ಗಂಗಾಧರ ಎಂಬುವ ಶಾಶ್ವತವಾಗಿ ಹರಿಯುವ ತೊರೆಯು ಸಿಂಹಾಚಲದಲ್ಲಿದ್ದು, ಪ್ರತಿವರ್ಷವು ಸಹಸ್ರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದೊಂದು ಪುಷ್ಕರಣಿ ಅಥವಾ ಪವಿತ್ರ ತೀರ್ಥ ಸ್ನಾನ ಮಾಡುವ ಕೆರೆಯಾಗಿದ್ದು, ಒಂದು ಗುಡ್ಡದ ಮೇಲೆ ನೆಲೆಗೊಂಡಿದೆ. ಈ ತೊರೆಯಿಂದ ಹರಿಯುವ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಭಕ್ತಾಧಿಗಳು ಇಲ್ಲಿಗೆ ಆಗಮಿಸಿ ಪವಿತ್ರ ಸ್ನಾನ ಮಾಡುತ್ತಾರೆ.
ಈ ನೀರಿನಲ್ಲಿರುವ ದೈವಿಕ ಶಕ್ತಿಯು ಹಲವಾರು ರೋಗರುಜಿನಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗುತ್ತದೆ. ಈ ಕಾರಣಕ್ಕಾಗಿ ಭಕ್ತಾಧಿಗಳು ಸಿಂಹಾಚಲಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡಿ, ತಮ್ಮ ಎಲ್ಲ ಪಾಪ ಕರ್ಮಗಳಿಂದ ವಿಮುಕ್ತರಾಗಲು ಬಯಸುತ್ತಾರೆ. ಈ ತೊರೆಯು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಪ್ರಸಿದ್ಧತೆಯನ್ನು ಪಡೆಯುತ್ತಿದೆ.