ದೇರಾ ಜೀವನ್ ನಗರ್ ಸಿರ್ಸಾದ ಪಶ್ಚಿಮದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿದೆ. ಇದು ನಂಬಾದ್ರಿ ಸಮುದಾಯದ ಧಾರ್ಮಿಕ ಕೇಂದ್ರ. ನಾಮ ಧರಿಸುವವರು, ಪಠಿಸುವವರು ಅಥವಾ ದೇವರ ಗುರುಗಳು ಭೋದಿಸುವ ಮತ್ತು ಅವರ ಆದೇಶದಂತೆ ಭಜನೆ ಮಾಡಿ ಶಾಂತಿಯ ಬದುಕನ್ನು ಕಾಣುವ ನಂಬಾದ್ರಿಗಳು ಅಥವಾ ಪವಿತ್ರ ಹೆಸರು ಇಟ್ಟುಕೊಂಡವರು.
ನಂಬಾದ್ರಿ ಸಮುದಾಯದ ದೇರಾ ಅಥವಾ ಡೇರೆಗಳಿರುವ ಪ್ರದೇಶವನ್ನು ಈ ಹಿಂದೆ ಚಿಚಾಲ್ ಎನ್ನುತ್ತಿದ್ದರು. ಈಗಿನ ಹೆಸರು ಬರುವ ಮೊದಲು ಜೀವನ್ ಕೌರ್, ದಿವಂಗತ ಪ್ರತಾಪ್ ಸಿಂಗ್ ಅವರ ತಾಯಿ, ನಂಬಾದ್ರಿ ಸನ್ಯಾಸಿನಿ. ಇವರ ಹೆಚ್ಚಿನ ಅನುಯಾಯಿಗಳು ಪಾಕಿಸ್ಥಾನದ ಶೇಖಪುರ್, ಸಿಯಾಲ್ ಕೋಟ್ ಮತ್ತು ಗುಜ್ರನವಾಲ ಜಿಲ್ಲೆಯವರು. ಅವರೆಲ್ಲಾ ದೇಶ ವಿಭಜನೆಯ ನಂತರ ಪಾಕಿಸ್ಥಾನದ ನಿವಾಸಿಗಳಾದರು.
ಗುರ್ಬಾನಿ ಅಥವಾ ಗುರುಗ್ರಂಥ ಸಾಹೇಬ್ ಪಠಿಸುವವರ ಕಾಲಕಾಲಕ್ಕೆ ಸಮೂಹ ಪ್ರಾರ್ಥನೆ ಇಲ್ಲಿ ಆಯೋಜಿಸಲಾಗುತ್ತದೆ. ಇದನ್ನೆಲ್ಲಾ ನಂಬಾದ್ರಿ ಸಮುದಾಯದ ಪದ್ದತಿಯಂತೆ ನಡೆಯುತ್ತದೆ.
ಹೋಲ ವಾರ್ಷಿಕ ಉತ್ಸವ ಈ ಕೇಂದ್ರದಲ್ಲಿ ಧಾರ್ಮಿಕ ಶ್ರದ್ದೆಯಿಂದ, ಭಕ್ತಿಪೂರ್ವಕವಾಗಿ ಚೇಟ್ ಬಾದಿ ಒಂದು ಸಲುವಾಗಿ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಈ ಉತ್ಸವದ ಸಮಯದಲ್ಲಿ ಪ್ರಮುಖವಾಗಿ ಆಯೊಜಿಸಲಾಗುವುದು ಸಾಮೂಹಿಕ ವಿವಾಹ, ಈ ವಿವಾಹವನ್ನು ಹನ್ನೊಂದು ರೂಪಾಯಿ ಖರ್ಚಿನಲ್ಲಿ ಆಯೋಜಿಸಲಾಗುತ್ತದೆ.