ಮಹಾನದಿಯ ದಂಡೆಯ ಮೇಲಿರುವ ಈ ದೇವಾಲಯವು ಪ್ರಸಿದ್ಧ ಪ್ರವಾಸಿ ತಾಣ. ಈ ದೇವಾಲಯವನ್ನು ಈ ಪ್ರದೇಶದಲ್ಲಿನ ವಿವಿಧ ದೇವಾಲಯಗಳು ಮತ್ತು ವಿಹಾರಗಳ ಅವಶೇಷಗಳನ್ನು ಬಳಸಿ ಕಟ್ಟಲಾಗಿದೆ. ಇದೇ ಕಾರಣಕ್ಕೆ ಈ ದೇವಾಲಯದೊಳಗೆ ವಿವಿಧ ಬಗೆಯ ವಾಸ್ತುಕಲೆ ಮತ್ತು ಕೆತ್ತನೆಗಳನ್ನು ಕಾಣಬಹುದಾಗಿದೆ.
ವಿವಿಧ ದೇವಾಲಯಗಳ ಅವಶೇಷಗಳು ಒಟ್ಟಾಗಿ ಈ ದೇಗುಲದ ಅಂದವನ್ನು ಹೆಚ್ಚಿಸಿದೆ ಮತ್ತು ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ದೇವಾಲಯವು ಬುದ್ಧನ ವಿಗ್ರಹವನ್ನು ಹೊಂದಿದ್ದು ಇದು ಭೂಮಿಯನ್ನು ಮುಟ್ಟುತ್ತದೆ. ಇದರೊಂದಿಗೆ ನಟರಾಜ, ಗರುಡ ನಾರಾಯಣನ ವಿಗ್ರಹಗಳನ್ನು, ಶಿವ ಲೀಲೆಯ ಚಿತ್ರಗಳನ್ನು, ರಾವಣನ ಮುಖದ ಅಪರೂಪದ ಚಿತ್ರವನ್ನು, ಮಹಿಷಾಸುರ ಮರ್ಧಿನಿ ಇತ್ಯಾದಿಗಳನ್ನು ಒಳಗೊಂಡಿದೆ.