ಪೆರುಮಾಳ್ ಕಾಳೀಸಿರಮ ವಿನ್ನಗರಂ ದೇವಾಲಯವು ಸೀರ್ಕಾಳಿಯಲ್ಲಿರುವ ಒಂದು ವಿಷ್ಣು ಅಥವಾ ನಾರಾಯಣನ ದೇವಾಲಯವಾಗಿದೆ. ಈ ದೇವಾಲಯವನ್ನು ಆಳ್ವಾರ್ ಸಂತರು ಆರಾಧಿಸುತ್ತಿದ್ದ "ದಿವ್ಯ ದೇಸಂ" ಅಂದರೆ 108 ದೇವಾಲಯಗಳ ಪೈಕಿ ಒಂದಾಗಿ ಪರಿಗಣಿಸಲಾಗಿದೆ. ಈ ದೇವಾಲಯವು ಸೀರ್ಕಾಳಿ ರೈಲು ನಿಲ್ದಾಣದಿಂದ ಕೇವಲ ಅರ್ಧ ಮೈಲು ದೂರದಲ್ಲಿದೆ.
ಈ ದೇವಾಲಯದಲ್ಲಿ ಭಗವಾನ್ ವಿಷ್ಣುವು ವಾಮನ ಅವತಾರದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದಾನೆ. ಈ ವಿಗ್ರಹವು ಈ ದೇವಾಲಯದ ಗರ್ಭಗುಡಿಯಲ್ಲಿದೆ. ಈ ದೇವರು ಒಂದು ಕೈಯಲ್ಲಿ ಭಿಕ್ಷಾಪಾತ್ರೆ ಮತ್ತು ಎಡಗೈಯಲ್ಲಿ ಒಂದು ಛತ್ರಿಯನ್ನು ಹೊಂದಿದೆ. ತನ್ನ ಕುತ್ತಿಗೆಯ ಸುತ್ತ ಸಾಲಿಗ್ರಾಮದ ಮಾಲೆಯನ್ನು ಹಾಕಿಕೊಂಡಿರುವಂತಿದೆ. ಇದಕ್ಕೆ ಸಮೀಪದಲ್ಲಿ ಸಂತ ತಿರುಮಂಗೈ ಆಳ್ವಾರ್ ರವರ ವಿಗ್ರಹವಿದೆ. ಈ ವಿಗ್ರಹಕ್ಕೆ ಕಾಲಿಗೆ ಕಡಗ ಮತ್ತು ಪಾದಕ್ಕೆ ವೆಲ್ ಇದೆ.
ವಾಸ್ತು ಪೂಜೆಯನ್ನು ಮಾಡುವವರು ಈ ದೇವಾಲಯಕ್ಕೆ ಒಂದು ಹಿಡಿ ಮಣ್ಣನ್ನು ಈ ಸಂತರ ಪಾದಗಳಿಗೆ ಸಮರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಅದೃಷ್ಟ ಮತ್ತು ಯಶಸ್ಸು ಅವರಿಗೆ ಲಭಿಸುತ್ತದೆ ಎಂದು ನಂಬಲಾಗಿದೆ. ಈ ದೇವಾಲಯದ ಪ್ರಾಕಾರದಲ್ಲಿ ರಾಮನನ್ನು ಮತ್ತು ಹೊರಗಿನ ಆವರಣದಲ್ಲಿ ಆಂಜನೇಯನ ವಿಗ್ರಹವನ್ನು ಕಾಣಬಹುದು.