗಳು ಧಾರ್ಮಿಕವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ.
ದೇಶ ವಿಭಜನೆಯ ಮುನ್ನ, ಬಾಬಾ ಭುಮಾನ್ ಹಿಂಬಾಲಕರು ತಮ್ಮ ಡೇರೆಯನ್ನು ಸಿರ್ಸಾದಲ್ಲಿ ಹೂಡಿ ಗುರುಗಳು ಹಾಕಿಕೊಟ್ಟ ತತ್ವನ್ನು ಪಾಲಿಸಿಕೊಂಡು ಬಂದರು.