ತುರ್ತುರಿಯವು ಒಂದು ಸಣ್ಣ ಹಳ್ಳಿ. ಇದು ಸಿರ್ಪುರದಿಂದ 24 ಕಿಮೀ ದೂರದಲ್ಲಿ ತುರ್ತುರಿಯ ಎನ್ನುವ ಝರಿಯ ಸಮೀಪವಿದೆ. ಈ ಝರಿಯನ್ನು ಸುರ್ಸುರಿ ಗಂಗಾ ಎಂದು ಕೂಡ ಕರೆಯಲಾಗುತ್ತದೆ. ಈ ಪ್ರದೇಶವು ಬೌದ್ಧ ಮತ್ತಿತರ ಅವಶೇಷಗಳಿಗೆ ಪ್ರಸಿದ್ಧವಾಗಿದೆ. ಇದೊಂದು ಅರಣ್ಯ ಪ್ರಾಂತ್ಯ.
ಈ ಅವಶೇಷಗಳ ಮುಖ್ಯಭಾಗವು ಕೆತ್ತಿರು ಸ್ತಂಭಗಳು, ಇಟ್ಟಿಗೆಗಳಿಂದ ಕಟ್ಟಿದ ಬೌದ್ಧ ಸ್ತೂಪಗಳು, ಚತುರ್ಭುಜನಾದ ವಿಷ್ಣುವಿನ ಪ್ರತಿಮೆ, ಗಣೇಶನ ಹಲವು ವಿಗ್ರಹಗಳು ಮತ್ತು ಸ್ನಾನ ಘಟ್ಟಗಳ ಹಲವು ಕುರುಹುಗಳನ್ನು ಹೊಂದಿದೆ.
ಇಲ್ಲಿ ವಾಲ್ಮೀಕಿ ಆಶ್ರಮವಿದ್ದು ಇಲ್ಲಿ ವೈಶಾಖ ಪೂರ್ಣಿಮ ಮತ್ತು ಅಮಾವಾಸ್ಯೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.