ನಾಥ್ ಅನುಯಾಯಿಗಳು ಇವರನ್ನು ಶಿವನ ಆರಾಧಾಕರು ಎನ್ನಲಾಗುತ್ತದೆ. ಇವರು ಡೇರೆ, ಗುಡಿಸಳು, ದೇವಾಲಯಗಳನ್ನು ನಿರ್ಮಿಸಿ ಇಲ್ಲಿ ನೆಲೆಸಿರುತ್ತಾರೆ. ಈ ರೀತಿಯ ಒಂದು ದೇವಾಲಯವನ್ನು ಹದಿಮೂರನೇ ಶತಮಾನದಲ್ಲಿ ನಿರ್ಮಿಸಿದ್ದು ಅದೇ ಸಿರ್ಸಾದ ಹಿಸಾರ್ ಗೇಟ್. ಈ ದೇವಾಲಯವನ್ನು ಸಾರ್ಸಿ ನಾಥ್, ಪ್ರಮುಖ ಸನ್ಯಾಸಿ, ನಾಥ್ ಸಮುದಾಯದ ಗುರು ನಿರ್ಮಿಸಿ ಶಿವನನ್ನು ತನ್ನ ಅನುಯಾಯಿಗಳೊಂದಿಗೆ ಪೂಜಿಸುತ್ತಿದ್ದ.
ಸಿರ್ಸಾದ ಭೋಜಾದಲ್ಲಿ ನೆಲೆ ಸಿಕ್ಕಂತೆ, ನೀಲಕಂಠ ಪಶುಪತಿ ಸಮುದಾಯದ ಸನ್ಯಾಸಿ ಯೋಗೀಶ್ವರನಿಗೆ ಅರ್ಪಿತವಾಗುವ ಶಿವನ ದೇವಾಲಯವನ್ನು ಇಟ್ಟಿಗೆ ಮತ್ತು ಗಟ್ಟಿ ಕಲ್ಲಿನಿಂದ ನಿರ್ಮಿಸಿದ್ದ.ಇದನ್ನು ಎಂಟನೇ ಅಥವಾ ಒಂಬತ್ತನೇ ಶತಮಾನದಲ್ಲಿ ನಿರ್ಮಿಸಿದ್ದ ಎನ್ನುವುದು ನಂಬಿಕೆ. ಈ ದೇವಾಲಯದಲ್ಲಿ ಚಿನ್ನದ ಶಿಖರ ಅಥವಾ ಕಳಸವಿದೆ. ಬಾಬಾ ಸಾರ್ಸಿ ನಾಥ್ ನಿರ್ಮಿಸಿದ ಈ ದೇವಾಲಯಕ್ಕ್ ಬೇರೆ ಹೋಲಿಕೆಯಿಲ್ಲ.
ನಂಬಿಕೆಯ ಪ್ರಕಾರ ಮೊಘಲ್ ಅರಸ ಶಾಹಜಾನ್ ದೇರಾ ಸಾಹೇಬ್ ಶಾರ್ಸಿ ನಾಥಿಗೆ ಬಂದು ಕಳೆದು ಹೋದ ಮಗನಿಗಾಗಿ ದೇವರ ಆಶೀರ್ವಾದ ಪಡೆಯುತ್ತಿದ್ದ. ಶಾಹಜಾನ್ ಈ ದೇವಾಲಯಕ್ಕೆ ಜಮೀನು ಮತ್ತು ಕಳಸವನ್ನು ನಿರ್ಮಿಸಿ ಕೊಟ್ಟಿದ್ದ. ಅರೇಬಿಕ್ ಭಾಷೆಯಲ್ಲಿ ಅರಸನು ಇಲ್ಲಿಗೆ ಭೇಟಿ ನೀಡಿದ್ದ ಬಗ್ಗೆ ಸುಂದರವಾದ ಲೇಖನವಿದೆ. ಈ ದೇವಾಲಯದಲ್ಲಿ ಮಾತಾ ದುರ್ಗೆಯ ದೇವಾಲಯವು ಶಿವ ದೇವಾಲಯದ ಹಿಂಬದಿಯಲ್ಲಿದೆ.